2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ
ನವದಹೆಲಿ, ಜನವರಿ 25: ಕರ್ನಾಟಕದ ಇಬ್ಬರು ಸಾಧಕರನ್ನು ಸೇರಿ ಒಟ್ಟು 21 ಮಂದಿಗೆ ಪದ್ಮಶ್ರೀ ಗೌರವ ಪ್ರಾಪ್ತಿಯಾಗಿದೆ.
ಶನಿವಾರ ಕೇಂದ್ರ ಸರ್ಕಾರವು ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು, ಶಿಕ್ಷಣ, ಸೇವೆ, ಪರಿಸರ, ಕಲೆ ಸೇರಿ ಅನೇಕ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರ್ನಾಟಕದ ಅಕ್ಷರ ಸಂತ, ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೆಕಲ ಹಾಜಬ್ಬ ಹಾಗೂ ಅರಣ್ಯ ರಕ್ಷಕಿ ತುಳಸಿ ಗೌಡ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬೀದಿಯಲ್ಲಿ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದವಗೆ ಪದ್ಮಶ್ರೀ ಗೌರವ
2020 ನೇ ಸಾಲಿನ ಪದ್ಮಶ್ರೀ ಗೌರವಕ್ಕೆ ಪ್ರಾಪ್ತರಾದವರ ಪಟ್ಟಿ ಇಲ್ಲಿದೆ
1) ಹರೆಕಳ ಹಾಜಬ್ಬ (ಶಿಕ್ಷಣ)
2) ತುಳಸಿ ಗೌಡ (ಪರಿಸರ)
3) ಜಗದೀಶ್ ಲಾಲ್ ಅಹುಜಾ (ಸಮಾಜ ಸೇವೆ)
4) ಮೊಹಮ್ಮದ್ ಶರೀಫ್ (ಸೇವೆ)
5) ಜಾವೇದ್ ಅಹ್ಮದ್ ತಕ್ (ಅಂಗವಿಕಲರ ಕಲ್ಯಾಣ)
6) ಸತ್ಯನಾರಾಯಣ್ ಮುಂದಯೂರ್ (ಶಿಕ್ಷಣ)
7) ಅಬ್ದುಲ್ ಜಬ್ಬಾರ್ (ಸೇವೆ)
8) ಉಚಾ ಚುಮಾರ್ (ನೈರ್ಮಲ್ಯ)
9) ಪೋಪಟ್ರಾವ್ ಪವಾರ್ (ನೀರು)
10) ಅರುಣೋದಯ್ ಮಂಡಲ್ (ಆರೋಗ್ಯ)
11) ರಾಧಾಮೋಹನ್ ಮತ್ತು ಸಬರಮತಿ (ಸಾವಯವ ಕೃಷಿ)
12) ಕುಶಾಲ್ ಕೋನ್ವಾರ್ ಶರ್ಮಾ (ಪಶುವೈದ್ಯಕೀಯ)
13) ಟ್ರಿನಿಟಿ ಸೈಯೂ (ಸಾವಯವ ಕೃಷಿ)
14) ರವಿ ಕಣ್ಣನ್ (ವೈದ್ಯಕೀಯ)
15) ಎಸ್.ರಾಮಕೃಷ್ಣನ್ (ಅಂಗವಿಕಲ ಕಲ್ಯಾಣ)
16) ಸುಂದರಂ ವರ್ಮಾ (ಪರಿಸರ ಮತ್ತು ಅರಣ್ಯೀಕರಣ)
17) ಮುನ್ನಾ ಮಾಸ್ಟರ್ (ಕಲೆ-ಭಜನೆ)
18) ಯೋಗಿ ಏರನ್ (ವೈದ್ಯಕೀಯ)
19) ರಹೀಬಾಯಿ ಸೋಮಾ ಪೋಪರೆ (ಸಾವಯವ ಕೃಷಿ)
20) ಹಿಮ್ಮತ್ ರಾಮ್ ಬಾಂಬೂ (ಪರಿಸರ)
21) ಮೂಜಿಕಲ್ ಪಂಕಜಾಕ್ಞಿ (ಕಲೆ)












Click it and Unblock the Notifications