Get Updates
Get notified of breaking news, exclusive insights, and must-see stories!

Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು

Election Commission: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ಬೆಳವಣಿಗೆಗಳು ನಡೆದಿವೆ. ಏಪ್ರಿಲ್ 9ರ ಗುರುವಾರ ಅಸ್ಸಾಂ, ಕೇರಳಂ ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ನಡುವೆ ಭಾರತೀಯ ಚುನಾವಣಾ ಆಯೋಗವು ಮಾಡಿರುವ ಟ್ವೀಟ್‌ವೊಂದು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಭಾರತೀಯ ಚುನಾವಣಾ ಆಯೋಗದ ಈ ಟ್ವೀಟ್ ಹೆಚ್ಚು ಬಿಜೆಪಿ ಪಕ್ಷದ ಟ್ವೀಟ್ ಮಾದರಿಯಲ್ಲೇ ಇದೆ ಎಂದು ವಿರೋಧ ಪಕ್ಷಗಳು ಹೇಳಿವೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗವು ಮಾಡಿರುವ ಟ್ವೀಟ್‌ನಲ್ಲಿ ಏನಿದೆ ಹಾಗೂ ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಏಕೆ ಎನ್ನುವ ವಿವರ ಇಲ್ಲಿದೆ.

ಭಾರತೀಯ ಚುನಾವಣಾ ಆಯೋಗವು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಚುನಾವಣಾ ಆಯೋಗದ ಅಂತಿಮ ಎಚ್ಚರಿಕೆ ಎನ್ನುವ ಶೀರ್ಷಿಕೆಯೊಂದಿಗೆ ಪೋಸ್ಟ್‌ವೊಂದನ್ನು ಮಾಡಿದೆ. ಅದರಲ್ಲಿ ಈ ಬಾರಿಯ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಭಯ-ಮುಕ್ತ, ಹಿಂಸಾಚಾರ-ಮುಕ್ತ, ಬೆದರಿಕೆ-ಮುಕ್ತ, ಪ್ರೇರಣೆ-ಮುಕ್ತ, ದಾಳಿ-ಮುಕ್ತ, ಬೂತ್ ಮತ್ತು ಮೂಲ ಜಾಮಿಂಗ್-ಮುಕ್ತವಾಗಿರುತ್ತವೆಯೇ?

Election Commission

ತೃಣಮೂಲ ಕಾಂಗ್ರೆಸ್‌ನೊಂದಿಗೆ ಇಸಿಐ ನೇರ ಮಾತುಕತೆ ಈ ಬಾರಿ, ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಖಂಡಿತವಾಗಿಯೂ ಹೀಗಿರುತ್ತವೆ:

ಭಯ-ಮುಕ್ತ, ಹಿಂಸಾಚಾರ-ಮುಕ್ತ, ಬೆದರಿಕೆ-ಮುಕ್ತ, ಪ್ರೇರಣೆ-ಮುಕ್ತ ಮತ್ತು ಯಾವುದೇ ದಾಳಿ, ಬೂತ್ ಜಾಮಿಂಗ್ ಮತ್ತು ಮೂಲ ಜಾಮಿಂಗ್ ಇಲ್ಲದೆ ಎನ್ನುವ ಟ್ವೀಟ್ ಮಾಡಲಾಗಿದೆ. ನೇರವಾಗಿ ಒಂದು ಪಕ್ಷವನ್ನು ಗುರಿಯಾಗಿಸಿಕೊಂಡು ಈ ಟ್ವೀಟ್ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ.

3 States Election: ಅಸ್ಸಾಂ, ಕೇರಳಂ - ಪುದುಚೇರಿ ವಿಧಾನಸಭೆ ಚುನಾವಣೆ: ಕರ್ನಾಟಕದ ರಾಜಕಾರಣಿಗಳು ಹೇಳಿದ್ದೇನು
3 States Election: ಅಸ್ಸಾಂ, ಕೇರಳಂ - ಪುದುಚೇರಿ ವಿಧಾನಸಭೆ ಚುನಾವಣೆ: ಕರ್ನಾಟಕದ ರಾಜಕಾರಣಿಗಳು ಹೇಳಿದ್ದೇನು

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ವಿರೋಧ

ಇನ್ನು ಈ ಟ್ವೀಟ್‌ಗೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು, ಪಶ್ಚಿಮ ಬಂಗಾಳದಲ್ಲಿ ಪ್ರಚಾರದ ಸಮಯವನ್ನು 20 ಗಂಟೆಗಳ ಕಾಲ ಕಡಿತಗೊಳಿಸಿದ್ದಕ್ಕಾಗಿ ಚುನಾವಣಾ ಆಯೋಗವನ್ನು ಟೀಕಿಸಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಬೆಂಬಲ ನೀಡಿದ್ದಾರೆ. ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್, ಚುನಾವಣಾ ಆಯೋಗವು "ಆಡಳಿತ ಪಕ್ಷ" ಕ್ಕೆ ವಿಭಿನ್ನ ನಿಯಮಗಳನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ಒಂಬತ್ತು ಕ್ಷೇತ್ರಗಳಲ್ಲಿ ಪ್ರಚಾರದ ಮೇಲೆ ನಿಷೇಧ. ಪ್ರತಿಪಕ್ಷಗಳಿಗೆ ಒಂದು ನಿಯಮ ಮತ್ತು ಆಡಳಿತ ಪಕ್ಷಕ್ಕೆ ಇನ್ನೊಂದು ನಿಯಮಗಳಿವೆ. ಅತ್ಯಂತ ಖಂಡನೀಯ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಭಾರತದ ಚುನಾವಣಾ ಇತಿಹಾಸದಲ್ಲಿ ಇದು ಮೊದಲ ಕ್ರಮ, ಕೇಸರಿ ಪಕ್ಷದ ಮುಖ್ಯಸ್ಥ ಅಮಿತ್ ಶಾ ಅವರ ರೋಡ್‌ಶೋ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಹಿಂಸಾಚಾರ ನಡೆದ ನಂತರ, ಚುನಾವಣಾ ಆಯೋಗವು ಬುಧವಾರ ಒಂಬತ್ತು ಪಶ್ಚಿಮ ಬಂಗಾಳ ಕ್ಷೇತ್ರಗಳಲ್ಲಿ ಪ್ರಚಾರವನ್ನು ಗುರುವಾರ ರಾತ್ರಿ 10 ಗಂಟೆಗೆ ಕೊನೆಗೊಳಿಸುವಂತೆ ಆದೇಶ ಮಾಡಿತ್ತು.

Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ

ಮೇ 19 ರಂದು ನಡೆದ ಕೊನೆಯ ಹಂತದ ಚುನಾವಣೆಗೆ ಚುನಾವಣಾ ಆಯೋಗವು ಸಂವಿಧಾನದ 324 ನೇ ವಿಧಿಯನ್ನು ಬಳಸಿಕೊಂಡು ಪ್ರಚಾರವನ್ನು ಮೊಟಕುಗೊಳಿಸಿತ್ತು. ಸ್ಟಾಲಿನ್ ಈ ಹಿಂದೆ ಕೋಲ್ಕತ್ತಾದಲ್ಲಿ ಟಿಎಂಸಿ ಪ್ರಾಯೋಜಿತ ವಿರೋಧ ಪಕ್ಷಗಳ ಮೆಗಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಚುನಾವಣಾ ಆಯೋಗದ ಟ್ವೀಟ್‌ಗೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇನ್ನು ಅರವಿಂದ್ ಕೇಜ್ರಿವಾಲ್ ಅವರು, ಚುನಾವಣಾ ಆಯೋಗವು ಬಿಜೆಪಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಬಿಜೆಪಿಯಿಂದ ನೇರ ಸೂಚನೆಗಳನ್ನು ಪಡೆಯುತ್ತಿದೆ ಎಂದು ಈಗ ಹೇಳಬೇಕಾಗಿಲ್ಲ. ಇದು ಈಗ ಬಹಿರಂಗವಾಗಿದೆ ಮತ್ತು ಅತ್ಯಂತ ದುರದೃಷ್ಟಕರ. ಕನಿಷ್ಠ ಪಕ್ಷ, ಅಂತಹ ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ, ಅಂತಹ ಪ್ರಮುಖ ಸಂಸ್ಥೆಯ ಖ್ಯಾತಿಯನ್ನು ಸಾರ್ವಜನಿಕವಾಗಿ ಹಾಳು ಮಾಡಬೇಡಿ ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+