Cigarettes, Pan Masala Price: ಇಂದಿನಿಂದಲೇ ಸಿಗರೇಟು, ಪಾನ್ ಮಸಾಲಾ ದುಬಾರಿ: ಬಾಯಿ ಜೊತೆ ಜೇಬು ಸುಡಲಿದೆ ಈ ದರಗಳು
Cigarettes, Pan Masala Price: ಹೊಸ ಅಬಕಾರಿ ಸುಂಕ ಜಾರಿಗೆ ಬಂದ ಹಿನ್ನೆಲೆ ಇಂದಿನಿಂದ ಸಿಗರೇಟು ಮತ್ತು ಪಾನ್ ಮಸಾಲಾ ಉತ್ಪನ್ನಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕೇಂದ್ರ ಬಜೆಟ್ 2026 ಮಂಡನೆಗೂ ಮುನ್ನವೇ ಇವುಗಳ ದರ ದುಬಾರಿಯಾಗಿದೆ. ಹಾಗಾದ್ರೆ, ಯಾವುದರ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸರ್ಕಾರ ವಿಧಿಸಿರುವ ಹೆಚ್ಚುವರಿ ಸುಂಕದ ಪರಿಣಾಮವಾಗಿ ತಂಬಾಕು ಉತ್ಪನ್ನಗಳ ದರದಲ್ಲಿ ಹೆಚ್ಚಳವಾಗಿದ್ದು, ಇದರಿಂದ ವ್ಯಸನಿಗಳ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿನಿಂದ (ಫೆಬ್ರವರಿ 1) ಸಿಗರೇಟು, ತಂಬಾಕು ಮತ್ತು ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈಗಾಗಲೇ ಅತಿ ಹೆಚ್ಚು ಜಿಎಸ್ಟಿ (GST) ಶ್ರೇಣಿಯಲ್ಲಿ ತೆರಿಗೆ ವಿಧಿಸಲಾಗುತ್ತಿದ್ದ ಈ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಹಾಗೂ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಅನ್ನು ವಿಧಿಸಲಾಗಿದೆ.
ಈ ಕ್ರಮದೊಂದಿಗೆ ತಂಬಾಕು ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ಮತ್ತು ಭದ್ರತೆ ಸಂಬಂಧಿತ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಈ ಕ್ರಮವು 2017ರಲ್ಲಿ ಜಿಎಸ್ಟಿ ಜಾರಿಗೆ ಬಂದ ಬಳಿಕ "ಸಿನ್ ಗುಡ್ಸ್" ಎಂದು ಕರೆಯಲಾಗುವ ಉತ್ಪನ್ನಗಳ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ನಡೆದ ಅತ್ಯಂತ ಮಹತ್ವದ ಹಾಗೂ ದೊಡ್ಡ ಮಟ್ಟದ ಬದಲಾವಣೆಯಾಗಿ ಪರಿಗಣಿಸಲಾಗುತ್ತಿದೆ.
ಹೊಸ ಪರಿಷ್ಕೃತ ತೆರಿಗೆ ರಚನೆಯಡಿ, ಈಗಿರುವ 28 ಶೇಕಡಾ ಜಿಎಸ್ಟಿ ಹಾಗೂ ಪರಿಹಾರ ಸೆಸ್ ಬದಲು 40 ಶೇಕಡಾ ಜಿಎಸ್ಟಿ ವಿಧಿಸಲಾಗುತ್ತದೆ. ಇದರ ಜೊತೆಗೆ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಎಕ್ಸೈಸ್ ಸುಂಕ ಹಾಗೂ ಪಾನ್ ಮಸಾಲಾಗೆ ಪ್ರತ್ಯೇಕ ಸೆಸ್ ಜಾರಿಗೆ ತರಲಾಗಿದೆ.
ಅಲ್ಲದೆ, ಚ್ಯೂಯಿಂಗ್ ತಂಬಾಕು, ಫಿಲ್ಟರ್ ಖೈನಿ, ಜರ್ದಾ ಸುಗಂಧಿತ ತಂಬಾಕು ಹಾಗೂ ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳಿಗೆ ಹೊಸ ಎಂಆರ್ಪಿ (ಗರಿಷ್ಠ ಚಿಲ್ಲರೆ ಬೆಲೆ) ಆಧಾರಿತ ಮೌಲ್ಯ ನಿರ್ಧಾರ ವ್ಯವಸ್ಥೆಯನ್ನು ಸರ್ಕಾರ ಅಧಿಸೂಚನೆ ಮೂಲಕ ಜಾರಿಗೆ ತಂದಿದೆ.
ಫೆಬ್ರವರಿ 1ರಿಂದ ಈ ಉತ್ಪನ್ನಗಳ ಮೇಲೆ ವಿಧಿಸಲಾಗುವ ಜಿಎಸ್ಟಿ, ಪ್ಯಾಕೆಟ್ ಮೇಲೆ ಘೋಷಿಸಿರುವ ಚಿಲ್ಲರೆ ಮಾರಾಟ ಬೆಲೆಯ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಕಡಿಮೆ ಮೌಲ್ಯ ತೋರಿಸಿ ತೆರಿಗೆ ತಪ್ಪಿಸುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ.
ಯಾವ ಸಿಗರೇಟ್ಗೆ ಎಷ್ಟು ದರ?: ಸಿಗರೇಟುಗಳ ಮೇಲೆ ಉದ್ದದ ಆಧಾರದಲ್ಲಿ ಎಕ್ಸೈಸ್ ಸುಂಕ ವಿಧಿಸಲಾಗುತ್ತದೆ. 65 ಮಿ.ಮೀ.ವರೆಗೆ ಇರುವ ಚಿಕ್ಕ ನಾನ್-ಫಿಲ್ಟರ್ ಸಿಗರೇಟುಗಳಿಗೆ ಪ್ರತಿ ಸ್ಟಿಕ್ಗೆ ಸುಮಾರು 2.05 ರೂಪಾಯಿ ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ.
ಚಿಕ್ಕ ಫಿಲ್ಟರ್ ಸಿಗರೇಟುಗಳಿಗೆ ಸುಮಾರು 2.10 ರೂಪಾಯಿ ಸುಂಕ ಇರಲಿದೆ. 65-70 ಮಿ.ಮೀ. ಉದ್ದದ ಸಿಗರೇಟುಗಳಿಗೆ ಪ್ರತಿ ಸ್ಟಿಕ್ಗೆ 3.6 ರಿಂದ 4 ರೂಪಾಯಿವರೆಗೆ, 70-75 ಮಿ.ಮೀ. ಉದ್ದದ ಸಿಗರೇಟುಗಳಿಗೆ ಸುಮಾರು 5.4 ರೂಪಾಯಿ ಸುಂಕ ವಿಧಿಸಲಾಗುತ್ತದೆ. ವಿಶೇಷ ವಿನ್ಯಾಸದ ಸಿಗರೇಟುಗಳಿಗೆ ಗರಿಷ್ಠ 8.50 ರೂಪಾಯಿ ಪ್ರತಿ ಸ್ಟಿಕ್ಗೆ ಸುಂಕ ವಿಧಿಸಲಾಗಿದೆ.
ಪಾನ್ ಮಸಾಲ ಮೇಲಿನ ಸುಂಕದ ವಿವರ: ಮತ್ತೊಂದೆಡೆ ಚ್ಯೂಯಿಂಗ್ ಟೊಬ್ಯಾಕೊ ಮತ್ತು ಜರ್ದಾ ಸುಗಂಧಿತ ತಂಬಾಕುಗಳ ಮೇಲೆ 82 ಶೇಕಡಾ ಎಕ್ಸೈಸ್ ಸುಂಕ ವಿಧಿಸಲಾಗುತ್ತಿದ್ದು, ಗುಟ್ಕಾದ ಮೇಲೆ 91 ಶೇಕಡಾ ತೆರಿಗೆ ವಿಧಿಸಲಾಗಿದೆ. ಪಾನ್ ಮಸಾಲಾಗೆ ಒಟ್ಟಾರೆ 88 ಶೇಕಡಾ ತೆರಿಗೆ ಮುಂದುವರಿಯಲಿದ್ದು, ಹೊಸ ಸೆಸ್ ಅನ್ನು ಉತ್ಪಾದನಾ ಸಾಮರ್ಥ್ಯದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.
ತಯಾರಕರು ಪಾಲಿಸಬೇಕಾದ ನಿಯಮಗಳು: ಪಾನ್ ಮಸಾಲಾ ತಯಾರಕರು ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಕಾಯ್ದೆಯಡಿ ಹೊಸ ನೋಂದಣಿ ಪಡೆಯಬೇಕಾಗಿದ್ದು, ಪ್ಯಾಕಿಂಗ್ ಯಂತ್ರಗಳ ಮೇಲೆ ಸಿಸಿಟಿವಿ ಅಳವಡಿಕೆ, ಕನಿಷ್ಠ 24 ತಿಂಗಳು ದೃಶ್ಯ ಸಂಗ್ರಹಣೆ ಸೇರಿದಂತೆ ಕಠಿಣ ನಿಗಾ ನಿಯಮಗಳನ್ನು ಪಾಲಿಸಬೇಕು.
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್ಗೆ ಭೇಟಿ ನೀಡಿ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications