ಬಿಜೆಪಿ, ಆರೆಸ್ಸೆಸ್ ನನ್ನನ್ನು ತೇಜೋವಧೆ ಮಾಡುತ್ತಿವೆ: ಜಿಗ್ನೇಶ್
ನವದೆಹಲಿ, ಜನವರಿ 05: "ನನ್ನ ವಿರುದ್ಧ ಬಾಲಿಶ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿ ಮತ್ತು ಆರ್ ಎಸ್ ಎಸ್ ನನ್ನ ತೇಜೋವಧೆ ಮಾಡುತ್ತಿದೆ" ಎಂದು ವಡ್ಗಾಮ್ ಶಾಸಕ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.
ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂಘ ಪರಿವಾರ ಮತ್ತು ಬಿಜೆಪಿ ನನ್ನ ವ್ಯಕ್ತಿತ್ವವನ್ನು ಕೀಳಾಗಿ ಚಿತ್ರಿಸುವುದಕ್ಕಾಗಿ ಬಾಲಿಶ ಪ್ರಯತ್ನಗಳನ್ನು ಮಾಡುತ್ತಿದೆ ಎಂದಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಭೀಮಾ ಕೊರೆಗಾಂವ್ ಗಲಭೆಗೆ ಸಂಬಂಧಿಸಿದಂತೆ ತಮ್ಮ ಮೇಲೆ ಕಾರಣವೇ ಇಲ್ಲದೆ ಎಫ್ ಐಆರ್ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ನಾನು ಪ್ರಚೋದನಾತ್ಮಕವಾಗಿ ಒಂದೇ ಒಂದು ಮಾತನ್ನೂ ಆಡಿರಲಿಲ್ಲ ಎಂದು ಅವರು ಹೇಳಿದರು.

ಡಿಸೆಂಬರ್ 31 ರಂದು ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರ ಮಾತು ಪ್ರಚೋದನಾತ್ಮಕವಾಗಿತ್ತು ಎಂದು ದೂರಿ, ಜಿಗ್ನೇಶ್ ಮತ್ತು ಜೆಎನ್ ಯು ವಿದ್ಯಾರ್ಥಿ ಉಮರ್ ಖಲೀದ್ ಮೇಲೆ ಎಫ್ ಐಆರ್ ದಾಖಲಿಸಲಾಗಿತ್ತು.












Click it and Unblock the Notifications