'ಪಟ್ಟಣದ ಕೆಲಸ ಬಿಟ್ಟು ಹಳ್ಳಿಗೆ ಹೋದ ಮೂರ್ಖ ಅಂದ್ರು': ಇಂದು 2.5 ಕೋಟಿ ಒಡೆಯನಾದ ಪ್ರಿನ್ಸ್ ಶುಕ್ಲಾ
ಬಿಹಾರ: ಬೆಂಗಳೂರಿನ ಐಷಾರಾಮಿ ಜೀವನ, ಕೈತುಂಬಾ ಸಂಬಳ ಮತ್ತು ಸುಸಜ್ಜಿತ ಕಾರ್ಪೊರೇಟ್ ಕೆಲಸ... ಇವೆಲ್ಲವನ್ನೂ ಬಿಟ್ಟು ಹಳ್ಳಿಗೆ ಹೋಗಿ ಕೃಷಿ ಮಾಡುತ್ತೇನೆ ಎಂದಾಗ ಎಂತಹವರಿಗಾದರೂ ಹುಚ್ಚು ಹಿಡಿದಿರಬಹುದು ಎಂದೆನಿಸುವುದು ಸಹಜ. ಬಿಹಾರದ ಪೂರ್ಣಿಯಾ ಮೂಲದ ಪ್ರಿನ್ಸ್ ಶುಕ್ಲಾ ಅವರಿಗೂ ಎದುರಾಗಿದ್ದು ಇದೇ ಪ್ರಶ್ನೆಗಳು. ಆದರೆ ಅಂದು 'ಹಳ್ಳಿಯವ' ಎಂದು ಮೂಗು ಮುರಿದವರೇ ಇಂದು ಅವರ ಸಾಧನೆ ನೋಡಿ ಹುಬ್ಬೇರಿಸುತ್ತಿದ್ದಾರೆ.
ಕೃಷಿ ಹಿನ್ನೆಲೆಯ ಕುಟುಂಬದಲ್ಲಿ ಬೆಳೆದ ಪ್ರಿನ್ಸ್ ಶುಕ್ಲಾ, ಕೃಷಿ ವಿಜ್ಞಾನದಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಪದವಿ ಪಡೆದಿದ್ದರು. ವಿದ್ಯಾಭ್ಯಾಸದ ನಂತರ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಆದರೆ ರೈತರ ಬೆಳೆಗಳಿಗೆ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನಗಳನ್ನು ಮಾರಾಟ ಮಾಡಲು ಅವರ ಮನಸ್ಸು ಒಪ್ಪಲಿಲ್ಲ. ಅಂತರಾಳದ ಕರೆಗೆ ಓಗೊಟ್ಟು, 2021ರಲ್ಲಿ ತಮ್ಮ 24ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ತವರಿಗೆ ಮರಳಿದರು.

ಆರಂಭಿಕ ಅವಮಾನ ಮತ್ತು ಸವಾಲುಗಳು:
ಹಳ್ಳಿಗೆ ಬಂದ ಪ್ರಿನ್ಸ್, ಡಿಸೆಂಬರ್ 2021ರಲ್ಲಿ 'AGRATE' (ಅಗ್ರೇಟ್) ಎಂಬ ಕೃಷಿ ಆಧಾರಿತ ಸ್ಟಾರ್ಟಪ್ ಅನ್ನು ಸ್ಥಾಪಿಸಿದರು. ತಂದೆಯಿಂದ ಸಾಲವಾಗಿ ಪಡೆದ ಕೇವಲ 1 ಲಕ್ಷ ರೂಪಾಯಿ ಬಂಡವಾಳದೊಂದಿಗೆ ಈ ಸಾಹಸಕ್ಕೆ ಕೈಹಾಕಿದರು. ಆರಂಭದಲ್ಲಿ ಜನರು ಅವರನ್ನು "ಮೂರ್ಖ", "ಹಳ್ಳಿಯವ" ಎಂದು ಗೇಲಿ ಮಾಡಿದರು. 2022ರ ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯ ಶೂನ್ಯವಾಗಿತ್ತು. ರೈತರು ಇವರ ವಯಸ್ಸನ್ನು ನೋಡಿ ನಂಬಿಕೆ ಇಡಲು ಹಿಂದೇಟು ಹಾಕಿದರು.
ವೈಯಕ್ತಿಕವಾಗಿ ರೈತರನ್ನು ತಲುಪುವುದು ಕಷ್ಟವಾದಾಗ, ಪ್ರಿನ್ಸ್ ಅವರು ರೈತ ಉತ್ಪಾದಕ ಸಂಸ್ಥೆಗಳ (FPO) ಮುಖ್ಯಸ್ಥರನ್ನು ಸಂಪರ್ಕಿಸಲು ನಿರ್ಧರಿಸಿದರು. ಗುಣಮಟ್ಟದ ಬೀಜಗಳು, ಪರಿಸರ ಸ್ನೇಹಿ ರಸಗೊಬ್ಬರಗಳು, ನೀರಾವರಿ ಉಪಕರಣಗಳು ಮತ್ತು ಮಲ್ಟಿ-ಕ್ರಾಪಿಂಗ್ (ಬಹುಬೆಳೆ) ಪದ್ಧತಿಯ ಬಗ್ಗೆ ರೈತರಿಗೆ ತರಬೇತಿ ನೀಡಲು ಆರಂಭಿಸಿದರು. ಕಮಲದ ಬೀಜ (ಮಖಾನ) ಮತ್ತು ಅಣಬೆ ಕೃಷಿಯಲ್ಲೂ ವೈಜ್ಞಾನಿಕ ವಿಧಾನಗಳನ್ನು ಪರಿಚಯಿಸಿದರು.
ಅವರ ಈ ಶ್ರಮಕ್ಕೆ 2023ರಲ್ಲಿ ಪ್ರತಿಫಲ ಸಿಗಲಾರಂಭಿಸಿತು. ಆ ವರ್ಷ 3 ಲಕ್ಷ ರೂ. ವಹಿವಾಟು ನಡೆಸಿದ್ದ ಕಂಪನಿ, ನಂತರದ ಎರಡು ವರ್ಷಗಳಲ್ಲಿ ಬರೋಬ್ಬರಿ 49 ಪಟ್ಟು ಬೆಳವಣಿಗೆ ಕಂಡಿತು. 2025ರ ಆರ್ಥಿಕ ವರ್ಷದ ವೇಳೆಗೆ 1.5 ಕೋಟಿ ರೂ. ತಲುಪಿದ್ದ ವಹಿವಾಟು, ಪ್ರಸ್ತುತ ವಾರ್ಷಿಕ 2.5 ಕೋಟಿ ರೂ.ಗೆ ಏರಿಕೆಯಾಗಿದೆ.
ಇಂದು 'ಅಗ್ರೇಟ್' ಸಂಸ್ಥೆಯು ಬಿಹಾರ ಮತ್ತು ಒಡಿಶಾದ 38 ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, 10,000ಕ್ಕೂ ಹೆಚ್ಚು ಸಣ್ಣ ರೈತರ ಬದುಕಿನಲ್ಲಿ ಆರ್ಥಿಕ ಬದಲಾವಣೆ ತಂದಿದೆ. ಕೃಷಿ ಎಂದರೆ ಕೇವಲ ಮಣ್ಣಿನ ಕೆಲಸವಲ್ಲ, ಅದೊಂದು ಗೌರವಯುತ ಮತ್ತು ಲಾಭದಾಯಕ ಉದ್ಯಮ ಎಂಬುದನ್ನು ಪ್ರಿನ್ಸ್ ಶುಕ್ಲಾ ಸಾಬೀತುಪಡಿಸಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications