Get Updates
Get notified of breaking news, exclusive insights, and must-see stories!

ಮುಂದುವರೆದ ಚಿರತೆಗಳ ಸಾವು: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚಿರತೆ ಶವವಾಗಿ ಪತ್ತೆ

ಭೂಪಾಲ್, ಆಗಸ್ಟ್. 02: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಸರಣಿ ಸಾವು ಮುಂದುವರೆದಿದೆ. ಬುಧವಾರ ಬೆಳಗ್ಗೆ ಕೂಡ ಹೆಣ್ಣು ಚಿರತೆ 'ಧಾತ್ರಿ' ಶವವಾಗಿ ಪತ್ತೆಯಾಗಿದೆ. ಸಾವಿನ ಕಾರಣ ತಿಳಿಯಲು ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಪ್ರಾಜೆಕ್ಟ್ ಚೀತಾ ಎಂದು ಕರೆಯಲ್ಪಡುವ ಮಹತ್ವಾಕಾಂಕ್ಷೆಯ ಉಪಕ್ರಮದ ಭಾಗವಾಗಿ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ 20 ಚಿರತೆಗಳನ್ನು ದೇಶಕ್ಕೆ ಆಮದು ಮಾಡಿಕೊಳ್ಳಲಾಗಿತ್ತು.

ಈವರೆಗೆ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಎಂಟು ಚಿರತೆಗಳು ಸಾವನ್ನಪ್ಪಿದ್ದು, ಇದು ಒಂಬತ್ತನೇ ಚಿರತೆಯಾಗಿದೆ. ಅದರಲ್ಲು ಹೆಣ್ಣು ಚಿರತೆ. ಪ್ರಾಜೆಕ್ಟ್ ಚೀತಾ ಸುಮಾರು ಏಳು ದಶಕಗಳ ಹಿಂದೆ ದೇಶದಲ್ಲಿ ಅಳಿವಿನಂಚಿನಲ್ಲಿದ್ದ ಈ ಚಿರತೆಗಳನ್ನು ಭಾರತಕ್ಕೆ ತರುವ ಮತ್ತು ಇಲ್ಲಿ ಅವುಗಳ ಸಂತತಿಯನ್ನು ಹೆಚ್ಚಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

Another Cheetah Found Dead in Madhya Pradesh’s Kuno National Park

ಕಳೆದ ವರ್ಷ ಆರಂಭವಾದ ಈ ಯೋಜನೆಯಲ್ಲಿ 20 ಚಿರತೆಗಳನ್ನು ದೇಶಕ್ಕೆ ತರಲಾಗಿತ್ತು. ಇದರಲ್ಲಿ ಒಟ್ಟು ಒಂಬತ್ತು ಚಿರತೆಗಳು ಈಗ ದುರಂತವಾಗಿ ಸಾವನ್ನಪ್ಪಿವೆ. ಇವುಗಳಲ್ಲಿ ಆಫ್ರಿಕಾದಿಂದ ತಂದ ಚಿರತೆಗಳಿಂದ ಹುಟ್ಟಿದ ಮೂರು ಮರಿಗಳೂ ಸೇರಿವೆ. ಈ ಸಾವುಗಳಿಗೆ ವಿವಿಧ ಅಂಶಗಳು ಕಾರಣವಾಗಿವೆ. ಕೆಲವು ತಜ್ಞರು ಅಂತರ್ ಜಾತಿಯ ಕಾದಾಟಗಳು, ರೋಗಗಳು, ದೇಶಕ್ಕೆ ಬಿಡುಗಡೆಯ ಮೊದಲು ಮತ್ತು ನಂತರ ಅಪಘಾತಗಳು ಮತ್ತು ಬೇಟೆಯಾಡುವ ಸಮಯದಲ್ಲಿ ಉಂಟಾದ ಗಾಯಗಳು ಸಂಭಾವ್ಯ ಕಾರಣಗಳಾಗಿರಬಹುದು ಎಂದು ಸೂಚಿಸಿದ್ದಾರೆ.

ಇತರ ಪ್ರಾಣಿಗಳ ಪರಭಕ್ಷಕ ದಾಳಿಗಳು ಮತ್ತು ಶಾಖದ ಹೊಡೆತವನ್ನು ಸಹ ಸಂಭವನೀಯ ಕಾರಣಗಳಾಗಿ ಉಲ್ಲೇಖಿಸಲಾಗಿದೆ. ಚಿರತೆಗಳ ಮೇಲೆ ರೇಡಿಯೋ ಕೊರಳಪಟ್ಟಿಗಳ ಬಳಕೆಯ ಬಗ್ಗೆಯೂ ವಿವಾದವಿದೆ. ಪ್ರಾಣಿಗಳನ್ನು ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು ಬಳಸಲಾಗುವ ಈ ಕೊರಳಪಟ್ಟಿಗಳು ಮಳೆಗಾಲದಲ್ಲಿ ನಿರಂತರ ತೇವಾಂಶದಲ್ಲಿದ್ದು ಚರ್ಮದ ಸೋಂಕುಗಳಿಗೆ ಕಾರಣವಾಗಿವೆ ಎಂದು ಕೆಲವು ತಜ್ಞರು ವಾದಿಸಿದ್ದಾರೆ.

Another Cheetah Found Dead in Madhya Pradesh’s Kuno National Park

ಚಿರತೆಗಳ ಸಾವಿಗೆ ಪ್ರತಿಕ್ರಿಯಿಸಿರುವ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಸಾವುಗಳು ನೈಸರ್ಗಿಕ ಕಾರಣಗಳಿಂದ ಉಂಟಾಗುತ್ತವೆ ಮತ್ತು ಅನಗತ್ಯವಾಗಿ ಆತಂಕಗೊಳ್ಳಬೇಕಿಲ್ಲ. ಈ ಸಾವುಗಳು ಆತಂಕಕಾರಿಯಾಗಿಲ್ಲ ಎಂದು ಸಮರ್ಥಿಸಿಕೊಳ್ಳಿವೆ.

ಬೇಟೆ, ಬಲೆ, ವಿಷ, ರಸ್ತೆ ಅಪಘಾತ ಅಥವಾ ವಿದ್ಯುದಾಘಾತದಂತಹ ಅಸ್ವಾಭಾವಿಕ ಕಾರಣಗಳಿಂದ ಯಾವುದೇ ಚಿರತೆಗಳು ಸಾವನ್ನಪ್ಪಿಲ್ಲ ಎಂದು ಇಲಾಖೆಗಳು ವಾದಿಸಿದ್ದಾರೆ. ಸಾವುಗಳಿಗೆ ಪ್ರತಿಕ್ರಿಯೆಯಾಗಿ, ಉಳಿದಿರುವ ಚಿರತೆಗಳ ಯೋಗಕ್ಷೇಮವನ್ನು ನೋಡಿಕೊಳ್ಳಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉಳಿದಿರುವ ಎಲ್ಲಾ ಚಿರತೆಗಳ ಮೇಲೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ರೋಗನಿರೋಧಕ ಚಿಕಿತ್ಸೆಯನ್ನು ನೀಡುವುದು ಮತ್ತು ಚೀತಾ ನಿರ್ವಹಣೆಯಲ್ಲಿ ಹೆಚ್ಚಿನ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಅಂತರಾಷ್ಟ್ರೀಯ ತಜ್ಞರನ್ನು ಸಂಪರ್ಕಿಸಲಾಗುತ್ತದೆ ಎಂದು ಹೇಳಲಾಗಿದೆ.

ಚಿರತೆಗಳ ಸಾವಿಗೆ ಪ್ರತಿಕ್ರಿಯಿಸಿದ್ದ ಸುಪ್ರೀಂ ಕೋರ್ಟ್, ಆಫ್ರಿಕಾದಿಂದ ಚಿರತೆಗಳನ್ನು ಸ್ಥಳಾಂತರಿಸಿದ ಒಂದು ವರ್ಷದೊಳಗೆ ಎಂಟು ಚಿರತೆಗಳ ಸಾವುಗಳು ಪ್ರಾಜೆಕ್ಟ್ ಚೀತಾದ ಉತ್ತಮ ಚಿತ್ರಣವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿತ್ತು. ಜೊತೆಗೆ ಈ ಚಿರತೆಗಳ ಸಾವಿಗೆ ಕಾರಣಗಳು ಮತ್ತು ಅವುಗಳ ಸಂಖ್ಯೆಯಲ್ಲಿ ಕುಸಿತವನ್ನು ತಡೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸರ್ಕಾರದಿಂದ ಪ್ರತಿಕ್ರಿಯೆಯನ್ನು ಕೋರಿದೆ.

ರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠವು ಇದನ್ನು ಸರ್ಕಾರವು ಪ್ರತಿಷ್ಠೆಯ ವಿಷಯವಾಗಿ ಏಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದೆ. "ಅವುಗಳನ್ನು (ಚಿರತೆಗಳು) ಒಂದೇ ಸ್ಥಳದಲ್ಲಿ ಇರಿಸುವ ಬದಲು, ಅವು ಯಾವುದೇ ರಾಜ್ಯ ಅಥವಾ ಯಾವುದೇ ಸರ್ಕಾರದ ಅಡಿಯಲ್ಲಿರಲಿ. ಅವುಗಳಿಗೆ ಒಂದು ಅಥವಾ ಹೆಚ್ಚಿನ ಆವಾಸಸ್ಥಾನಗಳನ್ನು ಏಕೆ ನಿರ್ಮಿಸಲು ಸಾಧ್ಯವಿಲ್ಲ" ಎಂದು ಪ್ರಶ್ನಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+