ಮೂರು ರಾಜ್ಯಗಳಲ್ಲಿ ಭೀಕರ ಚಂಡಮಾರುತಕ್ಕೆ 64 ಮಂದಿ ಬಲಿ

ನವದೆಹಲಿ, ಏ.18: ಭೀಕರ ಚಂಡಮಾರುತದಿಂದಾಗಿ ಮೂರು ರಾಜ್ಯಗಳು ನಲುಗಿ ಹೋಗಿವೆ. ಇದುವರೆಗೂ 64 ಮಂದಿ ಬಲಿಯಾಗಿದ್ದಾರೆ.

ರಾಜಸ್ತಾನ, ಗುಜರಾತ್ ಹಾಗೂಮಧ್ಯಪ್ರದೇಶದಲ್ಲಿ ಮಂಗಳವಾರ, ಬುಧವಾರ ಭಾರಿ ಮಳೆಯಾಗಿದೆ. ಗಾಳಿ ಮಳೆಗೆ ಕೆಲವು ಮಣ್ಣಿನಿಂದ ನಿರ್ಮಿಸಲಾಗಿದ್ದ ಮನೆಗಳು ಧರೆಗುರುಳಿದೆ. ರಾಜಸ್ತಾನ, ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ರಾಜಸ್ತಾನದಲ್ಲಿ 25 ಮಂದಿ, ಮಧ್ಯಪ್ರದೇಶದಲ್ಲಿ 21, ಗುಜರಾತ್‌ನಲ್ಲಿ 10 ಮಂದಿ ಮೃತಪಟ್ಟಿದ್ದಾರೆ.

ಲೈನ್ ಕಂಬಗಳು ಬಿದ್ದು, ಮರಗಳು ಮೈಮೇಲೆ ಬಿದ್ದಿರುವ ಕಾರಣ ಹಲವು ಮಂದಿ ಮೃತಪಟ್ಟಿದೆ.ಪ್ರಧಾನಿ ತವರಿನಲ್ಲಿ ಸುರಿದ ಅಕಾಲಿಕ ಮಳೆಗೆ ಮೋದಿ ಆತಂಕ ವ್ಯಕ್ತಪಡಿಸಿದ್ದು, ಹಾನಿಯಿಂದಾಗಿ ಜೀವ ಕಳೆದುಕೊಂಡ ಕುಟುಂಬಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ತಲಾ 2 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೇ ಗಾಯಗೊಂಡರವರ ಕುಟುಂಬಕ್ಕೆ ತಲಾ 50 ಸಾವಿರ ಪರಿಹಾರ ನೀಡಲಾಗುವುದು ಎಂದು ಟ್ವೀಟ್​ ಮಾಡಿದ್ದಾರೆ.

64 killed as thunderstorms unleash fury in 3 states

ಮೇ ತಿಂಗಳ ಅಂತ್ಯಕ್ಕೆ ಭಾರತದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಇದೆ. ಭಾರತೀಯ ಹವಾಮಾನ ಇಲಾಖೆ 2019ನೇ ಸಾಲಿನ ಮುಂಗಾರಿನ ಬಗ್ಗೆ ವಿವರಣೆ ನೀಡಿದೆ. ಈ ಬಾರಿಯ ಮುಂಗಾರಿನಲ್ಲಿ ಸಾಮಾನ್ಯ ಮಳೆಯಾಗಲಿದ್ದು, ನೈಋತ್ಯ ಮಾನ್ಸೂನ್ ಮಾರುತಗಳಿಂದಲೂ ಸಾಮಾನ್ಯ ಮಳೆಯಾಗಲಿದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+