ಜುಲೈ ತಿಂಗಳಾಂತ್ಯಕ್ಕೆ ಭಾರತಕ್ಕೆ ಸೇರ್ಪಡೆಯಾಗಲಿದೆ 4 ರಫೇಲ್ ಯುದ್ಧ ವಿಮಾನ
ನವದೆಹಲಿ, ಮೇ 16: ಜುಲೈ ತಿಂಗಳಾಂತ್ಯಕ್ಕೆ ಭಾರತ ಖರೀದಿಸಿರುವ 36 ರಫೇಲ್ ಫೈಟರ್ ಜೆಟ್ ಗಳ ಪೈಕಿ 4 ರಫೇಲ್ ಗಳು ಭಾರತಕ್ಕೆ ಆಗಮಿಸಲಿವೆ.
ಕೊರೊನಾ ಭೀತಿಯ ನಡುವೆಯೂ ಇದು ಭಾರತದ ಮಟ್ಟಿಗೆ ಸಂತಸದ ಸುದ್ದಿಯಾಗಿದೆ. ಕೋವಿಡ್-19 ರ ಕಾರಣದಿಂದಾಗಿಯೇ ರಫೇಲ್ ಗಳ ಆಗಮನ 11 ವಾರ ವಿಳಂಬವಾಗಿದ್ದು, ಮೇ ತಿಂಗಳ ಮೊದಲ ವಾರದಲ್ಲಿ ಬರಬೇಕಿದ್ದ ರಾಫೆಲ್ ಜೆಟ್ ಗಳು ಜುಲೈ ತಿಂಗಳಾಂತ್ಯಕ್ಕೆ ಭಾರತ ತಲುಪುತ್ತಿವೆ.
58,000 ಕೋಟಿ ರೂಪಾಯಿ ಮೊತ್ತದ 36 ರಫೇಲ್ ಜೆಟ್ ಗಳ ಖರೀದಿಗೆ 2016 ರಲ್ಲಿ ಭಾರತ ಸರ್ಕಾರ ಫ್ರಾನ್ಸ್ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.

ಅದರಲ್ಲಿ ಮೊದಲ ಬ್ಯಾಚ್ ರಫೇಲ್ ಜೆಟ್ ಮೇ ಮೊದಲ ವಾರದಲ್ಲಿ ಬರುವುದಾಗಿ ಅಂದಾಜಿಸಲಾಗಿತ್ತು. ಈ ಏರ್ಕ್ರಾಫ್ಟ್ಗಳು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯೊಲಿವೆ.
ಫ್ರೆಂಚ್ ನಿರ್ಮಿತ 36 ರಫೇಲ್ ಫೈಟರ್ ಜೆಟ್ ಗಳನ್ನು ಡಿಅಸಾಲ್ಟ್ ನಿಂದ ಭಾರತವು ಖರೀದಿಸುತ್ತದೆ ಎಂದು 2015ರ ಏಪ್ರಿಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು. 2012ನೇ ಇಸವಿಯಲ್ಲೇ ರಫೇಲ್ ವಿಮಾನವನ್ನು ಖರೀದಿ ಮಾಡಬೇಕು ಎಂದು ಆಯ್ಕೆ ಮಾಡಲಾಗಿತ್ತು. ಆ ವೇಳೆಗೆ ಯುಎಸ್ ಎ, ಯುರೋಪ್ ಹಾಗೂ ರಷ್ಯಾದ ಪ್ರಸ್ತಾವವಗಳನ್ನು ಪಕ್ಕಕ್ಕೆ ಸರಿಸಿ, ರಫೇಲ್ ಯುದ್ಧ ವಿಮಾನ ಖರೀದಿಗೆ ನಿರ್ಧರಿಸಲಾಗಿತ್ತು.
ಏಕೆಂದರೆ ಭಾರತದ ವಾಯುಸೇನೆಯಲ್ಲಿದ್ದ ಯುದ್ಧ ವಿಮಾನಗಳು ಹಳೆಯದಾಗಿದ್ದವು. ಹಾಗೆ ನೋಡಿದರೆ ಫ್ರಾನ್ಸ್ ನ ಡಿಅಸಾಲ್ಟ್ ನಿಂದ ಭಾರತ ಖರೀದಿಸಬೇಕು ಅಂದುಕೊಂಡಿದ್ದು 18 ಜೆಟ್ ಮಾತ್ರ. ಉಳಿದ 108 ವಿಮಾನವನ್ನು ಬೆಂಗಳೂರಿನಲ್ಲಿರುವ ಎಚ್ ಎಎಲ್ ನಲ್ಲೇ ನಿರ್ಮಿಸಲು ತೀರ್ಮಾನಿಸಲಾಗಿತ್ತು.
ಆದರೆ, ಮೋದಿ ನೇತೃತ್ವದ ಸರಕಾರವು ದುಬಾರಿ ಆಗುತ್ತದೆ ಎಂಬ ಕಾರಣಕ್ಕೆ ಅದಕ್ಕೂ ಮುಂಚೆ ಯುಪಿಎ ಮಾಡಿಕೊಂಡಿದ್ದ 126 ರಫೇಲ್ ಖರೀದಿ ಒಪ್ಪಂದ ತೀರ್ಮಾನದಿಂದ ಹಿಂದೆ ಸರಿಯಿತು.
ಹೀಗೆ ಖರೀದಿ ಮಾಡಬೇಕು ಅಂತಿದ್ದ ಜೆಟ್ ನ ಸಂಖ್ಯೆಯು ಕಡಿಮೆಯಾಯಿತು. ಆದರೆ ಭಾರತೀಯ ವಾಯು ಸೇನೆಗೆ ತುರ್ತಾಗಿ ಖರೀದಿ ಮಾಡಲೇಬೇಕಿತ್ತು ಅನ್ನೋ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ, ಹಾರಾಟಕ್ಕೆ ಸಿದ್ಧವಾದ ಮೂವತ್ತಾರು ವಿಮಾನವನ್ನು ಖರೀದಿಸಲು ನಿರ್ಧಾರ ಮಾಡಲಾಯಿತು. ಅದಕ್ಕೂ ಮುನ್ನ ಡಿಅಸಾಲ್ಟ್ ನಿಂದ ತಂತ್ರಜ್ಞಾನ ಪಡೆದು, ಭಾರತದಲ್ಲೇ ವಿಮಾನ ನಿರ್ಮಿಸುವ ಆಲೋಚನೆ ಕೈ ಬಿಡಲಾಯಿತು.
ಭಾರತ- ಫ್ರಾನ್ಸ್ ಮಧ್ಯದ ಈ ಒಪ್ಪಂದವನ್ನು 'ರಫೇಲ್ ಒಪ್ಪಂದ' ಎಂದು ಕರೆಯಲಾಯಿತು. 58,000 ಕೋಟಿ ರುಪಾಯಿಯ ವ್ಯವಹಾರ ಅದಾಗಿತ್ತು. ರಫೇಲ್ ಎರಡು ಎಂಜಿನ್ ನ 36 ವಿಮಾನಕ್ಕೆ 15 ಪರ್ಸೆಂಟ್ ಮೊತ್ತವನ್ನು ಮುಂಗಡವಾಗಿ ಪಾವತಿಸಲಾಯಿತು.
ಒಪ್ಪಂದದ ಪ್ರಕಾರ ಭಾರತವು ರಫೇಲ್ ಜತೆಗೆ ಜಗತ್ತಿನಲ್ಲೇ ಅತ್ಯಾಧುನಿಕವಾದ ಶಸ್ತ್ರಾಸ್ತ್ರ ಪಡೆಯಲಿದೆ. ಮತ್ತು ಆ ಒಪ್ಪಂದದ ಭಾಗವಾಗಿ 58,000 ಕೋಟಿ ರುಪಾಯಿ ಒಟ್ಟು ಮೊತ್ತದ ಶೇಕಡಾ ಮೂವತ್ತರಷ್ಟನ್ನು ಭಾರತೀಯ ಮಿಲಿಟರಿ- ಏರೋನಾಟಿಕ್ಸ್ ಸಂಬಂಧಿಸಿದ ಸಂಶೋಧನೆಗಳಿಗೆ ಮತ್ತು ಶೇ ಇಪ್ಪತ್ತರಷ್ಟನ್ನು ರಫೇಲ್ ಬಿಡಿ ಭಾಗಗಳ ಸ್ಥಳೀಯ ಉತ್ಪಾದನೆಗೆ ಫ್ರಾನ್ಸ್ ಸರಕಾರ ಹೂಡಿಕೆ ಮಾಡಿದೆ.
-
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
Bihar: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ, ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
Siddaramaiah: ಜನರ ದಾರಿತಪ್ಪಿಸುವ ಬಿಜೆಪಿಯನ್ನು ನಂಬಬೇಡಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರಣವೇನು -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು












Click it and Unblock the Notifications