ನನ್ನ ಮಗನ ಕೊಲ್ಲಲು ಪೊಲೀಸ್ ಸಂಚು : ಯಾಸಿನ್ ತಾಯಿ
ಹೈದರಾಬಾದ್, ಜು. 06 : "ನನ್ನ ಮಗನನ್ನು ಮುಗಿಸಿ ಹಾಕಲು ಪೊಲೀಸರೇ ಹೂಡಿರುವ ಸಂಚು ಇದು. ಆತ ಜೈಲಿನಿಂದ ಓಡಿಹೋಗುವಂತೆ ಮಾಡಿ ಎನ್ಕೌಂಟರ್ ಹೆಸರಲ್ಲಿ ನನ್ನ ಮಗನನ್ನು ಕೊಲ್ಲಲು ಪೊಲೀಸರು ಹವಣಿಸುತ್ತಿದ್ದಾರೆ. ನನ್ನ ಮಗನ ವಿರುದ್ಧ ಹಲವಾರು ಕೇಸು ಹಾಕಿದ್ದಾರೆ, ಆದರೆ ಯಾವುದರಲ್ಲೂ ಅವರ ಬಳಿ ಸಾಕ್ಷ್ಯವಿಲ್ಲ. ಹಾಗಾಗಿ ಅವನನ್ನು ಕೊಲ್ಲಲು ನೆವ ಹುಡುಕುತ್ತಿದ್ದಾರೆ."
ಇಂಡಿಯನ್ ಮುಜಾಹಿದ್ದಿನ್ ಭಯೋತ್ಪಾದನೆ ಸಂಘಟನೆಯ ಸಂಸ್ಥಾಪಕ, ಮುಂಬೈ, ಬೆಂಗಳೂರು, ಹೈದರಾಬಾದ್, ಪುಣೆ, ದೆಹಲಿ, ಅಹಮದಾಬಾದ್ ಮುಂತಾದ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಿ ದುಷ್ಕೃತ್ಯ ನಡೆಸಿರುವ ಮುಹಮ್ಮದ್ ಅಹ್ಮದ್ ಜರಾರ್ ಸಿದ್ದಿಬಾಪಾ ಅಲಿಯಾಸ್ ಯಾಸಿನ್ ಭಟ್ಕಳ್ನ ಅಮ್ಮ ರಿಹನಾ ಸಿದ್ದಿಬಾಪಾ ಆಡುವ ಆಕ್ರೋಶದ ಮಾತುಗಳಿವು. ಜೈಲಿನಿಂದ ತಪ್ಪಿಸಿಕೊಳ್ಳಲು ಯಾಸಿನ್ ಐಎಸ್ಐಎಸ್ ಜೊತೆ ಮಾತುಕತೆ ನಡೆಸಿದ್ದಾನೆ ಎಂಬ ಸುದ್ದಿಗೆ ಆಕೆ ನೀಡಿರುವ ಪ್ರತಿಕ್ರಿಯೆ.
ಹೈದರಾಬಾದ್ ಜೈಲಿನಲ್ಲಿರುವ ಯಾಸಿನ್ ಭಟ್ಕಳ್ ಸಿರಿಯಾದ ರಾಜಧಾನಿ ಡಮಾಸ್ಕಸ್ನಲ್ಲಿರುವ ತನ್ನ (ಐಎಸ್ಐಎಸ್ - ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ) ಸ್ನೇಹಿತರ ಸಹಾಯದಿಂದ ತಪ್ಪಿಸಿಕೊಳ್ಳುವ ಕುರಿತು ತನ್ನ ಪತ್ನಿಯೊಂದಿಗೆ ಮೊಬೈಲಲ್ಲಿ ಮಾತನಾಡಿದ್ದಾನೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಾಸಿನ್ ಭಟ್ಕಳ್ಗೆ ನೀಡಿದ್ದ ಭದ್ರತೆಯನ್ನು ಮತ್ತಷ್ಟು ಬಿಗಿ ಮಾಡಲಾಗಿತ್ತು. [ಮೋಸ್ಟ್ ವಾಂಟೆಡ್ ಟೆರರಿಸ್ಟ್ ಯಾಸಿನ್ ಭಟ್ಕಳ್ ಯಾರು?]

ಯಾಸಿನ್ ಭಲೇ ಮಾತಿನ ಮೋಡಿಗಾರ
ಮೂವತ್ತೆರಡು ವರ್ಷದ ಯಾಸಿನ್ ಭಟ್ಕಳ್ ಭಲೇ ಮಾತಿನ ಮೋಡಿಗಾರ. ದೇಶದ ವಿವಿಧೆಡೆ ನಡೆಸಲಿರುವ ಉಗ್ರ ಕೃತ್ಯಗಳ ಬಗ್ಗೆ ಹೇಳಿಕೊಂಡು ಗೋಳುಹೊಯ್ದುಕೊಳ್ಳುವುದೆಂದರೆ ಬಲು ಪ್ರೀತಿ. ಬೆಂಗಳೂರಿನಲ್ಲಿ ತನಿಖೆ ನಡೆಸುತ್ತಿದ್ದಾಗ, ಬೆಣ್ಣೆ ಮಸಾಲೆ ದೋಸೆ ನೀಡಿದರೆ ಮಾತ್ರ ಪೊಲೀಸರೊಂದಿಗೆ ಸಹಕರಿಸುವುದಾಗಿ ಹೇಳಿ ರಚ್ಚೆ ತೆಗೆದಿದ್ದ.

ನ್ಯೂಕ್ಲಿಯರ್ ದಾಳಿಯ ಬಗ್ಗೆ ಬಡಾಯಿ
ದೆಹಲಿ ಪೊಲೀಸರು ಆತನ ಹೇಳಿಕೆ ಪಡೆಯುತ್ತಿದ್ದಾಗ, ತನ್ನ ಸಂಬಂಧಿ ರಿಯಾಜ್ ಭಟ್ಕಳ್ ಪಾಕಿಸ್ತಾನದಿಂದ ಭಾರತಕ್ಕೆ ಅಣು ಬಾಂಬ್ ತಂದು ದಾಳಿ ನಡೆಸಲಿದ್ದಾನೆ ಎಂದು ಬಡಾಯಿ ಬಜಾಯಿಸಿದ್ದ. ಮಹಾರಾಷ್ಟ್ರ ಪೊಲೀಸರ ಮುಂದೆ ಕೂಡ, ಭಾರತದಲ್ಲಿರುವ ಮುಜಾಹಿದ್ದಿನ್ ಉಗ್ರರು ನವದೆಹಲಿ-ಕಾಠ್ಮಂಡು ವಿಮಾನವನ್ನು ಅಪಹರಿಸಿ ತನ್ನ ಬಿಡುಗಡೆಗೆ ಬೇಡಿಕೆ ಇಡಲಿದ್ದಾರೆ ಎಂದಿದ್ದ. ಆದರೆ, ಅಚ್ಚರಿಯೆಂದರೆ, ಈ ಯಾವ ಸಂಗತಿಗಳೂ ಚಾರ್ಜ್ ಶೀಟ್ ನಲ್ಲಿ ಪ್ರಸ್ತಾಪವಾಗಿಲ್ಲ.

ಮೊಬೈಲನ್ನು ಯಾಸಿನ್ ಅಕ್ರಮವಾಗಿ ಬಳಸಿಲ್ಲ
ಜೈಲಲ್ಲಿ ಯಾಸಿನ್ ಅಕ್ರಮವಾಗಿ ಮೊಬೈಲನ್ನು ಬಳಸಿಲ್ಲ. ತನ್ನ ಕುಟುಂಬದವರೊಂದಿಗೆ ಮಾತಾಡಬೇಕೆಂದಾಗ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಲಾಗಿದೆ. ವಿಚಾರಣಾಧೀನ ಕೈದಿಗೆ ಅನುಮತಿ ಪಡೆದು ಮೊಬೈಲ್ ಬಳಸುವ ಹಕ್ಕಿದೆ. ಅಲ್ಲದೆ, ಜೊತೆಗೆ ಪೊಲೀಸ್ ಕೂಡ ಇರುತ್ತಾನೆ. ಬಿಗಿ ಭದ್ರತೆಯಿರುವ ಜೈಲಿನಿಂದ ಆತ ಪಾರಾಗಲು ಸಾಧ್ಯವೇ ಇಲ್ಲ ಎಂದು ಹೈದರಾಬಾದ್ ಪೊಲೀಸರು ಹೇಳಿದ್ದಾರೆ.

ತನಿಖೆ ಆಗಬೇಕಾಗಿರುವುದಾದರೂ ಏನು?
ಇಂಡಿಯನ್ ಮುಜಾಹಿದ್ದಿನ್ ಜೊತೆ ಗುರುತಿಸಿಕೊಂಡ ಹಲವರು ಐಎಸ್ಐಎಸ್ ಸೇರಿದ್ದಾರೆ. ಯಾಸಿನ್ನ ಸ್ನೇಹಿತ ಸುಲ್ತಾನ್ ಅಮರ್ ಅವರಲ್ಲೊಬ್ಬ. ಸುಲ್ತಾನ್ ಹುಟ್ಟುಹಾಕಿರುವ ಅನ್ಸಾರ್-ಉತ್-ತವ್ಹಿದ್ ಸಂಘಟನೆ ಭಾರತದಲ್ಲಿ ಐಎಸ್ಐಎಸ್ಗಾಗಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಐಎಸ್ಐಎಸ್ ಜೊತೆಗಿನ ಯಾಸಿನ್ ಸಂಪರ್ಕವನ್ನು ತನಿಖೆ ಮಾಡಲಾಗುತ್ತಿದೆ.

ಇದೆಲ್ಲದರ ಬಗ್ಗೆ ಬಾಯಿ ಬಿಡ್ತಾನಾ ಯಾಸಿನ್?
ಬೆಂಗಳೂರಿನ ಮಡಿವಾಳದಲ್ಲಿರುವ ವಿಶೇಷ ತನಿಖಾ ಕೊಠಡಿಯಲ್ಲಿ ಅದೆಲ್ಲಿಂದಲೋ ಬಂದ ಮಿಡಿ ನಾಗರಹಾವನ್ನು ಕಂಡು ಚಿಟ್ಟನೆ ಚೀರಿದ್ದ ಯಾಸಿನ್ ಭಟ್ಕಳ್ ಹೈದರಾಬಾದ್ ಪೊಲೀಸರ ಮುಂದೆ ಬಾಯಿಬಿಡ್ತಾನಾ. ಅಥವಾ ಅಲ್ಲೂ ಬೆಣ್ಣೆ ಮಸಾಲೆ ದೋಸೆ ಬೇಕೆಂದು ಬಾಯಿಬಾಯಿ ಬಿಡ್ತಾನಾ?
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ











Click it and Unblock the Notifications