just in: ಪಕ್ಷದ ಸದಸ್ಯತ್ವ ಇಲ್ಲದವರು ರಾಜೀನಾಮೆ ಹೇಗೆ ಕೊಡಲು ಸಾಧ್ಯ?
ಹೈದರಾಬಾದ್, ಆಗಸ್ಟ್ 29: ರಾಜ್ಯಸಭೆಯ ಮಾಜಿ ಸಂಸದ ಎಂ.ಎ.ಖಾನ್ ಅವರು ಶನಿವಾರ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿರುವ ತೆಲಂಗಾಣ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಮಾಣಿಕಂ ಟ್ಯಾಗೋರ್, ಪಕ್ಷದ ಸದಸ್ಯತ್ವವನ್ನು ತೆಗೆದುಕೊಳ್ಳದ ವ್ಯಕ್ತಿ ಹೇಗೆ ರಾಜೀನಾಮೆ ಸಲ್ಲಿಸಬಹುದು ಎಂದು ಪ್ರಶ್ನಿಸಿದ್ದಾರೆ.
"ಸದಸ್ಯತ್ವವಿಲ್ಲದೆ ನೀವು ಹೇಗೆ ರಾಜೀನಾಮೆ ನೀಡುತ್ತೀರಿ? ಯಾವತ್ತೂ ಈ ನೆಲದಲ್ಲಿ ಕೆಲಸ ಮಾಡದ ಈ ರಾಜ್ಯಸಭಾ ಗ್ಯಾಂಗ್ ಈಗ ತಪ್ಪು ಹೇಳಿಕೆಗಳನ್ನು ನೀಡುತ್ತಿದೆ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಜನರೊಂದಿಗೆ ಮತ್ತು ಜನರಿಗಾಗಿ ಮತ್ತು ಜನರೊಂದಿಗೆ ಇರುವ ಕಾಂಗ್ರೆಸ್ ಅನ್ನು ಕಟ್ಟೋಣ. ಜೈ ಹಿಂದ್" ಎಂದು ಟ್ವೀಟ್ ಮಾಡಿದ್ದಾರೆ.
Breaking: ಕಾಂಗ್ರೆಸ್ಗೆ ಆಘಾತ, ತೆಲಂಗಾಣದ ಎಂಎ ಖಾನ್ ರಾಜೀನಾಮೆ
ಎಂಎ ಖಾನ್ ಅವರು ಶನಿವಾರ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ಕಾಂಗ್ರೆಸ್ ತಳಮಟ್ಟದ ಸಂಪರ್ಕವನ್ನು ಕಳೆದುಕೊಂಡಿದೆ ಮತ್ತು ತನ್ನ ಗತ ವೈಭವವನ್ನು ಮರಳಿ ಪಡೆಯಬಹುದು ಎಂದು ಜನರಿಗೆ ಮನವರಿಕೆ ಮಾಡಲು ವಿಫಲವಾಗಿದೆ ಎಂದು ತಿಳಿಸಿದ್ದಾರೆ.
ರಾಜೀನಾಮೆ ಪತ್ರದಲ್ಲಿ "ನೀವು ಪಕ್ಷದ ಅಧ್ಯಕ್ಷರಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವವರೆಗೆ, ನೀವು ಪಕ್ಷದೊಳಗಿನ ಸಮಾಲೋಚನಾ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಅನುಸರಿಸಿದ್ದೀರಿ. ದಶಕಗಳಿಂದ ಪಕ್ಷಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಹಿರಿಯ ನಾಯಕರ ಅಭಿಪ್ರಾಯಕ್ಕೆ ನೀವು ಅತ್ಯುನ್ನತ ಮೌಲ್ಯವನ್ನು ನೀಡಿದ್ದೀರಿ. ಪಕ್ಷವು ಬಲಿಷ್ಠವಾಗಿತ್ತು ಮತ್ತು ದೇಶದ ಹೋರಾಡುವ ಸ್ಥಿತಿಯಲ್ಲಿತ್ತು" ಎಂದು ಖಾನ್ ಹೇಳಿದ್ದಾರೆ.
ತಾನು ವಿದ್ಯಾರ್ಥಿ ದಿನಗಳಿಂದ ನಾಲ್ಕು ದಶಕಗಳಿಂದ ಪಕ್ಷದೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ. "ಪಕ್ಷದ ಒಳಿತಿಗಾಗಿ ಮತ್ತು ಉತ್ತಮಗೊಳಿಸಲು ಜಿ 23 ಹಿರಿಯ ನಾಯಕರು ಎತ್ತಿದ ಧ್ವನಿಯನ್ನು ನಾಯಕತ್ವವು ಭಿನ್ನಾಭಿಪ್ರಾಯವೆಂದು ಪರಿಗಣಿಸಿದೆ. ಆ ನಾಯಕರನ್ನು ನಂಬಿದ್ದರೆ ಮತ್ತು ಪಕ್ಷದ ಮರುಸ್ಥಾಪನೆಗಾಗಿ ಅವರ ನೋವು ಮತ್ತು ಸಂಕಟವನ್ನು ಅರ್ಥಮಾಡಿಕೊಂಡಿದ್ದರೆ ವಿಷಯಗಳು ಬೇರೆ ರೀತಿಯಲ್ಲೇ ಇರುತ್ತಿದ್ದವು" ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಮಾಣಿಕಂ ಟ್ಯಾಗೋರ್ "ಸದಸ್ಯತ್ವವಿಲ್ಲದೇ... ರಾಜೀನಾಮೆ ನೀಡುವುದು ಹೇಗೆ? ಎಂದು ಪ್ರಶ್ನಿಸಿದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ಜನಪರ ಕಾಂಗ್ರೆಸ್ ಅನ್ನು ಕಟ್ಟೋಣ ಎಂದಿದ್ದಾರೆ.