ಗ್ರೇಟರ್ ಹೈದರಾಬಾದ್ ಚುನಾವಣೆ: ಅಮಿತ್ ಶಾ, ನಡ್ಡಾಗೆ ಸಿಕ್ಕ ಸ್ಪಷ್ಟ ಮುನ್ಸೂಚನೆ
ಹೈದರಾಬಾದ್, ಡಿ 1: ಸ್ಥಳೀಯ ಸಂಸ್ಥೆ ಚುನಾವಣೆಗೆ ಆಯಾಯ ರಾಜ್ಯದ ಪ್ರಮುಖ ಮುಖಂಡರೇ ಪ್ರಚಾರಕ್ಕೆ ಬರುವುದು ಕಮ್ಮಿ, ಅಂತದರಲ್ಲಿ ರಾಷ್ಟ್ರ ಮಟ್ಟದ ನಾಯಕರು, ಸಚಿವರು ಪ್ರಚಾರಕ್ಕೆ ಬರುವುದೆಂದರೆ?
ಹೌದು, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಗೆ ಬಿಜೆಪಿ ಭರ್ಜರಿಯಾಗಿ ಪ್ರಚಾರಕ್ಕೆ ಇಳಿದಿತ್ತು. ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂತಾದವರು ಪ್ರಚಾರದ ಕಣದಲ್ಲಿದ್ದರು.
ಕಳೆದ ಮುನ್ಸಿಪಲ್ ಚುನಾವಣೆಯಲ್ಲಿ ಬೋರ್ಡಿಗೇ ಇಲ್ಲದ ಬಿಜೆಪಿ ಈ ಬಾರಿ ಅಬ್ಬರದ ಪ್ರಚಾರಕ್ಕೆ ಇಳಿದಿತ್ತು ಯಾಕೆ ಎಂದರೆ, ಕಾರಣ ಸ್ಪಷ್ಟ. ಒಂದು ಮುಂದಿನ ತೆಲಂಗಾಣ ಅಸೆಂಬ್ಲಿ ಚುನಾವಣೆಯ ಪೂರ್ವತಯಾರಿ, ಇನ್ನೊಂದು, ಇಲ್ಲಿ ಪಕ್ಷದ ಬೇರನ್ನು ವಿಸ್ತರಿಸಬಹುದು ಎನ್ನುವ ಮುನ್ಸೂಚನೆ ಬಿಜೆಪಿಗೆ ಸಿಕ್ಕಿದ್ದು.
150 ಸದಸ್ಯ ಬಲದ ಹೈದರಾಬಾದ್ ಪಾಲಿಕೆಯ ಚುನಾವಣೆ ಸದ್ಯ (ಡಿ 1) ಚಾಲ್ತಿಯಲ್ಲಿದೆ. ಕಳೆದ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) 99 ಮತ್ತು ಓವೈಸಿಯ ಎಐಎಂಐಎಂ 44 ಮತ್ತು ಬಿಜೆಪಿ ನಾಲ್ಕು ಸ್ಥಾನವನ್ನು ಗೆದ್ದಿತ್ತು. ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ, ಬಿಜೆಪಿಗೆ ಸಿಕ್ಕ ಮುನ್ಸೂಚನೆ ಎನು? ಮುಂದೆ ಓದಿ

ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಕಾರುಬಾರು
ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಕಾರುಬಾರೇ ಜೋರು. ಇದಕ್ಕೆ ಬ್ರೇಕ್ ಹಾಕುವುದಕ್ಕೆ ಇಡೀ ಹೈದರಾಬಾದ್ ಮತ್ತು ಸಿಕಂದರಾಬಾದ್ ನಲ್ಲಿ ಬಿಜೆಪಿ, ಸಾರ್ವಜನಿಕರ ಮುಂದಿಟ್ಟಿದ್ದು, ಲೋಕಲ್ ಸಮಸ್ಯೆಗಿಂತ ಹೆಚ್ಚಾಗಿ, ಹಿಂದುತ್ವದ ಪ್ರಯೋಗ. ಓವೈಸಿ ಹೇಗೆ ಮುಸ್ಲಿಮರನ್ನೇ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೋ ಅದಕ್ಕೆ ಕೌಂಟರ್ ಆಗಿ ಬಿಜೆಪಿ ಇಲ್ಲಿ ಹಿಂದುತ್ವದ ಅಸ್ತ್ರವನ್ನು ಪ್ರಯೋಗಿಸಿತು. (ಚಿತ್ರ:ಪಿಟಿಐ)

ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ
ಇನ್ನೊಂದು ಕಡೆ ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಹೈದರಾಬಾದ್ ನಗರದ ಹೆಸರನ್ನು ಭಾಗ್ಯನಗರವನ್ನಾಗಿ ಮಾಡುವುದಾಗಿ ಹೇಳಿದರು. ತೆಲಂಗಾಣದ ಸಿಎಂ ಕೆಸಿಆರ್ ಗಿಂತ ಬಿಜೆಪಿಯ ಟಾರ್ಗೆಟ್ ಓವೈಸಿ ಎನ್ನುವುದು ಅತ್ಯಂತ ಸ್ಪಷ್ಟವಾಗಿತ್ತು. ಕೆಲವೊಂದು ವಿವಾದಕಾರಿ ಹೇಳಿಕೆಯನ್ನೂ ತೇಜಸ್ವಿ ಸೂರ್ಯ ನೀಡಿದರು. (ಚಿತ್ರ:ಪಿಟಿಐ)

ಲೋಕಲ್ ಸಮಸ್ಯೆಯ ಜೊತೆಗೆ ರಾಷ್ಟ್ರೀಯತೆ
ಲೋಕಲ್ ಸಮಸ್ಯೆಯ ಜೊತೆಗೆ ರಾಷ್ಟ್ರೀಯತೆ, ಭಾರತ ಮತ್ತು ಪಾಕಿಸ್ತಾನ, ಹಿಂದುತ್ವಕ್ಕೆ ಹೆಚ್ಚಿನ ಒತ್ತು ನೀಡಿ ಪ್ರಚಾರ ಮಾಡಿದ ಬಿಜೆಪಿಗೆ, ಈ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಮೇಯರ್ ಆಗುವ ಕನಸು ಇಲ್ಲದಿದ್ದರೂ, ತಮ್ಮ ಬೇಸ್ ಅನ್ನು ವೃದ್ದಿಸಿಕೊಳ್ಳುವ ಲೆಕ್ಕಾಚಾರವನ್ನು ಹೊಂದಿದೆ. ಅದಕ್ಕೆ ಇಲ್ಲಿ ಪೂರಕವಾದ ವಾತಾವರಣವೂ ಇದೆ ಎನ್ನುವ ಮಾತು ಕೇಳಿಬರುತ್ತಿದೆ. (ಚಿತ್ರ:ಪಿಟಿಐ)
Recommended Video

ಯೋಗಿ ಆದಿತ್ಯನಾಥ್ ನಡೆಸಿದ ರೋಡ್ ಶೋ
ಹೈದರಾಬಾದ್ ಮುನ್ಸಿಪಲ್ ಚುನಾವಣೆಯ ಹೊಸ್ತಿಲಲ್ಲಿ, ಕೋವಿಡ್ ಲಸಿಕೆ ಘಟಕ, ಹೈದರಾಬಾದ್ ನಗರದಲ್ಲಿರುವ ಭಾರತ್ ಬಯೋಟೆಕ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದರು. ಇನ್ನು, ಅಮಿತ್ ಶಾ ರೋಡ್ ಶೋಗೆ ಜನಪ್ರವಾಹವೇ ಹರಿದುಬಂತು. ಹಳೇ ಸಿಟಿಯಲ್ಲಿ ಯೋಗಿ ಆದಿತ್ಯನಾಥ್ ನಡೆಸಿದ ರೋಡ್ ಶೋಗೂ ಉತ್ತಮ ಪ್ರತಿಕ್ರಿಯೆ ಕಂಡು ಬಂತು. ಒಟ್ಟಿನಲ್ಲಿ, ಬಿಜೆಪಿಯ ರಣತಂತ್ರ ಟಿಆರ್ ಎಸ್ ಮತ್ತು ಓವೈಸಿಗಂತೂ ನಿದ್ದೆಯಿಲ್ಲದ ರಾತ್ರಿಯಾಗುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. (ಚಿತ್ರ:ಪಿಟಿಐ)
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications