ಹೈದರಾಬಾದ್: 65 ವರ್ಷದ ವೃದ್ಧನಿಗೆ 16ರ ಹುಡುಗಿಯ ಮದುವೆ?
16 ವರ್ಷದ ಹುಡುಗಿಯೊಬ್ಬಳನ್ನು ಮದುವೆಯಾಗಿ ಮಸ್ಕಟ್ ಗೆ ಕರೆಯೊದ್ದಿರುವ 65ರ ಅರಬ್ ದೇಶದ ಮುದುಕ. ಹೈದರಾಬಾದ್ ನಲ್ಲಿ ನಡೆದಿರುವ ಘಟನೆ. ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರಿಂದಾಗಿ ಪ್ರಕರಣ ಬಯಲಿಗೆ.
ಹೈದರಾಬಾದ್, ಆಗಸ್ಟ್ 17: ಇಲ್ಲಿನ 16 ವರ್ಷದ ಮುಸ್ಲಿಂ ಹುಡುಗಿಯೊಬ್ಬಳನ್ನು ಆಕೆಯ ತಂದೆಯೇ ಅರಬ್ ದೇಶದ 65 ವರ್ಷದ ಮುದುಕನಾಗಿರುವ ಶೇಖ್ ಒಬ್ಬರಿಗೆ ಮದುವೆ ಮಾಡಿರುವುದಾಗಿ ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.
ದೂರು ನೀಡಿರುವ ಮಹಿಳೆ ಹೆಸರು ಸಯೀದ್ ಉನ್ನೀಸಾ. ಇವರ ಕುಟುಂಬ ನವಾಬ್ ಸಾಹೇಬ್ ಕುಂಟಾದಲ್ಲಿದೆ. ಆಕೆ ನೀಡಿರುವ ದೂರಿನ ಪ್ರಕಾರ, ಸಯೀದ್ ಉನ್ನೀಸಾಳ ಪತಿ ಸಿಕಂದರ್, ಒಮನ್ ದೇಶದ ಅಹ್ಮದ್ ಎಂಬ 65 ವರ್ಷದ ವೃದ್ಧನಿಗೆ ತನ್ನ ಮಗಳನ್ನು ಮದುವೆ ಮಾಡುವ ಇರಾದೆಯನ್ನು ಇದೇ ವರ್ಷದ ರಂಜಾನ್ ಗೂ ಮುನ್ನ ವ್ಯಕ್ತಪಡಿಸಿದ್ದ. ಆದರೆ, ಇದಕ್ಕೆ ಉನ್ನೀಸಾ ಒಪ್ಪಿರಲಿಲ್ಲ. ಈ ವಿಚಾರವನ್ನು ಅಲ್ಲಿಗೇ ಬಿಟ್ಟಂತೆ ನಟಿಸಿದ್ದ ಸಿಕಂದರ್, ಮಗಳನ್ನು ಆಕೆಯ ತಾಯಿಗೆ ಗೊತ್ತಿಲ್ಲದೆ, ವೃದ್ಧ ಅಹ್ಮದ್ ಕೆಲ ದಿನಗಳ ಕಾಲ ತಂಗಿದ್ದ ಬರ್ಕಾದ ಹೊಟೆಲ್ ಗೆ ಕರೆದುಕೊಂಡು ಹೋಗಿ ಅಲ್ಲಿ ಇಸ್ಲಾಂ ಧರ್ಮಗುರುವೊಬ್ಬರನ್ನು ಕರೆಯಿಸಿ, ವಿವಾಹ ನೆರವೇರಿಸಿದ್ದಾನೆ.

ವಿವಾದ ಆದ ಕೂಡಲೇ ಆ ಮುದುಕ, ಬಾಲಕಿಯನ್ನು ಕುವೈತ್ ಗೆ ಕರೆದುಕೊಂಡು ಹೋಗಿದ್ದಾನೆಂದು ಉನ್ನೀಸಾ, ಫಲಾಕುನುಮಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಈ ಬಗ್ಗೆ ತನ್ನನ್ನು ಸಂಪರ್ಕಿಸಿದಾಗ ಉನ್ನೀಸಾ ಅವರಿಗೆ ಉತ್ತರಿಸಿರುವ ಆ ಮುದುಕ, ಸಿಕಂದರ್ ಅವರು ತನ್ನ ಬಳಿಯಿಂದ 5 ಲಕ್ಷ ರು. ಪಡೆದು ಬಾಲಕಿಯನ್ನು ತನಗೆ ವಿವಾಹ ಮಾಡಿಕೊಟ್ಟಿದ್ದಾನೆ. ಹಾಗಾಗಿ, ತನ್ನ 5 ಲಕ್ಷ ರು. ಮರಳಿಸಿದರೆ, ತಾನು ಬಾಲಕಿಯನ್ನು ಹಿಂದಿರುಗಿಸುವುದಾಗಿ ಹೇಳಿದ್ದಾನೆಂದು ಉನ್ನೀಸಾ ತಿಳಿಸಿದ್ದಾಳೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications