ಹುಬ್ಬಳ್ಳಿಯಲ್ಲಿ ಖಾಲಿ ಹೊಡೆಯುತ್ತಿರುವ ವೈನ್ ಶಾಪ್ ಗಳು
ಹುಬ್ಬಳ್ಳಿ, ನವೆಂಬರ್ 17: ಗಂಡ್ಮಕ್ಕಳ ತವರೆಂದೇ ಪ್ರಸಿದ್ಧಿ ಪಡೆದಿರುವ ಬಾರ್ ಮತ್ತು ವೈನ್ ಶಾಪಗಳಲ್ಲಿ ಗಿರಾಕಿಗಳಿಲ್ಲದೇ ವ್ಯಾಪಾರ ಅರ್ಧಕ್ಕರ್ಧ ಇಳಿದಿದೆ.
ಈ ಬಗ್ಗೆ ಮಾತನಾಡಿದ ನಿರೀಕ್ಷಾ ವೈನ್ ಶಾಪ್ ನ ಪಾಂಡು, ಮೊದಲು ಪ್ರತಿನಿತ್ಯ ಕನಿಷ್ಠ ರು 20 ಸಾವಿರ ವಹಿವಾಟು ಆಗುತ್ತಿತ್ತು. ಈಗ ಕೇವಲ ರು 5 ರಿಂದ 6 ಸಾವಿರ ಮಾತ್ರ ಆಗುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಿಲ್ಲ. ದುಡ್ಡು ಇದ್ದರೂ ಖರ್ಚು ಮಾಡುವ ಸ್ಥಿತಿಯಲ್ಲಿ ಕೆಲವರ ಮನಃಸ್ಥಿತಿ ಇಲ್ಲ. ನಾವು ಇಷ್ಟು ದಿನ ರು 500 ಮತ್ತು 1000 ನೋಟಿಗೆ ಚಿಲ್ಲರೆ ನೀಡಿದ್ದೆವು. ಆದರೆ ಈಗ ನಮ್ಮಲ್ಲಿಯೂ ಚಿಲ್ಲರೆ ಸಮಸ್ಯೆ ಇದ್ದುದರಿಂದ ಹಳೆಯ ನೋಟುಗಳನ್ನು ತೆಗೆದುಕೊಳ್ಳುತ್ತಿಲ್ಲ.[1,000 ರೂಪಾಯಿಗೆ ತಿಲಾಂಜಲಿ, ಹೊಸ ನೋಟು ಚಲಾವಣೆ ಇಲ್ಲ]

ಇನ್ನು ಪರೋಕ್ಷವಾಗಿ ಬಾರ್ ಮತ್ತು ವೈನ ಶಾಪ್ ಗಳಿಂದ ಉದ್ಯೋಗ ಕಂಡುಕೊಂಡಿದ್ದ ಎಗ್ರೈಸ್ ಅಂಗಡಿ, ಪಾನ್ ಶಾಪ್, ಚಿಕನ್ ಕಾರ್ನರ್, ಪಿಶ್ ಸೆಂಟರಗಳಲ್ಲಿ ವ್ಯಾಪಾರವಿಲ್ಲದೇ ಅವರ ಜೀವನ ನಡೆಯುವುದೇ ಕಷ್ಟವಾಗಿದೆ. ಪ್ರತಿನಿತ್ಯ ರು 3 ರಿಂದ 4 ಸಾವಿರ ವಹಿವಾಟು ಮಾಡುತ್ತಿದ್ದವರು ಈಗ ರು 500 ಬಂದರೆ ಸಾಕಪ್ಪಾ ಎಂದು ಗೋಳು ಹೊಯ್ದುಕೊಳ್ಳುವಂತಾಗಿದೆ. ಮೊದಲೇ ಪ್ರತಿದಿನ ಇಂತಿಷ್ಟು ಹಣ ತುಂಬುತ್ತೇನೆ ಎಂದು ಹೇಳಿಕೊಂಡು ಕೆಲವರ ಬಳಿ ಸಾಲ ಮಾಡಿದವರು ಈಗ ಹಣ ತುಂಬಲು ಸಾಧ್ಯವಾಗದೆ ಅಂಗಡಿಗಳನ್ನೇ ಬಂದ್ ಮಾಡುತ್ತಿದ್ದಾರೆ.
ಇನ್ನು ಜನನಿಬಿಡ ಸ್ಥಳಗಳಾಗಿರುವ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶಗಳಲ್ಲಿಯೂ ಕೂಡ ವ್ಯಾಪಾರ ಅಷ್ಟಕ್ಕಷ್ಟೆ. ಮೊದಲು ಬಾರ್ ನಲ್ಲಿ ಸಪ್ಲೈಯರ್ ಗಳು ಸಾಕಷ್ಟು ಸಂಖ್ಯೆ ಟಿಪ್ಸ್ ಜೇಬಿಗಿಳಿಸಿಕೊಳ್ಳುತ್ತಿದ್ದರು. ಈಗ ಅವರಿಗೂ ಪಿಡುಗಾಸು ದೊರೆಯುತ್ತಿಲ್ಲ.
ಇನ್ನು ಕೆಲ ನಿತ್ಯ ಕುಡಿಯುವ ಅಭ್ಯಾಸ ಉಳ್ಳವರು ಎಂದಿಗಿಂತ ಕಡಿಮೆ ಪ್ರಮಾಣದಲ್ಲಿ ಕುಡಿದು ತಮ್ಮ ಚಟವನ್ನು ತೀರಿಸಿಕೊಳ್ಳುತ್ತಿದ್ದಾರೆ.[ಚಿತ್ರಗಳಲ್ಲಿ : ಬ್ಯಾಂಕುಗಳಲ್ಲಿ ಬೆರಳುಗಳಿಗೆ ಅಂಟಿದ ಮಸಿ]
ಇದೇ ರೀತಿ ಖಾಸಗಿ ಕಂಪನಿ ಕುಡಿಯುವ ನೀರು, ಸೋಡಾ, ಕೂಲ ಡ್ರಿಂಕ್ಸ್ ಮಾರಾಟಗಾರರಿಗೂ ಹೊಡೆತ ಬಿದ್ದಿದ್ದು, ದಿನ ನಿತ್ಯ ಐದಾರು ಟ್ರಿಪ್ ಸ್ಪಲೈ ಮಾಡುತ್ತಿದ್ದವರು ಈಗ ಒಂದು ಟ್ರಿಪ್ ಆರ್ಡರ್ ಬಂದರೆ ಸಾಕ್ರೀ ಪಾ ಎನ್ನುತ್ತಾರೆ.
ಆದರೆ, ಕೆಲವರು ಎಂಎಸ್ಐಎಲ್ ಸ್ಥಾಪಿಸಿರುವ ಮದ್ಯದಂಗಡಿಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಿ ತಮ್ಮ ತಮ್ಮ ಮನೆಗಳಲ್ಲಿ ಕುಡಿಯುತ್ತಿದ್ದಾರೆ. ಇದರಿಂದ ಹಣವೂ ಉಳಿತಾಯವಾಯ್ತು ಮತ್ತು ಮನೆಯಲ್ಲಿದ್ದಂಗಾಯ್ತು ಎನ್ನುವಂತಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?












Click it and Unblock the Notifications