Get Updates
Get notified of breaking news, exclusive insights, and must-see stories!

ಪಿಐಟಿ ಟ್ಯಾಗ್‌: ಮಾನವ-ಹಾವಿನ ಸಂಘರ್ಷ ತಡೆಗಾಗಿ ಅರಣ್ಯ ಇಲಾಖೆ ಮಹತ್ವದ ಅಧ್ಯಯನ

ಹುಬ್ಬಳ್ಳಿ, ನವೆಂಬರ್‌ 14: ಮಾನವ-ಹಾವಿನ ಸಂಘರ್ಷ ಕಡಿಮೆ ಮಾಡಲು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅರಣ್ಯ ಇಲಾಖೆ ಮಹತ್ವದ ಅಧ್ಯಯನಕ್ಕೆ ಮುಂದಾಗಿದೆ. ಹಾವುಗಳಿಗೆ ನಿಷ್ಕ್ರಿಯ ಇಂಟಿಗ್ರೇಟೆಡ್ ಟ್ರಾನ್ಸ್‌ಪಾಂಡರ್ (ಪಿಐಟಿ) ಟ್ಯಾಗ್‌ಗಳನ್ನು ಅಳವಡಿಸಲು ಕರ್ನಾಟಕ ಅರಣ್ಯ ಇಲಾಖೆಯು ಸಂಶೋಧನಾ ಮೌಲ್ಯಮಾಪನ ಸಮಿತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಸಂಸ್ಥೆಗೆ ಅನುಮತಿ ನೀಡಿದೆ.

ಇದು ಹಾವುಗಳ ಚಲನವಲನವನ್ನು ಪತ್ತೆಹಚ್ಚಲು ಮತ್ತು ಮಾನವ-ಹಾವುಗಳ ಘರ್ಷಣೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಸ್ತುತ, ಅದು ನಾಗರಹಾವು, ರಸೆಲ್ಸ್ ವೈಪರ್ ಮತ್ತು ಪಿಟ್ ವೈಪರ್‌ಗಳ ಕುರಿತು ಮೂರು ಖಾಸಗಿ ಕಾರ್ಯಯೋಜನೆಗಳ ಮುಖಾಂತರ ಕರ್ನಾಟಕ ಅರಣ್ಯ ಇಲಾಖೆಯು ಟೆಲಿಮೆಟ್ರಿಕ್ ಅಧ್ಯಯನಗಳನ್ನು ನಡೆಸುತ್ತಿವೆ.

forest-department-has-granted-permission

ಅರಣ್ಯ ಇಲಾಖೆಯು ಎಲ್ಲಾ ರೀತಿಯ ಹಾವುಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ. ಕೆಟಿಆರ್‌ ಸಂಸ್ಥೆಯಲ್ಲಿ ತರಬೇತಿ ಪಡೆದ ಸಿಬ್ಬಂದಿ, ಸರೀಸೃಪವು ಮನುಷ್ಯರ ಜೊತೆ ಎಷ್ಟು ಬಾರಿ ಸಂಘರ್ಷಕ್ಕೆ ಒಳಗಾಗುತ್ತದೆ ಎಂಬುದನ್ನ ಅರ್ಥಮಾಡಿಕೊಳ್ಳಲಾಗುವುದು. ಸಂಸ್ಥೆಯ ಸಿಬ್ಬಂದಿ ರಕ್ಷಿಸುವ ಪ್ರತಿಯೊಂದು ಹಾವು ವಿಷಕಾರಿ ಅಥವಾ ವಿಷಕಾರಿಯಲ್ಲದಿದ್ದರೂ ಅದರೊಳಗೆ ಮೈಕ್ರೋಚಿಪ್ ಅನ್ನು ಸೇರಿಸುತ್ತಾರೆ. ದತ್ತಾಂಶದ ಆಧಾರದ ಮೇಲೆ ಸಂಘರ್ಷವನ್ನು ತಗ್ಗಿಸುವ ಕ್ರಮ ಇದಾಗಿದೆ.

ಕೆಟಿಆರ್‌ ಸಂಸ್ಥೆಯ ಉಪ ವಲಯ ಅರಣ್ಯಾಧಿಕಾರಿಗಳ ಪ್ರಕಾರ ಬೇಸಿಗೆಯಲ್ಲಿ ದಿನಕ್ಕೆ ಸರಾಸರಿ ಐದರಿಂದ ಎಂಟು ಹಾವುಗಳನ್ನು ರಕ್ಷಿಸಲಾಗುತ್ತದೆ.

ಭಾರತದಲ್ಲಿನ ಮಾನವ-ವನ್ಯಜೀವಿ ಸಂಘರ್ಷಗಳಲ್ಲಿ ಹಾವು ಕಡಿತವು ಅತಿ ಹೆಚ್ಚು ಮಾನವ ಸಾವುನೋವುಗಳಿಗೆ ಕಾರಣ ವಾಗುತ್ತದೆ ಎಂದು ವರದಿಗಳು ಸೂಚಿಸುತ್ತವೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಪ್ರತಿ ವರ್ಷ ಭಾರತವು ಸುಮಾರು 50 ಲಕ್ಷ ಹಾವು ಕಡಿತ ಪ್ರಸಂಗಗಳು ವರದಿಯಾಗುತ್ತವೆ. ಇದರ ಪರಿಣಾಮವಾಗಿ 81,000 ರಿಂದ 1.38 ಲಕ್ಷ ಜನರು ಸಾವನ್ನಪ್ಪುತ್ತಾರೆ ಮತ್ತು ಬಾಧಿತರ ಪೈಕಿ 4 ಲಕ್ಷಕ್ಕೂ ಹೆಚ್ಚು ಜನರಿಗೆ ಅಂಗಚ್ಛೇದನ ಮಾಡಲಾಗುತ್ತದೆ.

forest-department-has-granted-permission

ಉತ್ತರ ಕನ್ನಡದ ದಟ್ಟ ಕಾಡುಗಳೊಳಗೆ, ವಿಶೇಷವಾಗಿ ಕೆಟಿಆರ್ ವ್ಯಾಪ್ತಿಯಲ್ಲಿ ಭಾರೀ ಜನಸಂಖ್ಯೆ ವಾಸಿಸುವುದನ್ನು ಗಮನಿಸಿದರೆ, ಮಾನವ-ಹಾವುಗಳ ಸಂಘರ್ಷದ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಮತ್ತು ಸಹಬಾಳ್ವೆಯ ಕಡೆಗೆ ಪರಿಹಾರವನ್ನು ಕಂಡುಹಿಡಿಯಲು ಹೆಚ್ಚಿನ ಅಧ್ಯ ಯನವನ್ನು ನಡೆಸುವ ಅಗತ್ಯವಿದೆ.

ಕೆಟಿಆರ್ ಪ್ರದೇಶವು ನಾಗರಹಾವು, ಸ್ಪೆಕ್ಟಕಲ್ಡ್​​​ ನಾಗರಹಾವು, ರಸೆಲ್ಸ್ ವೈಪರ್, ಗರಗಸದ ವೈಪರ್, ಸಾಮಾನ್ಯ ಕ್ರೈಟ್, ವೈನ್ ಹಾವು, ಹಸಿರು ಅಥವಾ ಬಿದಿರು ಪಿಟ್ ವೈಪರ್ (ಎಲ್ಲಾ ವಿಷಕಾರಿ), ಭಾರತೀಯ ರಾಕ್ ಹೆಬ್ಬಾವು ಮತ್ತು ಇಲಿ ಹಾವು ಸೇರಿದಂತೆ 40 ಕ್ಕೂ ಹೆಚ್ಚು ಬಗೆಯ ಹಾವುಗಳಿಗೆ ನೆಲೆಯಾಗಿದೆ ಎನ್ನಲಾಗಿದೆ.

ಕೆಟಿಆರ್‌ನ ವನ್ಯಜೀವಿ ಸಂಶೋಧನೆ ಮತ್ತು ತರಬೇತಿ ಕೇಂದ್ರವು ಡೇಟಾವನ್ನು ಸಂಗ್ರಹಿಸುತ್ತದೆ, ಅದನ್ನು ವಿಶ್ಲೇಷಿಸುತ್ತದೆ ಮತ್ತು ಸಂಘರ್ಷ ತಗ್ಗಿಸಲು ತೆಗೆದುಕೊಳ್ಳ ಬೇಕಾದ ಕ್ರಮಗಳನ್ನು ರೂಪಿಸುತ್ತದೆ. ಯೋಜನೆಯು ಮೂರು ಮುಖ್ಯ ಉದ್ದೇಶಗಳನ್ನು ಹೊಂದಿದೆ. ರಕ್ಷಿಸಿದ ಎಲ್ಲಾ ಹಾವುಗಳ ವೈಜ್ಞಾನಿಕ ಡೇಟಾಬೇಸ್ ಅನ್ನು ನಿರ್ವಹಿಸುವುದು, PIT-ಟ್ಯಾಗಿಂಗ್ ಮೂಲಕ ಅವುಗಳ ಮೇಲ್ವಿಚಾರಣೆ ಮಾಡಿ ಮತ್ತು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳ ಸಾಮರ್ಥ್ಯ ಮತ್ತು ಇತ್ತೀಚಿನ ಮೇಲ್ವಿಚಾರಣಾ ತಂತ್ರಗಳ ಮೂಲಕ ಹಾವುಗಳ ಸಂರಕ್ಷಣೆಗೆ ಮುಂದಾಗುತ್ತೇವೆ ಎನ್ನಲಾಗಿದೆ.

ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಇದೇ ರೀತಿಯ ಅಧ್ಯಯನಗಳು ನಾಗರಹಾವಿನ ಬಗ್ಗೆ ಹಲವಾರು ರಹಸ್ಯಗಳನ್ನು ಬಹಿರಂಗಪಡಿಸಿದ್ದು ಹುಣಸೂರು ಮೂಲದ ಹರ್ಪಿಟಾಲಜಿಸ್ಟ್ ಗೆರ್ರಿ ಮಾರ್ಟಿನ್ ಅವರು ಹಾವು ಕಡಿತದಿಂದ ರೈತರ ಸಾವು ಸಮಭವಿಸುವುದರ ಹಿಂದೆ ನಾಲ್ಕು ವಿಷಕಾರಿ ಹಾವುಗಳಲ್ಲಿ ಒಂದಾದ ರಸೆಲ್ಸ್ ವೈಪರ್ ಅನ್ನು ಅಧ್ಯಯನ ಮಾಡುತ್ತಿದ್ದಾರೆ. ಆಗುಂಬೆಯ ಮಳೆಕಾಡು ಪರಿಸರ ವಿಜ್ಞಾನದ ಕಳಿಂಗ ಕೇಂದ್ರದ ಸಂಶೋಧಕಿ ಪ್ರಿಯಾಂಕಾ ಸ್ವಾಮಿ ಪಿಟ್ ವೈಪರ್‌ಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+