ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ಬೆಳವಣಿಗೆ; ಜಾರಕಿಹೊಳಿ ಬ್ರದರ್ಸ್ಗೆ ಸಂಕಷ್ಟ?
ಹುಬ್ಬಳ್ಳಿ, ಡಿಸೆಂಬರ್ 29: ಹುಬ್ಬಳ್ಳಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಹಲವು ವಿಚಾರಗಳಿಂದಾಗಿ ಮಹತ್ವ ಪಡೆದುಕೊಂಡಿದೆ. ವಿಧಾನಸಭೆ ಉಪ ಚುನಾವಣೆ, ವಿಧಾನ ಪರಿಷತ್ ಫಲಿತಾಂಶದ ನಂತರ ನಡೆಯುತ್ತಿರುವ ಕಾರ್ಯಕಾರಿಣಿಯಾಗಿರುವುದರ ಜೊತೆಗೆ, ಮುಂಬರುವ ಚುನಾವಣೆಗಳ ಕಾರಣಗಿಂದಾಗಿ ಮಹತ್ವದ್ದಾಗಿದೆ.
ಬಿಜೆಪಿ ಕಾರ್ಯಕಾರಿಣಿಯಲ್ಲಿ ಪ್ರಮುಖ ರಾಜಕೀಯ ಚರ್ಚೆಗಳೂ ನಡೆದಿದ್ದು, ಬಿಜೆಪಿ ಧಾರವಾಡ ಮಹಾನಗರ ಘಟಕ ಅಧ್ಯಕ್ಷ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ರಾಜೀನಾಮೆ ನೀಡಿದ್ದಾರೆ. ಮೇಲ್ನೋಟಕ್ಕೆ ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ವರ್ತಿಸಿರುವ ಜಾರಕಿಹೊಳಿ ಸಹೋದರರ ವಿರುದ್ಧವೂ ಕಾರ್ಯಕಾರಿಣಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಾರೆಯೇ ಎಂಬ ಪ್ರಶ್ನೆಯೂ ಮೂಡಿದೆ.
ಧಾರವಾಡ
ಬಿಜೆಪಿಯಲ್ಲಿ
ಭಿನ್ನಮತ
ಇದರೊಂದಿಗೆ
ಧಾರವಾಡದ
ಬಿಜೆಪಿಯಲ್ಲಿ
ಭಿನ್ನಮತ
ಸ್ಫೋಟಗೊಂಡಿದ್ದು,
ಧಾರವಾಡ
ಅಂದರೆ
ಬಿಜೆಪಿಯ
ಭದ್ರಕೋಟೆ
ಅನ್ನುವ
ಮಾತಿದೆ.
ಅದೇ
ಹಿನ್ನೆಲೆಯಲ್ಲಿ
ವಾಣಿಜ್ಯ
ನಗರಿಯಲ್ಲಿ
ಬಿಜೆಪಿ
ಕಾರ್ಯಕಾರಿಣಿ
ಆಯೋಜನೆ
ಮಾಡಲಾಗಿದೆ.
ಆದರೆ
ಪಕ್ಷದ
ಆಂತರಿಕ
ಚಟುವಟಿಕೆಗಳಿಂದ
ಬೇಸತ್ತು
ಅರವಿಂದ್
ಬೆಲ್ಲದ್
ರಾಜೀನಾಮೆ
ನೀಡಿದ್ದಾರೆ
ಎನ್ನಲಾಗಿದೆ.
ಮಹಾನಗರ ಘಟಕ ಅಧ್ಯಕ್ಷ ಸ್ಥಾನದಿಂದ ವಿಮುಕ್ತಿ ಮಾಡಿ ಎಂದು ಶಾಸಕ ಅರವಿಂದ ಬೆಲ್ಲದ ಕೇಳಿಕೊಂಡಿದ್ದಾರೆ. ಕಾರ್ಯಕಾರಣಿಯಲ್ಲಿಯೇ ತಮ್ಮ ರಾಜೀನಾಮೆ ಪ್ರಸ್ತಾಪಿಸಿದ ಬೆಲ್ಲದ್, ಅಲ್ಲಿಯೇ ರಾಜೀನಾಮೆ ಪತ್ರ ನೀಡಿದ್ದಾರೆ. ವಿಧಾನ ಪರಿಷತ್ ಚುನಾವಣೆ ವಿಚಾರದಲ್ಲಿ ಶೆಟ್ಟರ್ ಅಸಮಾಧಾನಗೊಂಡಿದ್ದುದು ಇದಕ್ಕೆ ಕಾರಣ ಎಂಬ ಮಾಹಿತಿ ಇದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಎರಡನೇ ಪ್ರಾಶಸ್ತ್ಯ ಮತದಲ್ಲಿ ಗೆಲುವು ಸಾಧಿಸಿದ್ದರು.
ಇದರಿಂದಾಗಿ ತೀವ್ರ ಬೇಸರಗೊಂಡಿದ್ದ ಮಾಜಿ ಜಗದೀಶ್ ಶೆಟ್ಟರ್, ದೆಹಲಿಗೆ ತೆರಳಿ ಹೈಕಮಾಂಡ್ಗೂ ದೂರು ನೀಡುವುದಕ್ಕೆ ಮುಂದಾಗಿದ್ದರು. ಅಮಿತ್ ಶಾ, ಜೆ.ಪಿ. ನಡ್ಡಾ ಭೇಟಿಯಾಗಿ ದೂರು ನೀಡುವುದಕ್ಕೆ ಗಂಭೀರ ಚಿಂತನೆ ನಡೆಸಿದ್ದರು. ಅರವಿಂದ್ ಬೆಲ್ಲದ್ ವಿರುದ್ಧ ದೂರು ಕೊಡಲು ಮುಂದಾಗಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಬೇಸತ್ತು ಬೆಲ್ಲದ್ ಧಾರವಾಡ ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಜಾರಕಿಹೊಳಿ
ಸಹೋದರರ
ವಿರುದ್ಧ
ಕ್ರಮ
ಅರವಿಂದ್
ಬೆಲ್ಲದ್
ತಲೆದಂಡದ
ಬೆನ್ನ
ಹಿಂದೆಯೇ
ಜಾರಕಿಹೊಳಿ
ಸಹೋದರರ
ವಿರುದ್ಧವೂ
ಕ್ರಮ
ತೆಗೆದುಕೊಳ್ಳಲಾಗುತ್ತದೆ
ಅನ್ನುವ
ಚರ್ಚೆ
ಬಿಜೆಪಿ
ವಲಯದಲ್ಲಿ
ಶುರವಾಗಿದೆ.
ಎರಡನೆಯ
ದಿನವಾದ
ಇಂದು
ಜಾರಕಿಹೊಳಿ
ಬ್ರದರ್ಸ್
ವಿರುದ್ಧ
ಶಿಸ್ತು
ಕ್ರಮವಾಗುತ್ತಾ?
ಅನ್ನುವ
ಪ್ರಶ್ನೆ
ಎದ್ದಿದೆ.
ಮೊದಲ
ದಿನ
ಸರ್ಕಾರದ
ಸಾಧನೆಯ
ಬಗ್ಗೆ
ಮಹತ್ವದ
ಚರ್ಚೆ
ನಡೆದಿತ್ತು.
ಎರಡನೆಯ
ದಿನ
ಈ
ಹಿಂದಿನ
ಚುನಾವಣೆಗಳಲ್ಲಿನ
ಸೋಲಿನ
ಪರಾಮರ್ಶೆ
ಮಹತ್ವ
ಪಡೆಯಲಿದೆ
ಎನ್ನಲಾಗಿದೆ.
ಬಿಜೆಪಿ ಹೈಕಮಾಂಡ್ ಬೆಳಗಾವಿ ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ಕಾರ್ಯಕಾರಿಣಿ ಮೂಲಕ ಸ್ಪಷ್ಟ ಸಂದೇಶ ರವಾನಿಸುವ ಸಾಧ್ಯತೆಗಳಿವೆ.
ಬೆಳಗಾವಿ
ಸೋಲಿನ
ಕುರಿತು
ಚರ್ಚೆ
ಬೇಡ
ಬೇಡವೆಂದರೂ
ಪಕ್ಷದ
ಅಧಿಕೃತ
ಅಭ್ಯರ್ಥಿ
ವಿರುದ್ಧ
ಬಂಡಾಯ
ಅಭ್ಯರ್ಥಿಯನ್ನು
ಅಖಾಡಕ್ಕಿಳಿಸಿದ್ದ
ಜಾರಕಿಹೊಳಿ
ಬ್ರದರ್ಸ್,
ತಮ್ಮ
ಸಹೋದರ
ಲಖನ್
ಜಾರಕಿಹೊಳಿಯನ್ನು
ಗೆಲ್ಲಿಸಿದ್ದರು.
ಹೀಗಾಗಿ
ಬಿಜೆಪಿ
ಅಭ್ಯರ್ಥಿಯ
ಸೋಲಿಗೆ
ಕಾರಣವಾದ
ಅಂಶಗಳ
ಕುರಿತು
ಚರ್ಚೆ
ನಡೆಯಲಿದೆ.
ಜಾರಕಿಹೊಳಿ ಸಹೋದರರ ಇಬ್ಬಗೆಯ ನೀತಿಯ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಬಿಜೆಪಿ ಅಶಿಸ್ತನ್ನೂ ಎಂದಿಗೂ ಸಹಿಸುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯರು ಈಗಾಗಲೇ ಸಂದೇಶ ರವಾನಿಸಿದ್ದಾರೆ.
ಬೆಳಗಾವಿ ವಿಭಾಗದಲ್ಲಿ ಬರುವ ಹುಬ್ಬಳ್ಳಿಯಲ್ಲಿಯೇ ಕಾರ್ಯಕಾರಿಣಿ ನಡೆಯುತ್ತಿದ್ದರೂ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಇತ್ತ ಕಡೆ ಸುಳಿದಿಲ್ಲ. ಇದೆಲ್ಲವನ್ನೂ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂಬ ಮಾಹಿತಿ ಇದೆ.
ಬಿಜೆಪಿ ಕಾರ್ಯಕಾರಿಣಿಯಲ್ಲಿ ಈ ಕುರಿತು ಗಂಭೀರ ಸಮಾಲೋಚನೆ ನಡೆಯಲಿದೆ. ಹೈಕಮಾಂಡ್ ಧೈರ್ಯ ತೋರಿದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮ ಖಚಿತ ಅನ್ನುವ ಮಾತೂ ಕೇಳಿ ಬರುತ್ತಿದೆ. ಬುಧವಾರದ ಕಾರ್ಯಕಾರಿಣಿಯಲ್ಲಿ ಇದೆಲ್ಲಕ್ಕೂ ಉತ್ತರ ಸಿಗುವ ಸಾಧ್ಯತೆ ಇದೆ.