ಕಣ್ಣೇ ಇಲ್ಲದ ಕುಟುಂಬಕ್ಕೆ ಆತ್ಮಸ್ಥೈರ್ಯವೇ ಆಸರೆ
ಹುಬ್ಬಳ್ಳಿ, ಡಿಸೆಂಬರ್ 12 : ಒಂದೇ ತುಂಬಿದ ಕುಟುಂಬ, 6 ಜನ ಅಂಧರು.! ಸಹಾಯ ಮಾಡಲು ನಾ ಮುಂದೆ ತಾ ಮುಂದೆ ಎಂದು ಬಂದವರು ಹೆಚ್ಚು , ಆದರೆ ಬರೀ ಪ್ರಚಾರ ಪಡೆದುಕೊಂಡರೆ ಹೊರತು, ಸಹಾಯದ ಹಸ್ತ ಮಾತ್ರ ಚಾಚಲಿಲ್ಲ. ಅಂಧರಾದರೂ ಎಲ್ಲರಂತೆ ಬದುಕು ರೂಪಿಸಿಕೊಂಡು ಜೀವನ ಬಂಡಿ ಸಾಗಿಸುತ್ತಿದ್ದಾರೆ. ಇದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿನ ಬಾಣಕರ ಕುಟುಂಬದ ಚಿತ್ರ. ಈ ಕುಟುಂಬದ ಮುಖ್ಯಸ್ಥ ಕರೆಪ್ಪ ಬಾಣಕರ ಎಂಬಾತನಿಗೆ ನಾಲ್ಕು ಜನ ಹೆಣ್ಣು ಮಕ್ಕಳು. ಆದರೆ ನಾಲ್ಕು ಜನ ಹೆಣ್ಣು ಮಕ್ಕಳಿಗೆ ಬೆಳಕು ನೋಡುವ ಸೌಭಾಗ್ಯವೇ ಇಲ್ಲ.
ಇಷ್ಟೆ ಅಲ್ಲದೇ, ಇತನ ಸಹೋದರ ಹಾಗೂ ಸಹೋದರಿ ಸಹ ಅಂಧರು. ಇದಕ್ಕೂ ಮೇಲಾಗಿ ಕಿತ್ತು ತಿನ್ನುವ ಬಡತನ. ಜಿಲ್ಲೆಗೆ ಯಾರಾದರೂ ನಾಯಕರು, ಅಧಿಕಾರಿಗಳು ಆಗಮಿಸಿದ್ದಾರೆಂದರೆ ಸಾಕು, 6 ಜನ ಅಂಧರು ಸಾಲಾಗಿ ನಿಂತು ಸಹಾಯಕ್ಕೆ ಅಂಗಲಾಚಿದ್ದಾರೆ. ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದ ನಾಯಕರನ್ನು, ಅಧಿಕಾರಿಗಳನ್ನು ತಮ್ಮ ಬದುಕಿಗೆ ಆಶಾಕಿರಣ ನೀಡಿ ಎಂದು ಕೇಳಿಕೊಂಡಿದ್ದಾರೆ .

ಆದರೆ ಕೇಳಿದ ಪ್ರತಿಯೊಬ್ಬರು ನಾನಿದ್ದೇನೆ ಎಂಬ ಭರವಸೆ ನೀಡಿದ್ದಾರೆಯೇ ಹೊರತು ಸಹಾಯದ ಕರುಣೆಯ ಮಾತ್ರ ಪ್ರದರ್ಶಿಸಿಲ್ಲ. ಇಂತಹ ಪೊಳ್ಳು ಭರವಸೆ ಮಾತುಗಳಿಂದ ರೋಸಿ ಹೋಗಿದ್ದಾರೆ.
ಇತ್ತ ಬಾಡಿಗೆ ಮನೆಯಲ್ಲಿ ಮಾಲೀಕರು ಬದುಕು ಸಾಗಿಸಿದರು ಬದುಕಿನಲ್ಲಿ ಆಶಾಭಾವನೆ ಹೊಂದಿದ್ದಾರೆ. ಕಾಂಗ್ರೆಸ್ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಧಾರವಾಡದ ಕಲಾಭವನದಲ್ಲಿ ಅಭಿಯಾನ ಸದಸ್ಯತ್ವದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದಾಗ, ಈ ಅಂಧರನ್ನು ಕಂಡು ಅಂದಿನ ರಾಜ್ಯಯುವ ಘಟಕದ ರಾಜ್ಯಾಧ್ಯಕ್ಷ ಕೃಷ್ಣಭೈರೇಗೌಡ ಹಾಗೂ ಅಂದಿನ ಜಿಲ್ಲಾಧಿಕಾರಿಗೆ ಇವರ ಯೋಗಕ್ಷೇಮದ ಜವಾಬ್ದಾರಿ ವಹಿಸಿಕೊಳ್ಳಿ ಎಂದು ತಿಳಿಸಿದ್ದರು.

ಆದರೆ ಭರವಸೆ ಮಾತ್ರ ಮತ್ತೆ ಕನಸಾಗಿಯೇ ಅಂಧರ ಪಾಲಿಗೆ ಉಳಿಯಿತು. ಇಂತಹ ಭರವಸೆ ಮಾತಿಗೆ, ಜನರ ಕೆಟ್ಟ ಅನುಕಂಪಕ್ಕೆ ಮನನೊಂದ ಅಂಧ ಕುಟುಂಬ ಸದ್ಯ ರಾಮನಗರದ ಆದಿ ಚುಂಚನಗಿರಿ ಆಶ್ರಮದಲ್ಲಿದೆ. ಕುಟುಂಬ ಮುಖ್ಯಸ್ಥ ಕರೆಪ್ಪ ಅಲ್ಲಿಯೇ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ಆತನ ನಾಲ್ಕು ಜನ ಅಂಧ ಮಕ್ಕಳು ರೇಖಾ (14), ಸುರೇಖಾ(12), ಚಂದ್ರಿಕಾ (8), ರೇಖಾ (6) ರಾಮನಗರ ಜಿಲ್ಲೆಯ ಅಂಬಾಲ ಗಂಗಾಧರನಾಥ ಅಂಧ ಮಕ್ಕಳ ಶಾಲೆಯಲ್ಲಿದ್ದಾರೆ. ಬರುವ ನಾಲ್ಕೂವರೆ ಸಾವಿರ ಸಂಬಳದಲ್ಲಿ ಅಂಧ ಸಹೋದರ ಸಣ್ಣಕರೆಪ್ಪ (30), ಸಹೋದರಿ ಮಂಜುಳಾ (26), ತನ್ನ ಕುಟುಂಬ ಹಾಗೂ ಹೆಬ್ಬಳ್ಳಿಯಲ್ಲಿನ ವೃದ್ಧ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ












Click it and Unblock the Notifications