ಹಾವೇರಿ: ಕರಜಗಿ ಗ್ರಾಮದ ಆ್ಯಕ್ಷನ್ ಕಿಂಗ್ ಓಂ ಹೋರಿ ಇನ್ನು ನೆನಪು ಮಾತ್ರ
ಹಾವೇರಿ, ಅಕ್ಟೋಬರ್, 07: ಹಾವೇರಿ ಜಿಲ್ಲೆಯ ಕರಜಗಿ ಗ್ರಾಮದಲ್ಲಿ ತನ್ನ ವಿಶಿಷ್ಟ ಆ್ಯಕ್ಷನ್ ಮತ್ತು ಸ್ಟೈಲ್ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಓ೦ 112 ಎನ್ನುವ ಹೋರಿ ಸಾವನ್ನಪ್ಪಿದೆ. ಇದನ್ನು ಪ್ರೀತಿಯಿಂದ ಕರ್ನಾಟಕದ ಹೋರಿ ಹಬ್ಬದ ಬ್ರಾಂಡ್ ಕರಜಗಿಯ ಓ೦ 112 ಎಂದು ಕರೆಯುತ್ತಿದ್ದರು. ನಿಜಕ್ಕೂ ಕರಜಗಿಯ ಓಂ ಕರ್ನಾಟಕದ ಹೋರಿ ಹಬ್ಬದ ಬ್ರಾಂಡ್ ಆಗಿಯೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಹೋರಿ ಓಟದ ಅಖಾಡದಲ್ಲಿ ತಾನು ಹೆದರುವ ಬದಲಾಗಿ ಸುತ್ತಲೂ ನೆರೆದಿರುವ ಪೈಲ್ವಾನರನ್ನು ಬೆದರಿಸಿ ಗುರಿ ತಲುಪುತ್ತಿತ್ತು. ಇದನ್ನು ಮುಟ್ಟಲು ಜನರು ಭಯಪಡುತ್ತಿದ್ದರು. ಮುಟ್ಟಿದರೂ ಕೂಡ ಹಿಡಿದು ನಿಲ್ಲಿಸಲು ಯಾರಿಂದಲೂ ಸಾಧ್ಯ ಇರುತ್ತಿರಲಿಲ್ಲ.
ಅನೇಕ ಪೈಲ್ವಾನರು ಹಿಡಿದು ನಿಲ್ಲಿಸುವ ಸಾಹಸಕ್ಕೆ ಕೈ ಹಾಕಿದರೂ ಬಗ್ಗುತ್ತಿರಲಿಲ್ಲ. ಆದರೂ ಯಾರ ಕೈಗೂ ಸಿಗದೆ ಮುನ್ನುಗ್ಗುವ ತಾಕತ್ತು 112 ನಂಬರ್ನ ಹೋರಿದಾಗಿತ್ತು. ಕೇವಲ ಎರಡು ವರ್ಷಗಳ ಕಾಲ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಭಾಗವಹಿಸಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿತ್ತು. ಆದರೆ ಇದೀಗ ಚರ್ಮ ಗಂಟು ರೋಗಕ್ಕೆ ತುತ್ತಾಗಿ ಬಾರದ ಲೋಕದತ್ತ ಪಯಣಿಸಿದೆ.

ಹೋರಿ ಸಾಕಿದ ಕುಟುಂಬಸ್ಥರು ಕಣ್ಣೀರು
ಹೋರಿಯನ್ನು ಸಾಕಿದ ಕುಟುಂಬಸ್ಥರು ಮತ್ತು ಲಕ್ಷಾಂತರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಲಕ್ಷಾಂತರ ಪೈಲ್ವಾನರ ಮದ್ಯ ಮಿಂಚಿನಂತಹ ಓಟ ನಿಲ್ಲಿಸಿ ಇದೀಗ ಹೋರಿ ಶಾಂತನಾಗಿ ಮಲಗಿದ್ದಾನೆ. ಓ೦ ಹೆಸರಿನ ಈ ಹೋರಿಯ ಪಾರ್ಥಿವ ಶರೀರವನ್ನು ಸಕಲ ವಾದ್ಯ ವೃಂದದ ಮೂಲಕ ಗ್ರಾಮಸ್ಥರು ಮತ್ತು ಅಭಿಮಾನಿಗಳು ಕರಜಗಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದು, ಕಣ್ಣೀರಿನ ವಿದಾಯ ಹೇಳಿದ್ದಾರೆ.

ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದ ಓ೦
ಕರಜಗಿ ಗ್ರಾಮದ ಕಬ್ಬಡಿ ಪೈಲ್ವಾನ್ ಎಂದೇ ಹೆಸರಾದ ಜಗದೀಶ್ ಮಾನೆಗಾರ ಎಂಬ ಯುವಕ ಎರಡು ವರ್ಷಗಳ ಹಿಂದೆ ಈ ಓ೦ ಹೋರಿಯನ್ನು ಖರೀದಿ ಮಾಡಿದ್ದರು. ಆಗಿನಿಂದ ಓ೦ ಮನೆ ಮಗನಾಗಿಯೇ ಬೆಳೆದಿತ್ತು. ಹೋರಿ ಹಬ್ಬಕ್ಕೆ ಓ೦ ಬರುತ್ತಿದೆ ಎಂದರೆ ಲಕ್ಷಾಂತರ ಅಭಿಮಾನಿಗಳು ಇದರ ಗಾಂಭೀರ್ಯವನ್ನು ನೋಡಲು ಜಮಾಯಿಸುತ್ತಿದ್ದರು. ಯಾಕಂದರೆ ತನ್ನದೇ ಆದ ಅಭಿಮಾನಿಗಳ ತಂಡ ಹೊಂದಿತ್ತು ಈ ಹೋರಿ.

ಹೋರಿ ಹಬ್ಬದ ಸ್ಪೆಷಲ್ ಬ್ರಾಂಡ್ ಓಂ
ಎಲ್ಲ ಹೋರಿಯಂತೇ ಓಂ ಹೋರಿ ಇರಲಿಲ್ಲ, ಬದಲಾಗಿ ಇದರ ವರ್ಚಸ್ಸು ವಿಭಿನ್ನ ರೀತಿಯಲ್ಲಿ ವಿಶೇಷ ಆಗಿತ್ತು. ಆಕ್ಷನ್ ಮತ್ತು ಮಿಂಚಿನ ಓಟದ ಮೂಲಕ ಕೇವಲ ಎರಡೆ ವರ್ಷದಲ್ಲಿ ಹೋದಲ್ಲೆಲ್ಲಾ ಬಂಪರ್ ಬಹುಮಾನ ತನ್ನದಾಗಿಸಿಕೊಂಡಿತ್ತು ಇದು. ಬೈಕ್, ಬಂಗಾರ, ಚಿನ್ನದ ಪದಕ, ಫ್ರಿಡ್ಜ್, ಟ್ರಜುರಿ ಸೇರಿದಂತೆ ಹೀಗೆ ಅನೇಕ ಬಹುಮಾನಗಳನ್ನು ಪಡೆದು ಕರ್ನಾಟಕದ ಹೋರಿ ಹಬ್ಬದ ಸ್ಪೆಷಲ್ ಬ್ರಾಂಡ್ ಆಗಿ ಹೆಸರುವಾಸಿ ಆಗಿತ್ತು.

ಚರ್ಮ ಗಂಟು ರೋಗಕ್ಕೆ ತುತ್ತಾಗಿದ್ದ ಆ್ಯಕ್ಷನ್ ಕಿಂಗ್
ಹೀಗೆ ಕೇವಲ ಎರಡೇ ವರ್ಷದಲ್ಲಿ ಹೊರಿ ಹಬ್ಬದಲ್ಲಿ ಮಿಂಚಿದ್ದ ಓ೦ ಸುಮಾರು ತಿಂಗಳಿನಿಂದ ಚರ್ಮ ಗಂಟು ರೋಗದಿಂದ ಬಳಲುತ್ತಿತ್ತು. ಮಾಲೀಕರು ಬಹಳಷ್ಟು ಹಣ ಖರ್ಚು ಮಾಡಿ ಚಿಕಿತ್ಸೆ ಕೋಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಓ೦ ಮೃತಪಟ್ಟಿದೆ. ಮೃತಪಟ್ಟ ಸುದ್ದಿಯನ್ನು ಕೇಳಿ ಆತನ ಅಭಿಮಾನಿಗಳು ಬಂದು ಅಂತಿಮ ದರ್ಶನ ಪಡೆದರು. ಮನುಷ್ಯರ ಅಂತಿಮ ಯಾತ್ರೆಯಂತೆ ಓ೦ ಹೋರಿಯ ಅಂತಿಮ ಯಾತ್ರೆಯನ್ನು ಮಾಡಿದ್ದಾರೆ. ಅಭಿಮಾನಿಗಳ ಹೋರಿಯ ಸಾಧನೆಯನ್ನು ಮೇಲಕು ಹಾಕುತ್ತಾ ಭಾವ ಪೂರ್ಣ ವಿದಾಯ ಸಲ್ಲಿದ್ದು, ಹೋರಿ ಮಾಲೀಕ ಜಗದೀಶ್ ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications