ಸಂಚಾರ ನಿಯಮ ಉಲ್ಲಂಘನೆ; ಆಟೋ ಡ್ರೈವರ್ ಗೆ 32,500 ರುಪಾಯಿ ದಂಡ
ಗುರುಗ್ರಾಮ್, ಸೆಪ್ಟೆಂಬರ್ 4: ಗುರುಗ್ರಾಮದ ಸಂಚಾರ ಪೊಲೀಸರು ಮಂಗಳವಾರ ರು. 32,500 ಹಾಗೂ ರು. 23,000 ದಂಡದ ಚಲನ್ ನೀಡಿದ್ದಾರೆ. ಅಟೋರಿಕ್ಷಾ ಚಾಲಕ ಹಾಗೂ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ಇಷ್ಟು ಮೊತ್ತದ ದಂಡ ವಿಧಿಸಲಾಗಿದೆ. ಸಂಚಾರ ನಿಯಮಗಳ ಪೈಕಿ ಹಲವನ್ನು ಉಲ್ಲಂಘಿಸಿದ ಇವರಿಬ್ಬರಿಗೆ ದೊಡ್ಡ ಮೊತ್ತದ ದಂಡ ಹಾಕಲಾಗಿದೆ.
ಪೂರ್ವ ದೆಹಲಿಯ್ ಗೀತಾ ಕಾಲೋನಿ ನಿವಾಸಿ ದಿನೇಶ್ ಮದನ್ ಜಿಲ್ಲಾ ಕೋರ್ಟ್ ನ ಹೊರಗೆ ಹೆಲ್ಮೆಟ್ ಇಲ್ಲದೆ ಸ್ಕೂಟಿ ಚಾಲನೆ ಮಾಡುತ್ತಿದ್ದರು. ಅಗತ್ಯ ದಾಖಲೆಗಳಾದ ನೋಂದಣಿ ಪ್ರಮಾಣಪತ್ರ, ವಿಮೆ, ಡ್ರೈವಿಂಗ್ ಲೈಸೆನ್ಸ್, ವಾಯಮಾಲಿನ್ಯ ತಪಾಸಣೆ ಪ್ರಮಾಣ ಪತ್ರ ಇವು ಯಾವುವೂ ಅವರ ಬಳಿ ಇರಲಿಲ್ಲ.
ಆದ್ದರಿಂದ ಪೊಲೀಸರು ನೋಂದಣಿ ಪ್ರಮಾಣ ಪತ್ರ ಇಲ್ಲದ ಕಾರಣಕ್ಕೆ ರು. 5,000, ಡ್ರೈವರ್ ಲೈಸೆನ್ಸ್ ಇಲ್ಲದ್ದಕ್ಕೆ ರು. 5,000, ವಾಯುಮಾಲಿನ್ಯ ತಪಾಸಣೆ ಸರ್ಟಿಫಿಕೇಟ್ ಇಲ್ಲ ಎಂಬ ಕಾರಣಕ್ಕೆ 10,000, ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದ ಕಾರಣಕ್ಕೆ 2000, ಹೆಲ್ಮೆಟ್ ಇಲ್ಲದೆ ಚಾಲನೆ ಮಾಡಿದ್ದಕ್ಕೆ 1000 ದಂಡ ಹಾಕಿದ್ದಾರೆ.
Recommended Video

ಮದನ್ ಖಾಸಗಿ ಜಾಹೀರಾತು ಸಂಸ್ಥೆಯೊಂದರಲ್ಲಿ ದಿನೇಶ್ ಮದನ್ ಕೆಲಸ ಮಾಡುತ್ತಾರೆ. ಜಾಹೀರಾತು ಪಡೆಯುವ ಸಲುವಾಗಿ ಸಿವಿಲ್ ಕೋರ್ಟ್ ಗೆ ಬಂದಿದ್ದರು.
ಇನ್ನೊಂದು ಪ್ರಕರಣದಲ್ಲಿ ಸಿಗ್ನಲ್ ಜಂಪ್ ಮಾಡಿದ್ದು ವಿಪರೀತ ದುಬಾರಿಯಾಗಿ ಪರಿಣಮಿಸಿದೆ. ಆಟೋ ಚಾಲಕರ ಹೆಸರು ಮೊಹ್ಮದ್ ಮುಸ್ತಾಕಿನ್, ಮೂಲತಃ ಪಶ್ಚಿಮ ಬಂಗಾಲದವರಾಗಿದ್ದು, ಡಿಎಲ್ ಎಫ್ ಫೇಸ್ 3ನಲ್ಲಿ ವಾಸವಿದ್ದಾರೆ. ಸಿಕಂದರ್ ಪುರ್ ಪ್ರದೇಶದಲ್ಲಿ ಸಿಕ್ಕಿಬಿದ್ದ ಅವರಿಗೆ 32,500 ದಂಡ ಹಾಕಲಾಗಿದೆ.
ಮುಸ್ತಾಕಿನ್ ಈ ಮುಂಚೆ ದಿನಗೂಲಿ ನೌಕರರಾಗಿದ್ದರು. ಎರಡು ತಿಂಗಳಿಂದ ಆಟೋ ಓಡಿಸಲು ಆರಂಭಿಸಿದ್ದಾರೆ. ದಂಡದ ಮೊತ್ತ ಪಾವತಿಸಲು ತನ್ನ ಬಳಿ ಹಣ ಇಲ್ಲ ಎಂದು ಮುಸ್ತಾಕಿನ್ ಹೇಳಿಕೊಂಡಿದ್ದಾರೆ.
-
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei












Click it and Unblock the Notifications