ಯತ್ನಾಳ್ ಮತ್ತು ನಿರಾಣಿ ನಡುವಿನ ಒಳಜಗಳ ಸಮಾಜವೇ ತಲೆ ತೆಗ್ಗಿಸುವಂತೆ ಮಾಡಿದೆ: ಎಚ್.ಕೆ. ಪಾಟೀಲ್
ಗದಗ, ಜನವರಿ, 16: ಸಾರ್ವಜನಿಕ ಕ್ಷೇತ್ರದಲ್ಲಿ ಮಹತ್ವದ ಹುದ್ದೆ ಹೊಂದಿರುವ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಮತ್ತು ಸಚಿವ ಮುರಗೇಶ್ ನಿರಾಣಿ ನಡುವಿನ ಒಳಜಗಳ ನಾಗರಿಕ ಸಮಾಜವೇ ತಲೆ ತೆಗ್ಗಿಸುವಂತಹದ್ದಾಗಿದೆ. ಮಂತ್ರಿಗಳಾದವರ ಬಾಯಿಗೆ ಹಿಡಿತ ಇಲ್ಲ ಅನ್ನುವುದು ದುರ್ದೈವದ ಸಂಗತಿ ಎಂದು ಶಾಸಾಕ ಎಚ್.ಕೆ. ಪಾಟೀಲ್ ಗದಗದಲ್ಲಿ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಪ್ರತಿನಿದಿನಗಳಾದ ಇವರು, ಜನರು ಸಹನೆ ಮಾಡಿಕೊಳ್ಳುವಂತಹ ಮಾತುಗಳನ್ನು ಹರಿಬಿಡುತ್ತಿದ್ದಾರೆ. ಕರ್ನಾಟಕದ ರಾಜಕೀಯ ವ್ಯವಸ್ಥೆಯನ್ನು ನೀವು ಹೊಸಲು ಮಾಡುತ್ತಿದ್ದೀರಿ. ಸಿಎಂ ಸೇರಿದಂತೆ ಸಚಿವರು ಸಹ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ರಾಜಕಾರಣದ ಬಡಿದಾಟದಲ್ಲಿ ಎಲ್ಲರನ್ನು ಅವಮಾನಿಸುವ ಕೆಲಸ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿಗಳಿಗೂ ರಾಜಕಾರಣದ ನಂಟು
ಬಸವ ಜಯಮೃತ್ಯುಂಜಯ ಸ್ವಾಮಿಗಳು ಕಾಂಗ್ರೆಸ್ ಪಕ್ಷದ ಅಣತಿಯಂತೆ ವರ್ತನೆ ಮಾಡುತ್ತಿದ್ದಾರೆ ಅನ್ನುವ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಒಮ್ಮಿಂದೊಮ್ಮಿಲೇ ಸ್ವಾಮಿಗಳಿಗೆ ಹೋಗಿ ಯಾಕೆ ರಾಜಕಾರಣ ಹಚ್ಚಿದ್ದಾರೆಯೋ ಗೊತ್ತಿಲ್ಲ. ಆ ಸ್ವಾಮಿಗಳು ನಮ್ಮ ಪಕ್ಷದ ಜೊತೆಗೆ ಸಂಪರ್ಕನೂ ಇಟ್ಟುಕೊಂಡಿಲ್ಲ. ಅವರ ಬೇಡಿಕೆಗೆ ನಮ್ಮ ವೈಯಕ್ತಿಕ ನೆಲೆಯಲ್ಲಿ ಬೆಂಬಲಿಸಿರಬಹುದು. ನಮ್ಮ ಪಕ್ಷದ ನಾಯಕರು ಅವರ ಜೊತೆಗೆ ಇರಬಹುದು. ಸಾಮಾಜಿಕವಾಗಿ ಅವರ ಸಮುದಾಯಕ್ಕೆ ಸಂಬಂಧ ಇದ್ದವರು ಅನ್ನುವ ಕಾರಣಕ್ಕೆ ಆ ಹೋರಾಟದಲ್ಲಿ ಇದ್ದಾರೆ. ಇದರಲ್ಲಿ ರಾಜಕಾರಣ ಬೆರೆಸುವುದು ಸಜ್ಜನಿಕೆ ಲಕ್ಷಣ ಅಲ್ಲ.

ಸ್ವಾಮಿಗಳು ಇವರಿಗೆ ಅನಾನುಕೂಲ ಆಗುವಂತ ನಿಲುವು ತೆಗೆದುಕೊಂಡಿರಬಹದು. ಆದರೆ ಸ್ವಾಮಿಗಳಿಗೆ ದಿಢೀರ್ ರಾಜಕಾರಣ ಹಚ್ಚುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.

ಸ್ಯಾಂಟ್ರೋ ರವಿ ತಪ್ಪಿತಸ್ಥ ಅಲ್ಲ
ಸ್ಯಾಂಟ್ರೋ ರವಿ ಜೊತೆಗೆ ರಾಜಕಾರಣಿಗಳ ಸಂಪರ್ಕ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ಯಾಂಟ್ರೋ ರವಿ ಮಾತ್ರ ತಪ್ಪಿತಸ್ಥ ಅಲ್ಲ. ಅವನನ್ನು ಬಳಕೆ ಮಾಡಿಕೊಳ್ಳಲಾಗಿದೆ. ಅವನನ್ನು ಬಳಕೆ ಮಾಡಿಕೊಳ್ಳುವ ಮೂಲಕ ರಾಜ್ಯದ ಆಡಳಿತವನ್ನು ಅಶಕ್ತಿಗೊಳಿಸಿ ಶಿಥಿಲಗೊಳಿಸಲಾಗಿದೆ. ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ಅವನನ್ನ ಉಪಯೋಸಿಕೊಂಡು ಸರ್ಕಾರದ ಕ್ರೆಡಿಬಿಲಿಟಿ ಕಳಿದಿದ್ದೀರಿ. ಅವನನ್ನು ಉಪಯೋಗ ಮಾಡಿಕೊಂಡು ಯಾರೆಲ್ಲ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಯೋ ಅವರೆಲ್ಲರನ್ನೂ ಬಂಧಿಸಬೇಕು. ವರ್ಗಾವಣೆ ಮಾಡಿದವನು, ವರ್ಗಾವಣೆ ಮಾಡಿಸಿಕೊಂಡವನು, ದುಡ್ಡು ಕೊಟ್ಟವನು ಮತ್ತು ದುಡ್ಡು ಪಡೆದವರನ್ನೂ ಬಂಧಿಸಬೇಕು. ಸ್ಯಾಂಟ್ರೋ ರವಿಯನ್ನ ಬಂಧಿಸಿದ್ದೀರಿ ಅಷ್ಟೇ. ಅವನು ನೆಪ ಮಾತ್ರ. ಅವನನ್ನ ಉಪಯೋಗ ಮಾಡಿಕೊಂಡು ಕಾನೂನು ಬಾಹಿರ ಕೆಲಸ ಮಾಡಿದವರ ಬಂಧನವೂ ಆಗಬೇಕು. ಕಳವು ಮಾಡಿಸಿದ ಆ ಸೂತ್ರದಾರನೂ ಬಂಧಿಯಾಗಬೇಕು ಎಂದರು.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications