ಧಾರವಾಡ: ಚುನಾವಣಾ ಅಕ್ರಮಕ್ಕೆ ಆ್ಯಂಬುಲೆನ್ಸ್ ಬಳಕೆ
ಧಾರವಾಡ, ಮೇ 07: ಚುನಾವಣೆ 5 ಐದು ದಿನಗಳು ಬಾಕಿ ಇರುವಾಗಲೂ ನಾಗರಿಕರ ಮತವನ್ನು ಹೇಗೆ ಸೆಳೆಯಬೇಕು, ಮತವನ್ನು ನಮ್ಮ ಕಡೆ ಮಾಡಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲೇ ಇರುತ್ತಾರೆ.
ಕರ್ನಾಟಕ :ಹರಿಯುತ್ತಿದೆ ಆಮಿಷದ ಹೊಳೆ, ರೂ. 128 ಕೋಟಿ ಮೌಲ್ಯದ ವಸ್ತುಗಳು ವಶ
ಇಷ್ಟು ದಿನ ಚುನಾವಣಾ ಅಕ್ರಮಕ್ಕೆ ಲಾರಿ, ಬೈಕ್, ಕಾರುಗಳನ್ನು ಬಳಕೆ ಮಾಡಿದರೆ ಈ ಸಲ ಧಾರವಾಡದ ತೇಗೂರು ಕ್ರಾಸ್ ಬಳಿ ಆ್ಯಂಬುಲೆನ್ಸ್ ಗಳನ್ನು ಬಳಕೆ ಮಾಡಲಾಗಿದೆ. ಆಂಬುಲೆನ್ಸ್ ನಲ್ಲಿ ಸುಮಾರು 9 ಲಕ್ಷ ಮೌಲ್ಯದ 1800 ಸೀರೆಗಳು ಪತ್ತೆಯಾಗಿದ್ದು, 4 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ದರೆ ಯಾರಿಗೂ ಅನುಮಾನ ಬರುವದಿಲ್ಲ ಸಿಕ್ಕಿಹಾಕಿಕೊಳ್ಳುವ ಭಯವಿಲ್ಲ ಎಂದು ಅಕ್ರಮವಾಗಿ ಸೇರೆಯನ್ನು ಸಾಗಿಸುತ್ತಿದ್ದರು. ಆದರೆ ಅವರ ದುರಾದೃಷ್ಟ ಸಮಯಯಕ್ಕೆ ಸರಿಯಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗರಗ ಪೊಲೀಸರು ಸೀರೆಗಳನ್ನು ವಶಪಡಿಸಿಕೊಂಡಿದ್ದು, ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
Comments
English summary
Garag police have seized more than 1,800 sarees which were transporting in ambulance Tegur cross near Dharwad taluk.
Story first published: Monday, May 7, 2018, 14:07 [IST]