ಲಕಮನಹಳ್ಳಿ ಸೋಮೇಶ್ವರ ದೇಗುಲ ಜೀರ್ಣೋದ್ಧಾರ ಆರಂಭ
ಧಾರವಾಡ, ಡಿ. 9: ಐತಿಹಾಸಿಕ ಖ್ಯಾತಿಯ ಲಕಮನಹಳ್ಳಿ ಶ್ರೀ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಾರಂಭಗೊಂಡಿದೆ. ಈ ಕಾರ್ಯಕ್ಕಾಗಿ ಭಕ್ತರು ವಂತಿಗೆ ನೀಡಬೇಕೆಂದು ಶ್ರೀಕ್ಷೇತ್ರ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. [ಬಿಹಾರದಲ್ಲಿ ಅತಿದೊಡ್ಡ ದೇಗುಲ ನಿರ್ಮಾಣ]
ಎರಡು ತಿಂಗಳುಗಳಿಂದ ತಮಿಳುನಾಡಿನ 10ಕ್ಕೂ ಹೆಚ್ಚು ಕುಶಲಕರ್ಮಿಗಳು ದೇವಾಲಯದ ಗೋಪುರ ನಿರ್ಮಾಣದಲ್ಲಿ ತೊಡಗಿದ್ದಾರೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಗೋಪುರ ನಿರ್ಮಿಸಲಾಗುತ್ತಿದೆ ಎಂದು ಶ್ರೀಕ್ಷೇತ್ರ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. [ಕುಕ್ಕೆ ಸುಬ್ರಹ್ಮಣ್ಯ, ಕದ್ದ ಮಾಲು ವಾಪಸ್ ಮಾಡಿದ ಕಳ್ಳ]
ಭಕ್ತರು ವಂತಿಗೆಯನ್ನು ನಗದು, ಡಿಡಿ ಅಥವಾ ಚೆಕ್ ಮೂಲಕ 'ಶ್ರೀಕ್ಷೇತ್ರ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಸಮಿತಿ, ಲಕಮನಹಳ್ಳಿ, ಧಾರವಾಡ' ಈ ಹೆಸರಿನಲ್ಲಿ ನೀಡಬಹುದು. ಅಥವಾ ನೇರವಾಗಿ ಬ್ಯಾಂಕ್ ಖಾತೆ (ಶ್ರೀಕ್ಷೇತ್ರ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಸಮಿತಿ, ವಿಜಯಾ ಬ್ಯಾಂಕ್, ಸಾರಸ್ವತಪುರ ಶಾಖೆ, ಧಾರವಾಡ, ಅಕೌಂಟ್ ನಂಬರ್: 132801010005807, ಐಎಫ್ಎಸ್ಸಿ ಕೋಡ್: VIJB0001328)ಗೆ ವರ್ಗಾವಣೆ ಮಾಡಬಹುದು. [ಐಎಸ್ಓ ಪಡೆದ ಮೊದಲ ಗುಡಿ ಮಲೆ ಮಹದೇಶ್ವರ]
ಹೆಚ್ಚಿನ ಮಾಹಿತಿಗೆ ದೇವಸ್ಥಾನದ ಸೇವಕ ರಾಜು ಅವರನ್ನು ಮೊ. 8892979900 ಸಂಪರ್ಕಿಸಬಹುದು ಎಂದು ಸೇವಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.