ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿಸಿ ಫೇಸ್ಬುಕ್ ಪೋಸ್ಟ್ :ಮಹಿಳೆಯ ಬಂಧನ
ಧಾರವಾಡ, ಏ.24: ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿಸಿ ಫೇಸ್ಬುಕ್ ಪೋಸ್ಟ್ ಹಾಕಿದ್ದ ಮಹಿಳೆಯನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ.
ಶ್ರುತಿ ಬೆಳ್ಳಕ್ಕಿ ಬಂಧಿತ ಮಹಿಳೆ, ಇವರು ಧಾರವಾಡದ ಗರಗ ಗ್ರಾಮದ ನಿವಾಸಿಯಾಗಿದ್ದಾರೆ. ಧರ್ಮದ ವಿಚಾರದ ಕುರಿತಂತೆ ಸಚಿವ ಎಂಬಿ ಪಾಟೀಲ ಅವರು ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾಗಿದ್ದ ನಕಲಿ ಪತ್ರದ ವಿಚಾರವಾಗಿ ಮಾತನಾಡಿ ಫೇಸ್ಬುಕ್ ಪೋಸ್ಟ್ ಮಾಡಿದ್ದರು.
ಸೋನಿಯಾ ಗಾಂಧಿಗೆ ಪತ್ರ: ವರದಿ ವಿರುದ್ಧ ದೂರು ನೀಡಿದ ಎಂ.ಬಿ.ಪಾಟೀಲ
ಇದೀಗ ಶ್ರುತಿಯನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ, ಅವರಿಂದ ಹೇಳಿಕೆಯನ್ನು ಸಂಗ್ರಹಿಸಲಾಗುತ್ತಿದೆ. ಪೊಲೀಸರ ಕ್ರಮಕ್ಕೆ ಶ್ರುತಿ ಪತಿ ಪರಮೇಶ ಉಳವಣ್ಣವರ್ ಸೇರಿದಂತೆ ಕುಟುಂಬದ ಸದಸ್ಯರು, ಸ್ಥಳೀಯ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಎಂ.ಬಿ.ಪಾಟೀಲ್ ಸೇರಿದಂತೆ ಹಲವರ ವಿರುದ್ಧ ಹರಿಹಾಯ್ದಿದ್ದ ಮಹಿಳೆ ಹಿಂದೂ ಧರ್ಮ ಒಡೆಯಲು ಯತ್ನಿಸುತ್ತಿದ್ದಾರೆ, ಎಂದು ಆರೋಪ ಮಾಡಿದ್ದರು. ಪೊಲೀಸರು ಬಂಧಿಸುವ ವೇಳೆ ಯಾವ ಆತಂಕವೂ ಇಲ್ಲದೆ ನಡೆದಿದ್ದರು.