KSRTC Good News: ದಾವಣಗೆರೆಯಿಂದ ಈ ಭಾಗಗಳಿಗೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರದಲ್ಲಿ ಭಾರೀ ರಿಯಾಯಿತಿ
KSRTC Good News: ಕೆಎಸ್ಆರ್ಟಿಸಿ ಕರ್ನಾಟಕ ರಾಜ್ಯದ ಜೀವನಾಡಿ ಸಾರಿಗೆಯಾಗಿದೆ. ಇದು ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಆಗಾಗ ಹೊಸ ಯೋಜನೆಗಳನ್ನು ರೂಪಿಸುತ್ತಲಿರುತ್ತದೆ. ಇದೀಗ ದಾವಣಗೆರೆಯಿಂದ ಈ ಭಾಗಗಳಿಗೆ ಸಂಚಾರ ಮಾಡುವ ಬಸ್ಗಳ ಟಿಕೆಟ್ ದರಗಳಲ್ಲಿ ರಿಯಾಯಿತಿ ನೀಡಿದೆ. ಇದು ಇದೇ ಜನವರಿ 5ರಿಂದ ಜಾರಿಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ, ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೆಎಸ್ಆರ್ಟಿಸಿ ಕೈಗೆಟಕುವ ದರದಲ್ಲಿ ಪ್ರವಾಸ ಪ್ಯಾಕೇಜ್ಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಅಲ್ಲದೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಮಹತ್ವದ ನಿರ್ಧಾರಗಳನ್ನು ಕೂಡ ತೆಗೆದುಕೊಳ್ಳುತ್ತಲಿರುತ್ತದೆ. ಇದೀಗ ದಾವಣಗೆರೆಯಿಂದ ಸಂಚಾರ ಮಾಡುವ ಬಸ್ಗಳ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಿದೆ. ಹಾಗಾದ್ರೆ ಯಾವೆಲ್ಲಾ ಬಸ್ಗಳಿಗೆ ಅನ್ವಯ ಆಗಲಿದೆ ಹಾಗೂ ದರಗಳು, ಮಾರ್ಗಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಜನವರಿ 5ರಿಂದ ಭಾರೀ ರಿಯಾಯಿತಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ದಾವಣಗೆರೆ-ಬೆಂಗಳೂರು ಸೇರಿ ಹಲವಯ ಮಾರ್ಗಗಳ ವೋಲ್ವೋ/ಇ.ವಿ. ಪವರ್ ಪ್ಲಸ್ ಹಾಗೂ ನಾನ್ ಎಸಿ ಸ್ಲೀಪರ್ ಬಸ್ಗಳ ಟಿಕೆಟ್ ದರಗಳಲ್ಲಿ 2026ರ ಜನವರಿ 5ರಿಂದ ಭಾರೀ ರಿಯಾಯಿತಿ ದರವನ್ನು ನೀಡಲಾಗಿದೆ.
ಟಿಕೆಟ್ ದರದಲ್ಲಿ ಭಾರೀ ರಿಯಾಯಿತಿ
* ದಾವಣಗೆರೆಯಿಂದ ಬೆಂಗಳೂರು ವೋಲ್ವೋ ಬಸ್ನಲ್ಲಿ ಪ್ರಸ್ತುತ ದರ ಹಗಲು 689 ರೂಪಾಯಿ, ರಾತ್ರಿ ಪ್ರಯಾಣಕ್ಕೆ 748 ರೂಪಾಯಿ ಇತ್ತು. ಇದೀಗ ಪರಿಷ್ಕೃತ ದರ ಹಗಲು ಮತ್ತು ರಾತ್ರಿ ಎರಡು ವೇಳೆಗೂ ಒಂದೇ ದರ 650 ರೂಪಾಯಿ ನಿಗದಿ ಮಾಡಲಾಗಿದೆ.
ಇನ್ನೂ ಇ.ವಿ. ಪವರ್ ಪ್ಲಸ್ ಎ/ಸಿ ಪ್ರಸ್ತುತ ದರ ಹಗಲು ವೇಳೆಯಲ್ಲಿ 663 ರೂಪಾಯಿ, ರಾತ್ರಿ 720 ರೂಪಾಯಿ ಇದ್ದು, ಪ್ರಸ್ತುತ ರಿಯಾಯಿತಿ ದರ 600 ರೂಪಾಯಿ ದರ ನಿಗದಿಪಡಿಸಿದೆ. ವೋಲ್ವೋ 2.0 ಪ್ರಸ್ತುತ ದರ 721 ರೂಪಾಯಿ ಇದ್ದು, ರಿಯಾಯಿತಿ ದರ 680 ರೂಪಾಯಿ ನಿಗದಿಪಡಿಸಲಾಗಿದೆ.
* ದಾವಣಗೆರೆ - ಕಲಬುರಗಿ ನಾನ್ ಎ/ಸಿ ಸ್ಲೀಪರ್ ಪ್ರಸ್ತುತ ದರ 1,091 ರೂಪಾಯಿ ಇದ್ದು, ರಿಯಾಯಿತಿ ದರ 1,005 ರೂಪಾಯಿ ನಿಗದಿಪಡಿಸಿದೆ.
* ದಾವಣಗೆರೆ - ಹೈದರಾಬಾದ್ ನಾನ್ ಎ/ಸಿ ಸ್ಲೀಪರ್ ಪ್ರಸ್ತುತ ದರ 1,405 ರೂಪಾಯಿ ಇದ್ದು, ರಿಯಾಯಿತಿ ದರ 1,265 ರೂಪಾಯಿ ನಿಗದಿಪಡಿಸಿದೆ.
ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಮುಂಗಡ ಬುಕ್ಕಿಂಗ್ ಮಾಡಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ಹಾಗೂ ಒಂದು ಕಡೆ ಹಾಗೂ ಎರಡು ಕಡೆಯ ಪ್ರಯಾಣದ ಬುಕ್ಕಿಂಗ್ ಒಟ್ಟಿಗೆ ಮಾಡಿದದರೆ, ಪ್ರಯಾಣ ದರಕ್ಕೆ ಶೇಕಡ 10ರಷ್ಟು ರಿಯಾಯಿತಿ ನೀಡಲಾಗಿದೆ. ಪ್ರಯಾಣಿಕರು ರಿಯಾಯಿತಿ ದರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದಾವಣಗೆರೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ











Click it and Unblock the Notifications