ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಮಳಿಗೆ ಮೇಲೆ ಐಟಿ ದಾಳಿ
Recommended Video
ದಾವಣಗೆರೆ, ಮಾರ್ಚ್ 14 : ರಾಜ್ಯದ ಪ್ರಸಿದ್ಧ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ನ 6 ಜವಳಿ ಅಂಗಡಿ ಹಾಗೂ ಮಾಲೀಕರ 2 ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಬುಧವಾರ ಹಳೆ ದಾವಣಗೆರೆ ನಗರದ 3 ಅಂಗಡಿ ಹಾಗೂ ಡೆಂಟಲ್ ಕಾಲೇಜ್ ರಸ್ತೆಯಲ್ಲಿ ಇರುವ ಅಂಗಡಿ ಮತ್ತು ಎ.ವಿ.ಕೆ.ಕಾಲೇಜ್ ರಸ್ತೆಯಲ್ಲಿ ಇರುವ 2 ಅಂಗಡಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ನಗರದ ಎಂಸಿಸಿಎ ಬ್ಲಾಕ್ ಮತ್ತು ಶಾಮನೂರು ರಸ್ತೆಯಲ್ಲಿರುವ ಮನೆಗಳ ಮೇಲೆಯೂ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಸಮರ್ಪಕ ತೆರಿಗೆ ಪಾವತಿಸಿದ ಬಗ್ಗೆ ದಾಖಲೆ ನೀಡುವಂತೆ ಮಾಲೀಕರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ನ ರಾಜ್ಯದ ಪ್ರಖ್ಯಾತ ಜವಳಿ ಉದ್ಯಮ. ಬಿ.ಸಿ ಶಿವಕುಮಾರ್ ಮತ್ತು ಬಿ.ಎಸ್ ಉಮಾಪತಿ ಅವರು ಬಿ.ಎಸ್ ಚನ್ನಬಸಪ್ಪ ಅಂಡ್ ಸನ್ಸ್ ಜವಳಿ ಮಳಿಗೆಗಳ ಮಾಲೀಕರು.
ಕಳೆದ ಎರಡು ತಿಂಗಳಿಂದ ದಾವಣಗೆರೆಯಲ್ಲಿ ಹಲವು ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ ನಡೆಯುತ್ತಲೆ ಇದೆ. ಇಂದು ಬಿ.ಎಸ್.ಚನ್ನಬಸಪ್ಪ ಜವಳಿ ಅಂಗಡಿ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರು ಹಾಗೂ ದಾವಣಗೆರೆಯ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.