ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ : ಕಾರ್ಪೊರೇಟರ್‌ ಬಂಧನ, ರಸ್ತೆಯಲ್ಲಿ ಮೆರವಣಿಗೆ

|
Google Oneindia Kannada News

ದಾವಣಗೆರೆ, ಮೇ 13 : ಕಾಂಗ್ರೆಸ್ ಕಾರ್ಪೊರೇಟರ್‌ನನ್ನು ಬಂಧಿಸಿ ಪೊಲೀಸರು ರಸ್ತೆಯಲ್ಲಿ ಮೆರವಣಿಗೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕಾರ್ಪೊರೇಟರ್‌ ವಿರುದ್ಧ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ದೂರು ನೀಡಿದ್ದರು.

ಕಾಂಗ್ರೆಸ್ ಕಾರ್ಪೊರೇಟರ್‌, ರೌಡಿ ಶೀಟರ್ ಶ್ರೀನಿವಾಸ್‌ನನ್ನು ದಾವಣಗೆರೆಯ ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಲರ್ ಪಟ್ಟಿ ಹಿಡಿದು ಕೈ ಕಟ್ಟಿಹಾಕಿ ರಸ್ತೆಯಲ್ಲಿ ಮೆರವಣಿಗೆ ಮಾಡಿಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ನಾನ್ಯಾರು ಗೊತ್ತಾ?: ಗುರುತಿನ ಚೀಟಿ ಕೇಳಿದ್ದಕ್ಕೆ ಸಂಸದ ಆಕ್ರೋಶನಾನ್ಯಾರು ಗೊತ್ತಾ?: ಗುರುತಿನ ಚೀಟಿ ಕೇಳಿದ್ದಕ್ಕೆ ಸಂಸದ ಆಕ್ರೋಶ

ಆಗಿದ್ದೇನು? : ಶನಿವಾರ ಮತದಾನ ನಡೆಯುವಾಗ ಬೂತ್‌ ಬಳಿ ಶ್ರೀನಿವಾಸ್ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದ. ಈ ಕುರಿತು ಮಾಜಿ ಸಚಿವ ರವೀಂದ್ರನಾಥ್ ಪೊಲೀಸರಿಗೆ ದೂರು ನೀಡಿದ್ದರು.

Attack on BJP workers Congress corporator arrested

ಇಂದು ಕೆಟಿಜೆ ನಗರ ಠಾಣೆ ಪೊಲೀಸರು ಶ್ರೀನಿವಾಸ್ ಅವರನ್ನು ಬಂಧಿಸಿ, ನಡು ರಸ್ತೆಯಲ್ಲಿ ಮೆರವಣಿಗೆ ಮಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಜನರು ಸಹ ಪೊಲೀಸರು ಕ್ರಮವನ್ನು ಸ್ವಾಗತಿಸಿದ್ದು, ಶ್ರೀನಿವಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿರುವ ಮತದಾರರ ಅಂತಿಮ ಚಿತ್ರಣದಾವಣಗೆರೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿರುವ ಮತದಾರರ ಅಂತಿಮ ಚಿತ್ರಣ

ಮೆರವಣಿಗೆ ಮಾಡಿಲ್ಲ : 'ಶ್ರೀನಿವಾಸ್ ಅವರನ್ನು ಮೆರವಣಿಗೆ ಮಾಡಿಲ್ಲ, ಬಂಧಿಸಿ ಕರೆದುಕೊಂಡು ಹೋಗಿದ್ದರು. ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

English summary
Davanagere KTJ Nagar police arrested Congress corporator Shrinivas for attacked on BJP workers on May 12, 2018 in the time of Karnataka assembly elections 2018 polling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X