ಕನ್ನಡ ವಿರೋಧಿ ಟಿಪ್ಪು ಜಯಂತಿ ಏಕೆ?: ಚಿಮೂ ಆಕ್ರೋಶ
ಟಿಪ್ಪು ಎಲ್ಲ ರಾಜರಂತೆ ಶತ್ರುಗಳ ಜೊತೆ ಹೋರಾಡಿ 1799ರಲ್ಲಿ ಸಾವನ್ನಪ್ಪಿದನೇ ವಿನಾ ಸ್ವಾತಂತ್ರ್ಯ ಹೋರಾಟಗಾರ ಆಗಿರಲಿಲ್ಲ. ಅವನನ್ನು ಗಾಂಧೀಜಿ, ಪಟೇಲ್, ಸುಭಾಷ್ ಚಂದ್ರ ಬೋಸ್ ಜತೆ ಹೋಲಿಸಿದರೆ ಸತ್ಯಕ್ಕೆ ಅವಮಾನ ಮಾಡಿದಂತೆ ಆಗುತ್ತದೆ
ಚಿತ್ರದುರ್ಗ, ನವೆಂಬರ್ 3: ಇತಿಹಾಸದಲ್ಲಿನ ದಾಖಲೆಗಳು, ಸಂಶೋಧನೆಗಳು ಟಿಪ್ಪು ಸುಲ್ತಾನ್ ನನ್ನು ಮತಾಂಧ, ಭಾಷಾಂಧ ಎಂದು ಸಾರುತ್ತಿದೆ. ಆದರೂ ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿರುವುದು ದೊಡ್ಡ ಅಪಚಾರ ಎಂದು ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಹೇಳಿದ್ದಾರೆ.
ಇಲ್ಲಿನ ಡಿಸಿ ಕಚೇರಿ ಹತ್ತಿರ ಬುಧವಾರ ರಾಜವೀರ ಮದಕರಿನಾಯಕ ಗೌರವ ಸಂರಕ್ಷಣಾ ವೇದಿಕೆ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಆಯೋಜಿಸಿದ್ದ 'ಸಾಂಕೇತಿಕ ಒನಕೆ ಪ್ರತಿಭಟನೆ'ಯಲ್ಲಿ ಅವರು ಟಿಪ್ಪು ಬಗ್ಗೆ ತಾವು ಸಂಗ್ರಹಿಸಿದ್ದ ದಾಖಲೆ ಮಾಹಿತಿಯನ್ನು ಓದಿದರು.
ಟಿಪ್ಪು ಸುಲ್ತಾನ್ ನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ವೈಭವೀಕರಿಸಲಾಗಿದೆ ಎಂದು ಹೇಳಿದರು.[ಟಿಪ್ಪು ಜಯಂತಿ ಆಚರಣೆಗೆ ಕೊಡಗಿನಲ್ಲಿ ವಿರೋಧದ ಅಲೆ]

ಎಲ್ಲ ರಾಜರಂತೆಯೇ ಟಿಪ್ಪು: ಟಿಪ್ಪು ಎಲ್ಲ ರಾಜರಂತೆ ಶತ್ರುಗಳ ಜೊತೆ ಹೋರಾಡಿ 1799ರಲ್ಲಿ ಸಾವನ್ನಪ್ಪಿದನೇ ವಿನಾ ಸ್ವಾತಂತ್ರ್ಯ ಹೋರಾಟಗಾರ ಆಗಿರಲಿಲ್ಲ. ಅವನನ್ನು ಗಾಂಧೀಜಿ, ಪಟೇಲ್, ಸುಭಾಷ್ ಚಂದ್ರ ಬೋಸ್ ಜತೆ ಹೋಲಿಸಿದರೆ ಸತ್ಯಕ್ಕೆ ಅವಮಾನ ಮಾಡಿದಂತೆ ಆಗುತ್ತದೆ ಎಂದು ಅವರು ಹೇಳಿದರು.
ಶೃಂಗೇರಿ, ಮೇಲುಕೋಟೆ ಮಠಗಳಿಗೆ ಟಿಪ್ಪು ದತ್ತಿ ಕೊಟ್ಟಿದ್ದರೆ, ಅದೇನಿದ್ದರೂ ತನ್ನ ಅಧಿಕಾರಿಗಳ ವಿಶ್ವಾಸ ಪಡೆಯಲು ಮಾತ್ರ. ಮೇಲುಕೋಟೆ ಮತ್ತು ಶ್ರೀರಂಗಪಟ್ಟಣದ 700 ಬ್ರಾಹ್ಮಣ ಕುಟುಂಬಗಳ ಪೂರ್ವಜರನ್ನು ದೀಪಾವಳಿಯಂದೇ ಟಿಪ್ಪು ಕೊಂದ ಹಿನ್ನೆಲೆಯಲ್ಲಿ ಇವತ್ತಿಗೂ ಅಲ್ಲಿನವರು ಶೋಕದಿನವಾಗಿ ಭಾವಿಸುತ್ತಾರೆ ಎಂದರು.[ಕೊಡಗು: ಪೊಲೀಸ್ ಭದ್ರತೆಯಲ್ಲಿ ಟಿಪ್ಪು ಜಯಂತಿ]
ಕನ್ನಡ ವಿರೋಧಿ: ಮೈಸೂರು ರಾಜ್ಯದ ಆಡಳಿತ ಭಾಷೆ ಕನ್ನಡವಾಗಿತ್ತು. ಆತ ಅದನ್ನು ರದ್ದುಪಡಿಸಿ, ಪರ್ಸೋ ಅರೇಬಿಕ್ ಭಾಷೆಯನ್ನು ಆಡಳಿತ ಭಾಷೆ ಮಾಡಿದ. ಆತನ ಜಯಂತಿಯನ್ನು ಯಾವ ಕಾರಣಕ್ಕಾಗಿ ಆಚರಿಸಬೇಕು? ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗಿನ ಸಾವಿರಾರು ಜನ ಹಿಂದೂ ಮತ್ತು ಕ್ರಿಶ್ಚಿಯನ್ನರನ್ನು ಬಲವಂತವಾಗಿ ಮತಾಂತರಿಸಿ ಯುದ್ಧ ಶಿಕ್ಷಣ ನೀಡಿ, ಅದನ್ನು ಅಹಮ್ಮದೀಯ ಪಡೆ ಎಂದು ಕರೆದ.
ಟಿಪ್ಪು ತಂದೆ ಹೈದರಾಲಿಯೂ ಧರ್ಮಾಂಧ. ಮದಕರಿ ನಾಯಕರನ್ನು ಬಂಧಿಸಿ, ವಿಷ ಕುಡಿಸಿ ಕೊಂದವನು ಆತ. ಚಿತ್ರದುರ್ಗದ ಅಪಾರ ಸಂಪತ್ತಿನ ಜತೆಗೆ ಇಲ್ಲಿನ ಉಚ್ಚಂಗಿ ಎಲ್ಲಮ್ಮ, ಏಕನಾಥೇಶ್ವರಿ, ಸಂಪಿಗೆ ಸಿದ್ದೇಶ್ವರ ದೇಗುಲಗಳ ಸಂಪತ್ತನ್ನು ಲೂಟಿ ಮಾಡಿದ. ಈ ಕಾರಣಗಳಿಂದ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡಬಾರದು ಎಂದರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications