ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ: ಸರ್ಕಾರದ ಆದೇಶದ ವಿರುದ್ಧ ಮಠಾಧೀಶರ ಆಕ್ರೋಶ
ಚಿತ್ರದುರ್ಗ, ಡಿಸೆಂಬರ್, 26: ನಗರದ ಹೊರವಲಯದಲ್ಲಿರುವ ಮುರುಘಾ ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾಶ್ರೀಗಳ ಬಂಧನವಾಗಿತ್ತು. ಈ ಹಿನ್ನೆಲೆಯಲ್ಲಿ ಮಠಕ್ಕೆ ಸರ್ಕಾರದಿಂದ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಈ ಸರ್ಕಾರದ ಆದೇಶವನ್ನು ವಿರೋಧಿಸಿ ಸುಮಾರು 15ಕ್ಕೂ ಹೆಚ್ಚು ವಿವಿಧ ಮಠಾಧೀಶರು, ಮಠದ ಉತ್ತರಾಧಿಕಾರಿ ಬಸವಪ್ರಭು ಶ್ರೀ ನೇತೃತ್ವದಲ್ಲಿ ಧರಣಿ ನಡೆಸಿದರು.
ಬಸವ ಕೇಂದ್ರದ 15ಕ್ಕೂ ಹೆಚ್ಚು ಮಠಾಧೀಶರು ಧರಣಿಯಲ್ಲಿ ಭಾಗವಹಿಸಿದ್ದು, ಕೂಡಲೇ ಸರ್ಕಾರ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಮುರುಘಾ ಮಠಕ್ಕೆ ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೈಗೊಂಡಿದ್ದಾರೆ. ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಮುರುಘಾ ಶ್ರೀ ಕೇಸ್: ಮಾಜಿ ಶಾಸಕ ಬಸವರಾಜನ್ಗೆ ಜಾಮೀನು
ಸರ್ಕಾರದ
ಆದೇಶದ
ವಿರುದ್ಧ
ಆಕ್ರೋಶ
ಮೂರ್ನಾಲ್ಕು
ತಿಂಗಳ
ಕಾಲ
ಆಡಳಿತಾಧಿಕಾರಿ
ಇಲ್ಲದೆ
ಇದ್ದ
ಮಠಕ್ಕೆ
ಇದೀಗ
ಸರ್ಕಾರದಿಂದ
ಆಡಳಿತಾಧಿಕಾರಿಯನ್ನು
ನೇಮಕ
ಮಾಡಲಾಗಿತ್ತು.ಇದಕ್ಕೆ
ಸಂಬಂಧಿಸಿದಂತೆ
ಕಂದಾಯ
ಇಲಾಖೆ
ಸರ್ಕಾರದ
ಉಪ
ಕಾರ್ಯದರ್ಶಿ
ನಡವಳಿಯನ್ನು
ಹೊರಡಿಸಿದೆ.
ಚಿತ್ರದುರ್ಗ
ಶ್ರೀ
ಜಗದ್ಗುರು
ಮುರುಘಾರಾಜೇಂದ್ರ
ಬೃಹಲ್ಮಠದ
ಪೀಠಾಧಿಪತಿ
ಹಾಗೂ
ಎಸ್.ಜೆ.ಎಂ
ವಿದ್ಯಾಪೀಠದ
ಅಧ್ಯಕ್ಷರು
ಆಗಿರುವ
ಶ್ರೀ
ಶಿವಮೂರ್ತಿ
ಮುರುಘಾ
ಶರಣರು
ದಿನಾಂಕ
01-09-2022ರಿಂದ
ನ್ಯಾಯಾಂಗ
ಬಂಧನದಲ್ಲಿ
ಇದ್ದಾರೆ.
ಹೀಗಾಗಿ
ಸಂಸ್ಥೆಯ
ನಿರ್ವಹಣೆಯ
ದಿನನಿತ್ಯದ
ಕಾರ್ಯಚಟುವಟಿಕೆಗೆ
ಹಾಗೂ
ಮೇಲುಸ್ತುವಾರಿ
ನಡೆಸಲು
ಸಮಸ್ಯೆ
ಉಂಟಾಗಿದೆ
ಎಂದಿದ್ದರು.
ಮಠಕ್ಕೆ
ಆಡಳಿತಾಧಿಕಾರಿ
ನೇಮಕ
ಈ
ಹಿನ್ನೆಲೆಯಲ್ಲಿ
ಹಾಗೂ
ಸಾರ್ವಜನಿಕರ
ಹಿತದೃಷ್ಠಿಯಿಂದ
ಮಠದ
ಚರಾ-ಸ್ಥಿರ
ಆಸ್ತಿಗಳನ್ನು
ಸಂರಕ್ಷಿಸುವ
ಹಿತದೃಷ್ಟಿಯಿಂದ,
ಸಂಸ್ಥೆಯ
ಹಣ
ದುರುಪಯೋಗ
ಆಗದಂತೆ
ಲೆಕ್ಕಪತ್ರಗಳನ್ನು
ನಿರ್ವಹಿಸುವ,
ಒಟ್ಟಾರೆ
ವ್ಯವಸ್ಥೆಯನ್ನು
ಪರಿಣಾಮಕಾರಿಯಾಗಿ
ನಡೆಸುವ
ಹಿತದೃಷ್ಠಿಯಿಂದ
ನಿವೃತ್ತ
ಐಎಎಸ್
ಅಧಿಕಾರಿ
ಪಿ.ಎಸ್
ವಸ್ತ್ರದ್
ಅವರನ್ನು
ನೇಮಕ
ಮಾಡಿತ್ತು.
ಈ
ಕೂಡಲೇ
ಜಾರಿಗೆ
ಬರುವಂತೆ
ಹಾಗೂ
ಮುಂದಿನ
ಆದೇಶದವರೆ
ಟ್ರಸ್ಟ್
ಮತ್ತು
ಶಿಕ್ಷಣ
ಸಂಸ್ಥೆಗೆ
ಆಡಳಿತಾಧಿಕಾರಿಯನ್ನಾಗಿ
ನೇಮಿಸಿ
ಆದೇಶಿಸಿತ್ತು.
ನ್ಯಾಯಾಂಗ
ಬಂಧನದಲ್ಲಿರುವ
ಮುರುಘಾ
ಶ್ರೀ
ಪೋಕ್ಸೋ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಮುರುಘಾ
ಮಠದ
ಶಿವಮೂರ್ತಿ
ಶರಣರನ್ನು
ನ್ಯಾಯಾಂಗ
ಬಂಧನದಲ್ಲಿದ್ದಾರೆ.
ಇನ್ನು
ಶ್ರೀಗಳ
ವಿರುದ್ಧ
ಎರಡು
ಪೋಕ್ಸೋ
ಪ್ರಕರಣಗಳು
ದಾಖಲಾಗಿವೆ.
ಇತ್ತ
ಶ್ರೀಗಳ
ಪರ
ವಕೀಲರು
ಜಾಮೀನು
ನೀಡುವಂತೆ
ಕೋರ್ಟ್ಗೆ
ಅರ್ಜಿ
ಸಲ್ಲಿಸಿದ್ದರು.
ಇದೀಗ
ಆ
ಅರ್ಜಿಯನ್ನು
ಕೋರ್ಟ್
ಪರಿಶೀಲನೆ
ನಡೆಸಿ
ಮುಂದೂಡಿದ್ದು,
ಸದ್ಯಕ್ಕೆ
ಶ್ರೀಗಳಿಗೆ
ಬಿಡುಗಡೆ
ಭಾಗ್ಯ
ಇಲ್ಲ
ಎನ್ನಲಾಗಿದೆ.