ಬೆಳ್ಳಂಬೆಳಗ್ಗೆ ಕಾಫಿನಾಡಿನಲ್ಲಿ ಕಾಲ್ಕೆರೆದು ಕಾದಾಟಕ್ಕೆ ನಿಂತ ಗೂಳಿಗಳು
ಚಿಕ್ಕಮಗಳೂರು, ಡಿಸೆಂಬರ್.25: ಬೆಳ್ಳಂಬೆಳಿಗ್ಗೆ ಚಿಕ್ಕಮಗಳೂರಿನ ನಡುರಸ್ತೆಯಲ್ಲೇ ಭರ್ಜರಿ ಗೂಳಿ ಕಾಳಗ ನಡೆಯಿತು. ಎರಡು ಗೂಳಿಗಳ ಕಾದಾಟ ಜನರನ್ನು ಆತಂಕಗೊಳಿಸುವ ಜೊತೆಗೆ ಮನರಂಜನೆಯನ್ನು ಸಹ ನೀಡಿದೆ.
ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಸರ್ಕಾರಿ ಶಾಲೆಯ ಎದುರು ಎರಡು ಗೂಳಿಗಳು ಭರ್ಜರಿಯಾಗಿ ಕಾದಾಟ ನಡೆಸಿದವು. ನಿರಂತರ ಒಂದು ಗಂಟೆಗೂ ಹೆಚ್ಚು ಹೊತ್ತು ಗೂಳಿಗಳು ತಾ ಮೇಲು ನಾ ಮೇಲು ಎಂಬ ರೀತಿಯಲ್ಲಿ ಕಾಳಗ ನಡೆಸಿದವು.
ಬೆಳಿಗ್ಗೆ 7 ಗಂಟೆಗೆ ನಡುರಸ್ತೆಯಲ್ಲಿ ಪ್ರಾರಂಭವಾದ ಗೂಳಿಗಳ ಕಾಳಗ ಎಂಟು ಗಂಟೆಯಾದ್ರು ಮುಗಿದಿರಲಿಲ್ಲ. ಈ ಗೂಳಿ ಕಾಳಗದಿಂದ ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ನೆರೆದ ಜನರಿಗೆ ಒಂದು ಗಂಟೆಗಳ ಕಾಲ ಪುಗಸಟ್ಟೆ ಮನರಂಜನೆ ಸಿಕ್ಕಿತು.

ಸ್ಥಳೀಯರ ಬೆದರಿಕೆಗೂ ಅಂಜದೇ ಕಾದಾಟ:
ಬೆಳ್ಳಂಬೆಳಗ್ಗೆ ಕೋಡಿಗೆ ಕೋಡಿ ಹಾಯಿಸುತ್ತಾ ಕಾದಾಡುತ್ತಿದ್ದ ಗೂಳಿಗಳ ಕಾಳಗ ಕೆಲವರಿಗೆ ಮನರಂಜನೆಯಾದರೆ, ಇನ್ನು ಕೆಲವರಲ್ಲಿ ಆತಂಕವನ್ನು ಹುಟ್ಟಿಸುವಂತಿತ್ತು. ಇದರಿಂದ ಅಲ್ಲಿಯೇ ನೆರೆದಿದ್ದ ಜನರು ಗೂಳಿ ಕಾಳಗವನ್ನು ಬಿಡಿಸಲು ಅವುಗಳನ್ನು ಬೆದರಿಸಲು ಮುಂದಾದರು. ಆದರೆ, ಅದಕ್ಕ ಅಂಜದೇ ಬಿಟ್ಟು ಬಿಟ್ಟು ಗೂಳಿಗಳು ಕಾದಾಟಕ್ಕೆ ನಿಲ್ಲುತ್ತಿದ್ದವು. ಇನ್ನು, ನಡುರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಗೂಳಿ ಕಾಳಗದಿಂದ ಪರಿತಪಿಸುವಂತಾಯಿತು. ಕೊನೆಗೆ ಒಂದು ಗಂಟೆಗಳ ಕಾಲ ಕಾಳಗ ನಡೆಸಿದ ಗೂಳಿಗಳು ಸುಸ್ತಾಗಿ ಅಲ್ಲಿಂದ ವಾಪಸ್ ತೆರಳಿದವು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications