ಸ್ಮಾರ್ಟ್ ಸ್ಟೆತಾಸ್ಕೋಪ್ ಸಂಶೋಧಿಸಿದ ಕಾಫಿನಾಡಿನ ಯುವಕ
ಚಿಕ್ಕಮಗಳೂರು, ಏಪ್ರಿಲ್ 29: ಜನರ ಆರೋಗ್ಯ ಕಾಪಾಡಲು, ಅವರನ್ನು ಮಾರಣಾಂತಿಕ ರೋಗದಿಂದ ಗುಣಪಡಿಸಬೇಕೆಂದು ಹಗಲಿರುಳು ಶ್ರಮಿಸುತ್ತಿರುವ ವೈದ್ಯರ ಕಾರ್ಯವನ್ನು ಎಷ್ಟು ಬಣ್ಣಿಸಿದರೂ ಸಾಲದು. ಈ ವೈದ್ಯರಿಗಾಗಿ ಚಿಕ್ಕಮಗಳೂರಿನ ಯುವಕನೊಬ್ಬ ಸ್ಮಾರ್ಟ್ ಸ್ಟೆತಾಸ್ಕೋಪ್ ಕಂಡುಹಿಡಿದಿದ್ದು, ಇದರಿಂದ ರೋಗಿಗಳನ್ನು ಮುಟ್ಟದೇ, ವೈದ್ಯರು ಕುಳಿತಲ್ಲಿಯೇ ಎಲ್ಲೋ ಇರುವ ರೋಗಿಗಳ ಪರೀಕ್ಷೆ ಮಾಡಬಹುದು.
Recommended Video
ಕೊರೊನಾ ವೈರಸ್ ರೋಗಿಗಳಿಂದ ದೇಶದ ಅನೇಕ ವೈದ್ಯರಿಗೂ ಸೋಂಕು ತಗುಲಿದ ಘಟನೆಗಳು ನಡೆದಿವೆ. ಇದರಿಂದಾಗಿ ಅನೇಕ ವೈದ್ಯರು ಜೀವಭಯದಿಂದ ರಾಜೀನಾಮೆ ನೀಡಲು ಕೂಡ ಮುಂದಾಗಿದ್ದರು.

ರೋಗಿಗಳಿಂದ ವೈದ್ಯರಿಗೆ ಕೊರೋನಾ ಸೋಂಕು ತಗುಲದಿರಲಿ ಎಂಬ ಕಾರಣಕ್ಕೆ ಚಿಕ್ಕಮಗಳೂರಿನ ಯುವಕ ಸ್ಮಾರ್ಟ್ ಸ್ಟೆತಾಸ್ಕೋಪ್ ಕಂಡುಹಿಡಿದಿದ್ದಾರೆ. ಈ ಮೂಲಕ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಯುವಕ ಆದರ್ಶ್ ವೈದ್ಯಕೀಯ ಲೋಕದಲ್ಲಿ ಮಹಾ ಆವಿಷ್ಕಾರಕ್ಕೆ ನಾಂದಿ ಹಾಡಿದ್ದಾರೆ.

ಇದರಿಂದಾಗಿ ಕೊರೊನಾ ವೈರಸ್ ಸೋಂಕಿತರ ಪರೀಕ್ಷೆ ಈಗ ಇನ್ನಷ್ಟು ಸುಲಭವಾಗಿದೆ. ಈ ಸ್ಮಾರ್ಟ್ ಸ್ಟೆತಾಸ್ಕೋಪ್ನಿಂದಾಗಿ ವೈದ್ಯರು ಕುಳಿತಲ್ಲಿಯೇ ರೋಗಿಗಳ ಪರೀಕ್ಷೆ ಮಾಡಬಹುದು. ಮುಂಬೈನ ಐಐಟಿ ಲ್ಯಾಬ್ ರಿಸರ್ಚರ್ ಆಗಿ ಕೆಲಸ ನಿರ್ವಹಿಸುತ್ತಿರುವ ಆದರ್ಶ್ ಈ ಸಂಶೋಧನೆ ಮಾಡಿದ್ದಾರೆ.

ಈ ಸ್ಟೆತಾಸ್ಕೋಪ್ ಬಳಸಿ ಮೊಬೈಲ್, ಲ್ಯಾಪ್ಟಾಪ್ ಮೂಲಕ ರೋಗಿಗಳ ಹೃದಯಬಡಿತ, ಉಸಿರಾಟದ ಪರೀಕ್ಷೆ ಮಾಡಬಹುದು. ಕೊರೊನಾ ವಿರುದ್ಧ ಹೋರಾಡಲು ಹೊಸ ಅಸ್ತ್ರ ಸಿಕ್ಕಂತಾಗಿದೆ. ಸ್ಮಾರ್ಟ್ ಸ್ಟೆತಾಸ್ಕೋಪ್ನ ಬ್ಲೂಟೂತ್ ಸಹಾಯದಿಂದ ಕುಳಿತಲ್ಲೇ ತಪಾಸಣೆ ಮಾಡಬಹುದು. ಕೊರೊನಾ ರೋಗಿಯ ಬಳಿ ಸುಳಿಯದೇ ರೋಗದ ಲಕ್ಷಣವನ್ನು ಗ್ರಹಿಸಲು ಇದರಿಂದ ಸಾಧ್ಯವಿದೆ.












Click it and Unblock the Notifications