ಚಿಕ್ಕಮಗಳೂರು; ಜಿಲ್ಲಾಧಿಕಾರಿ ಬಗಾದಿಯಿಂದ ಕಪಾಳಮೋಕ್ಷ; ಸ್ಪಷ್ಟನೆ ಕೊಟ್ಟ ಡಿಸಿ
ಚಿಕ್ಕಮಗಳೂರು, ಜನವರಿ 23: ಕೆಲವೇ ತಿಂಗಳ ಹಿಂದೆ ಚಿಕ್ಕಮಗಳೂರನ್ನು ಕಾಡಿದ್ದ ಪ್ರವಾಹ ಇಡೀ ಜಿಲ್ಲೆಯನ್ನೇ ತತ್ತರಿಸುವಂತೆ ಮಾಡಿತ್ತು. ಜನರು ನೆಲೆಯನ್ನು ಕಳೆದುಕೊಂಡು ಕಂಗಾಲಾಗಿದ್ದರು.
ಆದರೆ ಪ್ರವಾಹದ ಈ ಸಮಯದಲ್ಲಿ ವರ್ತಕರಿಂದ ಜಿಲ್ಲಾಡಳಿತ ಸಾಮಗ್ರಿಗಳನ್ನು ಖರೀದಿಸಿ ಅದರ ಹಣವನ್ನು ಇನ್ನೂ ಪಾವತಿಸಿಲ್ಲ. ಇಂದು ಹಿರೇಬೈಲಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಭೇಟಿ ನೀಡಿದ್ದು, ವರ್ತಕರು ಈ ಬಗ್ಗೆ ದೂರು ಒಪ್ಪಿಸಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಐಎಎಸ್ ಅಧಿಕಾರಿಗಳು ಚಿಕ್ಕಮಗಳೂರಿಗೆ ವರ್ಗ
ವರ್ತಕರು ದೂರು ನೀಡುತ್ತಿದ್ದಂತೆ ಕೋಪಗೊಂಡ ಜಿಲ್ಲಾಧಿಕಾರಿ ಗೌತಮ್, ಆರ್ ಐಗೆ ಕಪಾಳಮೋಕ್ಷ ಮಾಡಿದ್ದಾರೆ. ಸಾರ್ವಜನಿಕರ ಎದುರಲ್ಲೇ ಆರ್.ಐ ಅಜ್ಜೇಗೌಡ ಅವರಿಗೆ ಸಾರ್ವಜನಿಕರ ಎದುರಲ್ಲೆ ಕೆನ್ನೆಗೆ ಹೊಡೆದು ಕತ್ತಿನ ಪಟ್ಟಿ ಹಿಡಿದಿದ್ದರು.
8 ತಿಂಗಳಾದ್ರೂ ವರ್ತಕರಿಗೆ ಹಣ ನೀಡಿಲ್ಲ ಎಂಬ ಆರೋಪ ಕೇಳುತ್ತಿದ್ದಂತೆ, ಸ್ಥಳದಲ್ಲಿಯೇ ಸಸ್ಪೆಂಡ್ ಮಾಡ್ತೀನಿ ಎಂದು ಆರ್ ಐ ವಿರುದ್ಧ ಹರಿಹಾಯ್ದಿದ್ದಾರೆ.
ಜಿಲ್ಲಾಧಿಕಾರಿ ಸ್ಪಷ್ಟನೆ: ಆದರೆ ತಾನು ಕಪಾಳ ಮೋಕ್ಷ ಮಾಡಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ ಜಿಲ್ಲಾಧಿಕಾರಿ. "ನಾನು ಯಾರಿಗೂ ಹೊಡೆದಿಲ್ಲ. ಮಾಧ್ಯಮಗಳು ಆಧಾರರಹಿತ ಸುದ್ದಿ ಪ್ರಸಾರ ಮಾಡಿವೆ" ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟೀಕರಣ ನೀಡಿದ್ದಾರೆ.