ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಳಿ, ಕುರಿ, ಬಿಯರ್, ಈರುಳ್ಳಿ ಬಹುಮಾನ; ಕ್ರಿಕೆಟ್ ಪಂದ್ಯ ರದ್ದು!

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 28; ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬಳಿಯ ಕಡಬಗೆರೆಯಲ್ಲಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯನ್ನು ಆಯೋಜಕರು ರದ್ದು ಮಾಡಿದ್ದಾರೆ. ವಿಶೇಷ ಕಾರಣಕ್ಕಾಗಿ ಈ ಟೂರ್ನಿ ಗಮನಸೆಳೆದಿತ್ತು.

'ಖಾಂಡ್ಯ ಕ್ರಿಕೆಟ್ ಹಬ್ಬ' ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ 2021 ರದ್ದಾಗಿದೆ. ಫೆಬ್ರವರಿ 9ರ ಮಂಗಳವಾರ ಕ್ರಿಕೆಟ್ ಟೂರ್ನಿಯನ್ನು ಆಯೋಜನೆ ಮಾಡಲಾಗಿತ್ತು. ಕಡಬಗೆರೆಯ ಗಾಂಧಿ ಮೈದಾನದಲ್ಲಿ ಪಂದ್ಯಾವಳಿ ನಡೆಸುವುದಾಗಿ ಘೋಷಣೆ ಮಾಡಲಾಗಿತ್ತು.

 ಚಿಕ್ಕಬಳ್ಳಾಪುರ; ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿಕೊಂಡಿದ್ದ ಕಾನ್ ಸ್ಟೆಬಲ್ ಬಂಧನ ಚಿಕ್ಕಬಳ್ಳಾಪುರ; ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿಕೊಂಡಿದ್ದ ಕಾನ್ ಸ್ಟೆಬಲ್ ಬಂಧನ

ಖ್ಯಾಂಡ್ಯ ಪ್ರೀಮಿಯರ್ ಲೀಗ್‌ನ ಪ್ರತಿ ಪಂದ್ಯ 3 ಓವರ್‌ಗಳಿಗೆ ಸೀಮಿತವಾಗಿತ್ತು. ಸ್ಥಳೀಯ ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಎಂದು ಘೋಷಿಸಲಾಗಿದ್ದು, 1000 ರೂ. ಪವೇಶ ಶುಲ್ಕವನ್ನು ನಿಗದಿ ಮಾಡಲಾಗಿತ್ತು.

 ಬಳ್ಳಾರಿಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್; ಮೂವರ ಬಂಧನ ಬಳ್ಳಾರಿಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್; ಮೂವರ ಬಂಧನ

 Cricket Match Cancelled In Kadabagere Balehonnur

ರಾಜ್ಯದ ಬೇರೆ-ಬೇರೆ ಕಡೆಯಿಂದ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಜನರು ಕರೆ ಮಾಡುತ್ತಿದ್ದರು. ಪಂದ್ಯದಲ್ಲಿ ಭಾಗವಹಿಸಲು ತಂಡಗಳು ಮುಗಿಬಿದ್ದ ಕಾರಣ ಪಂದ್ಯಾವಳಿಯನ್ನು ರದ್ದುಗೊಳಿಸಲಾಗಿದೆ.

ಗಮನ ಸೆಳೆದಿದ್ದು ಬಹುಮಾನ; ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದವರಿಗೆ ನೀಡುವ ಬಹುಮಾನಗಳು ಗಮನ ಸೆಳೆದಿತ್ತು. ಜನರು ಸಹ ಕ್ರಿಕೆಟ್ ಪಂದ್ಯಾವಳಿ ಕರಪತ್ರಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದರು.

ಮೊದಲ ಬಹುಮಾನವಾಗಿ 30 ಕೆಜಿ ಇಡಿ ಕುರಿ, 1 ಬಾಟಲ್ ಎಂಸಿ ವಿಸ್ಕಿ, 1 ಕೇಸ್ ಬಿಯರ್ ಇತ್ತು. 2ನೇ ಬಹುಮಾನವಾಗಿ 6 ನಾಟಿ ಕೋಳಿ, 1 ಬಾಟೆಲ್ ಬಿ.ಪಿ. ಮತ್ತು 1 ಕೇಸ್ ಬಿಯರ್ ಇತ್ತು. ಸಮಾಧಾನಕರ ಬಹುಮಾನವಾಗಿ ಎಲ್ಲಾ ತಂಡಗಳಿಗೆ 7 ಅಪ್ ಉಚಿತವಾಗಿತ್ತು.

ಮ್ಯಾನ್ ಆಫ್‌ ದಿ ಸೀರಿಸ್‌ಗೆ 5 ಕೆಜಿ ಈರುಳ್ಳಿ, ಬೆಸ್ಟ್ ಬ್ಯಾಟ್ಸ್‌ಮನ್‌ಗೆ 1 ಕೆಜಿ ಖಾರದ ಪುಡಿ, ಬೆಸ್ಟ್ ಬೌಲರ್‌ಗೆ 2 ಲೀಟರ್ ಸನ್ ಫ್ಲವರ್ ಆಯಿಲ್ ಬಹುಮಾನ ಘೋಷಣೆಯಾಗಿತ್ತು.

English summary
Cricket match which organized in Kadabagere, Balehonnur taluk of Chikkamagaluru cancelled. Match drag the attention by the prize announced for winners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X