ಚಿಕ್ಕಮಗಳೂರು: ಹಣ್ಣು, ತರಕಾರಿ ಮಾರಿದ ವಿಧಾನ ಪರಿಷತ್ ಸದಸ್ಯ ಭೋಜೇಗೌಡ
ಚಿಕ್ಕಮಗಳೂರು, ಆಗಸ್ಟ್ 27: ಚಿಕ್ಕಮಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಅವರ ನೇತೃತ್ವದಲ್ಲಿ ಹಣ್ಣು, ತರಕಾರಿ ಮಾರಿ ವಿನೂತನ ಪ್ರತಿಭಟನೆ ನಡೆಸಲಾಯಿತು.
Recommended Video
RCB ತಂಡದಲ್ಲಿದ್ದ ನತದೃಷ್ಟ ಆಟಗಾರರು ಇವರೇ ನೋಡಿ | oneindia Kannada
ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು ಹಾಗೂ ಕೊರೊನಾ ಲಾಕ್ ಡೌನ್ ಸಂದರ್ಭವನ್ನು ಸೇವಾ ಅವಧಿ ಎಂದು ಪರಿಗಣಿಸಿ ಸಂಬಳ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರು ನಗರದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನಾ ಸಭೆ ನಡೆಸಿ ನಂತರ, ಕೋರ್ಟ್ ಆವರಣದ ಎದುರಿನ ಹೊಸಮನೆ ರಸ್ತೆಯಲ್ಲಿ ತರಕಾರಿ, ಹಣ್ಣು ಮಾರುವ ಮೂಲಕ ವಿನೂತನ ಪ್ರತಿಭಟನೆ ಮಾಡಲಾಯಿತು. ಮಳೆಗಾಲದ ಅಧಿವೇಶನವನ್ನು 10 ದಿನದ ಬದಲು 20 ದಿನ ನಡೆಸಬೇಕು ಎಂದು ಎಂಎಲ್ಸಿ ಎಸ್.ಎಲ್ ಭೋಜೇಗೌಡ ಒತ್ತಾಯಿಸಿದರು.

ಈ ಕೂಡಲೇ ರಾಜ್ಯ ಸರ್ಕಾರವು ಅತಿಥಿ ಉಪಾನ್ಯಸಕರಿಗೆ ಸೇವಾ ಭದ್ರತೆ ಒದಗಿಸಬೇಕು, ಲಾಕ್ ಡೌನ್ ಅವಧಿಯ ಬಾಕಿ ಸಂಬಳವನ್ನು ಶೀಘ್ರವೇ ನೀಡುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೂರಾರು ಅತಿಥಿ ಉಪಾನ್ಯಸಕರು ಭಾಗಿಯಾಗಿದ್ದರು.












Click it and Unblock the Notifications