ಮಲೆನಾಡಿನ ಹಸಿರಿನ ಮಧ್ಯೆ ಪಾತರಗಿತ್ತಿಗಳ ಚಿತ್ತಾರ ಲೋಕ
ಚಿಕ್ಕಮಗಳೂರು, ಜನವರಿ 25: ತನ್ನೊಡಲೊಳಗೆ ಅಗಾಧ ಪ್ರಾಕೃತಿಕ ಸಂಪತ್ತನ್ನು ಹೊಂದಿರುವ ಮಲೆನಾಡಿನ ಚಿಕ್ಕಮಗಳೂರಿನಲ್ಲಿ ಚಿಟ್ಟೆಯ ಲೋಕವೊಂದು ಸೃಷ್ಟಿಯಾಗಿದೆ.
ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಸಾಗುವ ದಾರಿಯಲ್ಲಿ ಅರೆನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಚಿಟ್ಟೆಗಳ ಚಿತ್ತಾರ ಎಲ್ಲರ ಕಣ್ಮನ ಸೆಳೆಯುವಂತಿದೆ. ಅರೆನೂರು ಗ್ರಾಮದಿಂದ ಅರಣ್ಯ ಪ್ರದೇಶದೊಳಗೆ ಐದಾರು ಕಿ.ಮೀ ನಡೆದುಕೊಂಡು ಹೋದರೆ ಲಕ್ಷಾಂತರ ಚಿಟ್ಟೆಗಳು ಎತ್ತರದ ಮರಗಳ ರೆಂಬೆ, ಕೊಂಬೆಗಳ ಮೇಲೆ ಕೂತು ಚಿತ್ತಾರ ಬಿಡಿಸಿದಂತೆ ಗೋಚರವಾಗುತ್ತಿವೆ.
"ಡಾರ್ಕ್ ಬ್ಲೂ ಟೈಗರ್' ಎಂದೇ ಕರೆಸಿಕೊಳ್ಳುವ ಈ ಚಿಟ್ಟೆಗಳು ಪ್ರತಿವರ್ಷ ಡಿಸೆಂಬರ್ ತಿಂಗಳಿನಿಂದ ಆರಂಭವಾಗಿ ಜನವರಿ ಅಂತ್ಯದ ವರೆಗೂ ಇಲ್ಲಿ ಕಾಣಸಿಗುತ್ತವೆ. ಚಿಟ್ಟೆಗಳ ಸಂತಾನೋತ್ಪತ್ತಿಗೆ ಮಲೆನಾಡಿನ ಈ ಭಾಗದ ಕಾಡು ಸಹಾಯಕವಾಗಿದೆ. ಮಲೆನಾಡು ನೈಸರ್ಗಿಕ ಹಸಿರು ಸಂಪತ್ತನ್ನು ಒಳಗೊಂಡಿರುವುದರಿಂದ ಈ ಚಿಟ್ಟೆಗಳು ಇಲ್ಲಿ ಪ್ರತಿವರ್ಷ ಬಂದು ಸಂತಾನ ವೃದ್ಧಿಮಾಡಿಕೊಂಡು ಹೊರಡುತ್ತವೆ.

ಹಸಿರಿನ ಮಧ್ಯೆ ಪಾತರಗಿತ್ತಿಗಳ ವೈಯಾರ
ದಟ್ಟವಾದ ಹಸಿರ ಕಾನನದ ಮಧ್ಯೆ ದೊಡ್ಡ ದೊಡ್ಡ ಮರಗಳ ರಂಬೆ ಕೊಂಬೆ, ಬಳ್ಳಿಗಳ ಮೇಲೆಲ್ಲಾ ಈ ಚಿಟ್ಟೆಗಳು ಚಿತ್ತಾರ ಬಿಡಿಸಿದಂತೆ ಭಾಸವಾಗುತ್ತವೆ. ನುಣುಪಾದ ಚಿಟ್ಟೆಗಳ ರೆಕ್ಕೆಯ ಮೇಲಿನ ಬಣ್ಣಗಳು ಇಡೀ ಅರಣ್ಯ ಪ್ರದೇಶವನ್ನು ನೀಲಿ ಬಣ್ಣಕ್ಕೆ ತಿರಿಗಿಸಿವೆಯೇನೋ ಅನ್ನಿಸುತ್ತದೆ.

ನೋಡುಗರ ಕಣ್ಮನಗಳಿಗೆ ಆಹ್ಲಾದಕರವನ್ನು ನೀಡುತ್ತಿವೆ. ಇನ್ನು ಈ ಚಿಟ್ಟೆಗಳು ಆಗಾಗ ಒಮ್ಮೆಲೆ ಮೇಲೆ ಹಾರಿ ಮತ್ತೆ ಬಂದು ರೆಂಬೆಗಳ ಮೇಲೆ ಕೂರುವುದು ನೋಡುಗರಿಗೆ ಮತ್ತಷ್ಟು ಸೊಗಸು ನೀಡುತ್ತಿವೆ.

ಒಟ್ಟಾರೆ ಈ ಭಾಗದ ಕಾಡಿನ ಅದೆಷ್ಟೋ ಹೂಗಳ ಸುಗಂಧವನ್ನು ಹೀರುತ್ತಾ ಪಾತರಗಿತ್ತಿಗಳು ಹೊಸದೊಂದು ಲೋಕವನ್ನು ಸೃಷ್ಟಿ ಮಾಡಿದ್ದು ನೋಡುಗರ ಮನಸ್ಸಿಗೆ ಆನಂದ ಮೂಡಿಸಿವೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications