ಚಿಕ್ಕಬಳ್ಳಾಪುರ ಆದಿಯೋಗಿ ಕೇಂದ್ರದಲ್ಲಿ ನಂದಿ, ತ್ರಿಶೂಲ ಪ್ರತಿಷ್ಠಾಪನೆ: ಮಕರ ಸಂಕ್ರಾಂತಿ ಹಬ್ಬದಂದು ಹರಿದು ಬಂತು ಭಕ್ತರು ಸಾಗರ
ಚಿಕ್ಕಬಳ್ಳಾಪುರ ಜನವರಿ 16: ಮಕರ ಸಂಕ್ರಾಂತಿ ಹಬ್ಬದಂದು ಸದ್ಗುರು ನೇತೃತ್ವದಲ್ಲಿ ಈಶ ಫೌಂಡೇಷನ್ ಆದಿಯೋಗಿ ಧ್ಯಾನ ಕೇಂದ್ರದಲ್ಲಿ 21 ಅಡಿಗಳ ನಂದಿ ಮತ್ತು 54 ಅಡಿಯ ಮಹಾ ತ್ರಿಶೂಲವನ್ನು ಪ್ರತಿಷ್ಠಾಪಿಸಲಾಯಿತು.
ಇಲ್ಲಿ 112 ಅಡಿ ಎತ್ತರದ ಆದಿಯೋಗಿಯ ಪ್ರತಿಮೆ ಕಳೆದ ವರ್ಷ ಮಕರ ಸಂಕ್ರಾಂತಿಯಂದೇ ಲೋಕಾರ್ಪಣೆಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರವು ತಲೆ ಎತ್ತಿದ್ದು, ಬಳಿಕ ನಾಗಮಂಟಪ, ಯೋಗೇಶ್ವರ ಲಿಂಗ ಸ್ಥಾಪಿಸಲಾಗಿದೆ. ಈಗ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ನಂದಿ ಮತ್ತು ಮಹಾಶೂಲವನ್ನು ಪ್ರತಿಷ್ಠಾಪಿಸಲಾಗಿದ್ದು ಮುಂಬರುವ ದಿನಗಳಲ್ಲಿ ಲಿಂಗ ಭೈರವಿ ದೇವಿ, ನವಗ್ರಹ ಮಂಟಪ ಮತ್ತು ಯೋಗ ಸಭಾಂಗಣಗಳೊಂದಿಗೆ ಎರಡು ತೀರ್ಥಕುಂಡಗಳು ಸ್ಥಾಪನೆಯಾಗಲಿವೆ.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಸದ್ಗುರು, ಪ್ರತಿಯೊಂದು ಶಿವನ ದೇವಾಲಯದ ಹೊರಗೆ ಸಾಂಕೇತಿಕವಾಗಿ ನಂದಿಯನ್ನು ಕಾಣಬಹುದು. ಇದು ಅವಿರತ ತಾಳ್ಮೆ, ಧ್ಯಾನಸ್ಥ ಸ್ಥಿತಿಯಲ್ಲಿ ಕಾಯುವಿಕೆಯ ಸಂಕೇತ. ಈ ಗುಣವನ್ನು ಭಾರತೀಯ ಸಂಸ್ಕೃತಿಯಲ್ಲಿ ಶ್ರೇಷ್ಠವಾದುದೆಂದು ಪರಿಗಣಿಸಲಾಗಿದೆ ಎಂದರು.
ಸಾಮಾನ್ಯವಾಗಿ ಜನರು ಧ್ಯಾನವನ್ನು ಒಂದು ಚಟುವಟಿಕೆಯಷ್ಟೇ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದರ ಬದಲಿಗೆ ಪ್ರಾರ್ಥನೆಯು ಆಂತರಿಕವಾಗಿ ಅಡಕವಾಗಿರುವ ದೇವರೊಂದಿಗೆ ಮಾತನಾಡುವ ಒಂದು ಮಹಾಪ್ರಯತ್ನ. ಮನಸ್ಸಿನಲ್ಲಿನ ಪ್ರತಿಜ್ಞೆಗಳು, ನಿರೀಕ್ಷೆಗಳು ಸೇರಿದಂತೆ ವಿಚಾರಗಳನ್ನು ನಿವೇದಿಸಿಕೊಳ್ಳುವಂತಹುದು. ಅಸ್ತಿತ್ವವನ್ನು, ಸೃಷ್ಟಿಯ ಅಂತಿಮ ಸ್ವರೂಪವನ್ನು ಆಲಿಸಲು ಸಿದ್ಧರಾಗುವುದು ಎಂದು ತಿಳಿಸಿದರು.

ರಾಮಲಲ್ಲಾ ಪ್ರತಿಷ್ಠಾಪನೆಗೆ ಈಗ ಹೋಗಲ್ಲ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮಕ್ಕೆ ಆಹ್ವಾನ ರಾತ್ರಿ 8.30 ನಿಗದಿಯಾಗಿದೆ. ಇದರಲ್ಲಿ 12 ಸಾವಿರ ಭಕ್ತರು ಭಾಗವಹಿಸಲಿದ್ದಾರೆ. ಆದ್ದರಿಂದ ಆ ದಿನದಂದು ನಾನು ಭಾರತದಲ್ಲಿರುವುದಿಲ್ಲ. ಅಯೋಧ್ಯೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸದ್ಗುರು ತಿಳಿಸಿದರು.
ಹೆಚ್ಚಿನ ಜನಸಂದಣಿ 'ಹಬ್ಬದ ವಿಶೇಷ ದಿನದಂದು ದೇಶದ ವಿವಿಧ ಭಾಗಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆದಿಯೋಗಿಯ ದರ್ಶನ ಪಡೆದರು. ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ವೀಕ್ಷಿಸಿ ಖುಷಿಪಟ್ಟರು. ನಂದಿ ಮತ್ತು ತ್ರಿಶೂಲಕ್ಕೆ ಎಣ್ಣೆ, ಅರಿಶಿನ ಕುಂಕುಮ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಸಮರ್ಪಿಸಿ, ಹರಕೆಯನ್ನು ಹೊತ್ತರು.
ಕಲಾ ಪ್ರದರ್ಶನ
ಸದ್ಗುರು ಸ್ವತಃ ಗಾಯನದ ಮೂಲಕ ಗಮನ ಸೆಳೆದರು. ಶಿವನಾಗಿ ಬಂದ ಲಿಂಗೇಶ್ವರ, ಮಾದೇಶ್ವರ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು. ಪ್ರಥಮ ಬಾರಿಗೆ ಮಾದೇಶ್ವರ ತಂಡದಿಂದ ಕಂಸಾಳೆ ನೃತ್ಯ ಪ್ರದರ್ಶನವು ಸಾಂಸ್ಕೃತಿಕ ಸಂಜೆಯ ವೈಭವಕ್ಕೆ ಮತ್ತಷ್ಟು ಕಳೆ ತಂದಿತು. ಆದಿಯೋಗಿಗೆ ದೀಪಗಳೊಂದಿಗೆ ಸಾಮೂಹಿಕ ನೃತ್ಯದ ಮೂಲಕ ಮಂಗಳಾರತಿ ಎತ್ತಲಾಯಿತು. ದೈನಂದಿನ ಆದಿಯೋಗಿ ದಿವ್ಯ ದರ್ಶನದ ಜತೆಗೆ ವರ್ಣರಂಜಿತ ಧ್ವನಿ ಮತ್ತು ಬೆಳಕಿನ ವಿಶೇಷ ಲೇಸರ್ ಪ್ರದರ್ಶನಕ್ಕೆ ಹಲವರು ಮೂಕವಿಸ್ಮಿತರಾದರು.
ಒಂದು ವಾರ ಸಂಕ್ರಾಂತಿ ಜಾತ್ರೆ
ಈಶ ಫೌಂಡೇಷನ್ ಕಾಮಗಾರಿ ಪೂರ್ಣಗೊಂಡ ಬಳಿಕ ಒಂದು ವಾರ ಸಂಕ್ರಾಂತಿ ಜಾತ್ರೆ ನಡೆಸಲಾಗುತ್ತದೆ. ಪ್ರತಿದಿನ ಯೋಗ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ ಎಂದು ಸದ್ಗುರು ತಿಳಿಸಿದರು. ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ
ಅವರು, ಈಗಾಗಲೇ ಆಧ್ಯಾತ್ಮಿಕ ತಾಣದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಇಲ್ಲಿ ಯಾಗ ಶಾಲೆಯೂ ನಿರ್ಮಾಣವಾಗಲಿದೆ ಎಂದರು. ಕಾವೇರಿ ನದಿ ಅಂದೋಲನ, ಗಿಡ ನೆಡಿ ಮತ್ತು ಮಣ್ಣು ಸಂರಕ್ಷಿಸಿ ಅಭಿಯಾನಗಳು ಯಶಸ್ವಿಯಾಗಿ ನಡೆದಿವೆ. ಬರಡು ಭೂಮಿಯು ಹಸಿರಾದಾಗ ನದಿಮೂಲಗಳು ಉಳಿಯಲು ಸಾಧ್ಯವಾಗುತ್ತದೆ. ಈಗಾಗಲೇ ಫೌಂಡೇಷನ್ನಿಂದ 9.50 ಕೋಟಿ ಸಸಿಗಳನ್ನು ನೆಡಲಾಗಿದೆ. ಇವುಗಳ ಬೆಳವಣಿಗೆಯ ಬಗ್ಗೆ ಇಸ್ರೋ ಸಂಸ್ಥೆಯ ಮೂಲಕ ನಿಗಾ ವಹಿಸಿ, ಮಾಹಿತಿ ಪಡೆಯಲಾಗಿದೆ ಎಂದರು.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications