ಚಿಕ್ಕಬಳ್ಳಾಪುರ: ಮುಂದಿನ ಜನವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡ ಉದ್ಘಾಟನೆ: ಸಚಿವ ಸುಧಾಕರ್
ಚಿಕ್ಕಬಳ್ಳಾಪುರ, ಫೆಬ್ರವರಿ 5: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣದಿಂದ ಚಿಕ್ಕಬಳ್ಳಾಪುರ ಸೇರಿದಂತೆ ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ಹೆಚ್ಚು ಅನುಕೂಲವಾಗಲಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಶನಿವಾರ ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಗ್ರಾಮದ ಬಳಿ ನೂತನವಾಗಿ ನಿರ್ಮಾಣ ಆಗುತ್ತಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ವೀಕ್ಷಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಶೇ.75ರಷ್ಟು ಸ್ಟ್ರಕ್ಟರಲ್ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲದೆ ಪ್ರಸಕ್ತ ಸಾಲಿನ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ, ಕಾಲೇಜಿಗೆ ಹಸ್ತಾಂತರ ಮಾಡುತ್ತೇವೆಂದು ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ 2023 ಜನವರಿಯ ಸಂಕ್ರಾಂತಿ ವೇಳೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಆರೋಗ್ಯ ಸಚಿವರಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟನೆಯಾಗಲಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದರು.
100
ಎಂಬಿಬಿಎಸ್
ವಿದ್ಯಾರ್ಥಿನಗಳಿಗೆ
ಕೌನ್ಸಿಲಿಂಗ್
ವೈದ್ಯಕೀಯ
ಕಾಲೇಜಿಗೆ
ಈಗಾಗಲೇ
ಅಧ್ಯಾಪಕರನ್ನು
ನೇಮಕ
ಆಗಿರುವ
ಹಿನ್ನೆಲೆಯಲ್ಲಿ
2021-22ನೇ
ಸಾಲಿನಲ್ಲಿ
100
ಎಂಬಿಬಿಎಸ್
ವಿದ್ಯಾರ್ಥಿಗಳಿಗೆ
ಕೌನ್ಸಿಲಿಂಗ್
ನಡೆಸಿ
ನೇಮಕಾತಿ
ಕಡತವನ್ನು
ಕಳುಹಿಸಿಕೊಡಲಾಗಿದ್ದು,
ಎರಡು
ದಿನದಲ್ಲಿ
ದಾಖಲಾಗಲಿದ್ದಾರೆ.
ಈ
ವಿದ್ಯಾರ್ಥಿಗಳಿಗೆ
ತಾತ್ಕಾಲಿಕ
ವ್ಯವಸ್ಥೆಯನ್ನು
ವಿಶ್ವೇಶ್ವರಯ್ಯ
ತಾಂತ್ರಿಕ
ವಿಶ್ವವಿದ್ಯಾಲಯದ
ಕಟ್ಟಡದಲ್ಲಿ
ಕಲಿಕೆಗೆ
ತಾತ್ಕಾಲಿಕ
ವ್ಯವಸ್ಥೆ
ಮಾಡಲಾಗಿದೆ.
ಒಟ್ಟಾರೆ
ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ
ವೈದ್ಯಕೀಯ
ಶಿಕ್ಷಣ
ಕಾಲೇಜಿನ
ಮೊದಲ
ವರ್ಷ
ಆರಂಭವಾಗಿದೆ
ಎಂದು
ಹರ್ಷ
ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಭಾಗದ ಜನರು ದ್ವಿತೀಯ, ತೃತೀಯ ಹಂತದ ಚಿಕಿತ್ಸೆಗೆ ಸೌಲಭ್ಯವಿರಲಿಲ್ಲ. ಏನೇ ಆಪತ್ತು ಬಂದರೂ ಬೆಂಗಳೂರಿಗೆ ಹೋಗುವ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣದಿಂದ ಆರೋಗ್ಯ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿಯಾಗಲಿದೆ. ಇದರಿಂದ ಜಿಲ್ಲೆಯ ಬಾಗೇಪಲ್ಲಿ, ಗೂಳೂರು, ಗೌರಿಬಿದನೂರು, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಕೆಲ ಭಾಗದವರು ಸೇರಿದಂತೆ ನೆರೆಯ ಆಂಧ್ರಪ್ರದೇಶಕ್ಕೂ ಕೂಡ ಇದು ಅನುಕೂಲವಾಗಲಿದೆ ಎಂದು ಹೇಳಿದರು.
ವೈದ್ಯಕೀಯ
ಕಾಲೇಜು
ನಿರ್ಮಾಣಕ್ಕೆ
ಹೆಚ್ಚು
ಆದ್ಯತೆ
ಕೋಲಾರ,
ಚಿಕ್ಕಬಳ್ಳಾಪುರ
ಹಾಗೂ
ಬೆಂಗಳೂರು
ಗ್ರಾಮಾಂತರ
ಈ
ಮೂರು
ಜಿಲ್ಲೆಗಳಿಗೆ
ಸರ್ಕಾರ
ಹೆಚ್ಚು
ಆದ್ಯತೆ
ನೀಡಿದ್ದು,
ಮೊದಲಿಗೆ
ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ
ವೈದ್ಯಕೀಯ
ಸೇವೆಗಳನ್ನು
ಪ್ರಾರಂಭಿಸಿದ್ದೇವೆ.
ಇನ್ನುಳಿದ
ಜಿಲ್ಲೆಗಳಲ್ಲಿ
ಖಾಸಗಿ
ಸಹಭಾಗಿತ್ವ
(ಪಿಪಿಪಿ
ಮಾಡೆಲ್)ದಲ್ಲಿ
10
ಜಿಲ್ಲೆಗಳಲ್ಲಿ
ವೈದ್ಯಕೀಯ
ಕಾಲೇಜು
ಅಭಿವೃದ್ಧಿಪಡಿಸುವುದು
ಸರ್ಕಾರದ
ಉದ್ದೇಶವಾಗಿದೆ
ಎಂದರು.
ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಪ್ರಸಕ್ತ ಸಾಲಿನಲ್ಲಿ ಕೈಗೆತ್ತಿಕೊಳ್ಳಲು ಕ್ಯಾಬಿನೆಟ್ನಲ್ಲಿ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲೇ ಟೆಂಡರ್ ಕರೆದು, ಕಾಲೇಜು ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ರಾಮನಗರದಲ್ಲಿ ರಾಜೀವ್ಗಾಂಧಿ ವಿಶ್ವವಿದ್ಯಾಲಯ ವತಿಯಿಂದ ವಿ.ವಿಯ ಆಡಳಿತ ಕೇಂದ್ರದ ಜೊತೆಗೆ ವೈದ್ಯಕೀಯ ಕಾಲೇಜನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ಕೋರ್ಸ್ಗಳು ಆರಂಭ
ರಾಜ್ಯದಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹೆಚ್ಚು ಒತ್ತು ನೀಡುತ್ತಿದ್ದಾರೆ. ಕೇರಳ, ತಮಿಳುನಾಡು, ಉತ್ತರ ಭಾರತ ರಾಜ್ಯಗಳ ವಿದ್ಯಾರ್ಥಿಗಳು, ಕರ್ನಾಟಕದ ಕೊಡಗು, ದಕ್ಷಿಣ ಕನ್ನಡದ ಭಾಗದವರು ಮಾತ್ರ ಹೆಚ್ಚು ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಆದರೆ ಉಳಿದ ಜಿಲ್ಲೆಯವರು ವೈದ್ಯಕೀಯ ಕ್ಷೇತ್ರದಲ್ಲಿರುವ ಅನೇಕ ಕೋರ್ಸ್ಗಳಿಗೆ ಗಮನ ಹರಿಸುತ್ತಿಲ್ಲ. ಆದ್ದರಿಂದ ಈ ಭಾಗದಲ್ಲಿಯೂ ಆರೋಗ್ಯ ಕ್ಷೇತ್ರದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಡಿಸೇಂಬರ್
ಅಂತ್ಯದೊಳಗೆ
ಪೂರ್ಣಗೊಳಿಸಿ
ಚಿಕ್ಕಬಳ್ಳಾಪುರ
ಸರ್ಕಾರಿ
ವೈದ್ಯಕೀಯ
ಕಾಲೇಜಿನಲ್ಲಿ
ಅನೇಕ
ಕೋರ್ಸ್ಗಳು
ತಲೆ
ಎತ್ತಲಿದ್ದು,
ಈ
ಭಾಗದ
ಸುತ್ತಮುತ್ತಲಿನ
ಜಿಲ್ಲೆಯ
ವಿದ್ಯಾರ್ಥಿಗಳಿಗೆ
ಅನುಕೂಲವಾಗಲಿದೆ.
ಈ
ಹಿನ್ನೆಲೆಯಲ್ಲಿ
ಶೀಘ್ರವಾಗಿ
ವೈದ್ಯಕೀಯ
ಕಾಲೇಜನ್ನು
ಉದ್ದೇಶಿತ
ಕಟ್ಟಡದಲ್ಲಿ
ಆರಂಭಿಸಬೇಕಾಗಿದ್ದು,
ನೂತನ
ಕಟ್ಟಡದ
ಕಾಮಗಾರಿಯ
ಪ್ರಗತಿಯನ್ನು
ಪ್ರತಿ
ತಿಂಗಳವಾರು
ಪರಿಶೀಲನೆ
ಮಾಡಲಾಗುವುದು.
ಕೆಲಸ ಮಾಡಲು ಈಗಾಗಲೇ ಯೋಜಿಸಿರುವ ಪ್ರತಿ ತಿಂಗಳ ಕಾಮಗಾರಿಯ ವಿವರದ ವರದಿಯನ್ನು ನೀಡುವಂತೆ ಹಾಗೂ ಬರುವ ಡಿಸೇಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರರಿಗೆ ಸೂಚನೆ ನೀಡಿದರು. ಕಾಮಗಾರಿ ನಡೆಯುತ್ತಿರುವ ಪ್ರಗತಿಯನ್ನು ಪ್ರತಿದಿನ ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ (ಬಾಬು), ಉಪವಿಭಾಗಾಧಿಕಾರಿ ಡಾ.ಜಿ. ಸಂತೋಷ್ ಕುಮಾರ್, ತಾಲ್ಲೂಕು ತಹಸೀಲ್ದಾರ್ ಗಣಪತಿ ಶಾಸ್ತ್ರೀ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.