ಯೋಗ ಹೀಗೂ ಮಾಡಬಹುದು, ವಿಜಯ್ ಕಾಂತ್ ಫನ್ನಿ ವಿಡಿಯೋ
ಚೆನ್ನೈ, ಜೂ.23: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ದಿನ ವಿವಿಧ ರೀತಿ ಆಸನಗಳನ್ನು ನೀವು ನೋಡಿರಬಹುದು. ವಿಶ್ವ ಯೋಗ ದಿನಾಚರಣೆ ಗಿನ್ನಿಸ್ ರೆಕಾರ್ಡ್ ಕೂಡಾ ಆಗಬಹುದು, ಅದರೆ, ತಮಿಳು ನಟ ಕಮ್ ರಾಜಕಾರಣಿ ವಿಜಯ್ ಕಾಂತ್ ರಂತೆ ಯೋಗ ಮಾಡಲು ಸಾಧ್ಯವಿಲ್ಲ ಬಿಡಿ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಪ್ರಮುಖ ರಾಜಕಾರಣಿಗಳು ಯೋಗಾಭ್ಯಾಸ ಮಾಡಿದರು. ದಕ್ಷಿಣ ಭಾರತದಲ್ಲೂ ಯೋಗ ದಿನಾಚರಣೆ ಚೆನ್ನಾಗೇ ನಡೆಯಿತು. ಚೆನ್ನೈ ನಲ್ಲಿ ಮಾತ್ರ ದೇಶಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಮುಖ್ಯಸ್ಥ ಕಮ್ ನಟ ವಿಜಯ್ ಕಾಂತ್ ಅವರು ಕೂಡಾ ಸಾರ್ವಜನಿಕವಾಗಿ ಯೋಗಾಭ್ಯಾಸ ಮಾಡಿದರು.

ಸುಮಾರು 100ಕ್ಕೂ ಅಧಿಕ ಕಾರ್ಯಕರ್ತರೊಡನೆ ಯೋಗಾಭ್ಯಾಸ ಮಾಡುವ ಸಾಹಸಕ್ಕೆ ಕೈ ಹಾಕಿದ ಕ್ಯಾಪ್ಟನ್ ವಿಜಯ್ ಕಾಂತ್ ಅವರಿಗೆ ಯುವ ಕಾರ್ಯಕರ್ತರೇ ಗುರುಗಳಾಗಿದ್ದರು. ಅದರೆ, ಗುರುಗಳು ಹೇಳಿದ ಮಾತುಗಳು ಅನುಸರಿಸಲು ವಿಫಲರಾದ ಕ್ಯಾಪ್ಟನ್ ಮಾಡಿದ ಭಂಗಿಗಳಿಗೆ ಹೆಸರಿಡುವುದು ಕಷ್ಟ.
ಕೊನೆಗೆ ಅನುಲೋಮ, ವಿಲೋಮ ಎನ್ನುತ್ತಾ ಪ್ರಾಣಾಯಾಮ ಮಾಡಲು ಸಿದ್ದರಾದ ಕ್ಯಾಪ್ಟನ್ ಗೆ ಯಾವ ಬೆರಳು ಬಳಸಬೇಕು ಎಂಬುದು ತಿಳಿಯದೆ ಕನ್ ಫ್ಯೂಸ್ ಆದರು.
ಅಂತಿಮವಾಗಿ ಯೋಗದ ಬಗ್ಗೆ ಮಾತನಾಡಿದ 62 ವರ್ಷ ವಯಸ್ಸಿನ ವಿಜಯ್ ಕಾಂತ್, ಎಲ್ಲರೂ ಯೋಗ ಮಾಡಬೇಕು ಇದರಿಂದ ಶಾಂತಿ, ಆರೋಗ್ಯ ಸಿಗುತ್ತಾದೆ. ನಾನು 108 ಪದ್ಮಾಸನ ನಿರಂತರವಾಗಿ ಮಾಡುತ್ತಿದ್ದೆ. ಹೀಗಾಗಿ ಈಗಲೂ ನಾನು ಫಿಟ್ ಆಗಿದ್ದೇನೆ ಎಂದಿದ್ದಾರೆ. ಅದರೆ, ಏಳು ನಿಮಿಷಗಳ ವಿಡಿಯೋ ನೋಡಿದರೆ ವಿಜಯ್ ಕಾಂತ್ ಯೋಗಾಭ್ಯಾಸ ನಗು ತರಿಸದೇ ಇರದು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications