ಸೀಟು ಹಂಚಿಕೆ ಅಸಮಾಧಾನ: ಎಐಎಡಿಎಂಕೆ ಮೈತ್ರಿ ತೊರೆದ ಡಿಎಂಡಿಕೆ

ಚೆನ್ನೈ, ಮಾರ್ಚ್ 9: ತಮಿಳುನಾಡು ವಿಧಾನಸಭೆ ಚುನಾವಣೆ ದಿನಾಂಕ ಹತ್ತಿರವಿದ್ದರೂ ಸೀಟು ಹಂಚಿಕೆ ಗೊಂದಲ, ಚರ್ಚೆ, ಅಸಮಾಧಾನ ಇನ್ನೂ ಬಗೆಹರಿದಿಲ್ಲ. ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಎಐಎಡಿಎಂಕೆ ಮೈತ್ರಿಯನ್ನು ತೊರೆಯುತ್ತಿರುವುದಾಗಿ ನಟ ವಿಜಯಕಾಂತ್ ಹೇಳಿದ್ದಾರೆ.

ನಟ ಕಮ್ ರಾಜಕಾರಣಿ ವಿಜಯ್ ಕಾಂತ್ ಅವರ ದೇಸಿಯ ಮುರ್ಪೊಕ್ಕು ದ್ರಾವಿದ ಕಳಗಂ(ಡಿಎಂಡಿಕೆ) ಎಐಎಡಿಎಂಕೆ-ಬಿಜೆಪಿ ಮೈತ್ರಿ ತೊರೆದು ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ.

ಕಳೆದ ವಾರ ಎಐಎಡಿಎಂಕೆ ಹಾಗೂ ಬಿಜೆಪಿ ಸೀಟು ಹಂಚಿಕೆ ಬಗ್ಗೆ ಪ್ರಕಟಣೆ ಹೊರಡಿಸಿದ್ದವು ಆದರೆ, ಡಿಎಂಡಿಕೆಗೆ ಬೇಡಿಕೆಗೆ ತಕ್ಕಂತೆ ಸೀಟು ಹಂಚಿಕೆಯಾಗಿರಲಿಲ್ಲ.

Tamil Nadu elections: Actor Vijayakanths DMDK exits AIADMK-BJP alliance

ಮುಂದಿನ ಹಾದಿ:
ವಿಜಯ್ ಕಾಂತ್ ಅವರು ಬಯಸಿದರೆ ದಿನಕರನ್ ಅವರ ಎಎಂಎಂಕೆ ಅಥವಾ ಕಮಲ್ ಹಾಸನ್ ಅವರ ಎಂಎನ್ಎಂ ಜೊತೆ ಮೈತ್ರಿ ಸಾಧಿಸಬಹುದು. ಮಕ್ಕಳ್ ನೀತಿ ಮೈಯಂ ಈಗಾಗಲೇ ಅಭ್ಯರ್ಥಿಗಳನ್ನು ಹೆಸರಿಸಿದ್ದು, ಡಿಎಂಡಿಕೆಗೆ ಹಿನ್ನಡೆಯಾಗಲಿದೆ.

ಎಂಎನ್ಎಂ 154 ಮಿತ್ರಪಕ್ಷ ಎಐಎಸ್ ಎಂಕೆ ಹಾಗೂ ಐಜೆಕೆಗೆ ಉಳಿದ 80 ಕ್ಷೇತ್ರಗಳನ್ನು ನೀಡಲಾಗಿದೆ.

234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+