ಜಯಲಲಿತಾ ಬದುಕಿದ್ದಿದ್ದರೆ ಹೀಗೆ ಮಾಡುವ ಧೈರ್ಯ ಯಾರಿಗೂ ಇರ್ತಿರಲಿಲ್ಲ
ತಮಿಳುನಾಡಿನ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಮ್ ಮೋಹನ್ ರಾವ್ ಸ್ಫೋಟಕ ಎನಿಸುವಂಥ ಹೇಳಿಕೆಗಳನ್ನು ನೀಡಿದ್ದಾರೆ. ನಾನಿನ್ನೂ ಸಿಎಸ್, ನನಗೆ ಜೀವ ಬೆದರಿಕೆ ಇದೆ, ಸರಕಾರಕ್ಕೆ ನನ್ನ ವರ್ಗಾವಣೆ ಮಾಡುವ ಧೈರ್ಯವಿಲ್ಲ...ಹೀಗೆ ಸಾಗುತ್ತದೆ ಮಾತಿನ ವೈಖರಿ
ಚೆನ್ನೈ, ಡಿಸೆಂಬರ್ 27: ನಾನಿನ್ನೂ ಮುಖ್ಯ ಕಾರ್ಯದರ್ಶಿ. ನನ್ನ ವರ್ಗಾವಣೆ ಮಾಡೋದಿಕ್ಕೆ ಸರಕಾರಕ್ಕೆ ಧೈರ್ಯವಿಲ್ಲ ಎಂದು ಐಎಎಸ್ ಅಧಿಕಾರಿ ರಾಮ್ ಮೋಹನ್ ರಾವ್ ಹೇಳಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಅನೇಕ ಸ್ಫೋಟಕ ಸಂಗತಿಗಳನ್ನು ಹೊರಹಾಕಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾವ್ ಮನೆ, ಕಚೇರಿ ಮೇಲೆ ದಾಳಿ ನಡೆಸಿದ ನಂತರ ಅವರನ್ನು ಸಿಎಸ್ ಹುದ್ದೆಯಿಂದ ತೆಗೆದುಹಾಕಲಾಗಿತ್ತು.
ನನ್ನ ಜೀವಕ್ಕೆ ತೊಂದರೆಯಿದೆ ಎಂದು ಕೂಡ ಅತಂಕ ಹೊರಹಾಕಿದ್ದಾರೆ ರಾವ್. ಎರಡು ದಿನಗಳ ಕಾಲ ರಾವ್ ಹಾಗೂ ಅವರಿಗೆ ಸಂಬಂಧಪಟ್ಟವರ ಮನೆಗಳ ಮೇಲೂ ಆದಾಯ ತೆರಿಗೆ ಇಲಾಖೆಯ ದಾಳಿ ನಡೆದಿತ್ತು. 30 ಲಕ್ಷ ನಗದು, 5 ಕೆ.ಜಿ. ಚಿನ್ನ ಅಧಿಕಾರಿಯ ಮನೆಯಲ್ಲಿ ಸಿಕ್ಕಿತ್ತು. ಹಣ ಬದಲಾಯಿಸುವ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ರಾವ್ ಅವರ ಮಗನ ಮನೆ ಮೇಲೆ ಕೂಡ ದಾಳಿ ನಡೆದಿತ್ತು.[ಮುಖ್ಯ ಕಾರ್ಯದರ್ಶಿ ಸಂಬಂಧಿಕರ ಮನೇಲಿ ಸಿಕ್ತು ಕೆಜಿಗಟ್ಟಲೆ ಚಿನ್ನ]

ಅದಾದ ಒಂದು ದಿನಕ್ಕೆ ರಾವ್ ಅವರ ಸ್ಥಾನಕ್ಕೆ ಗಿರಿಜಾ ವೈದ್ಯನಾಥನ್ ನೇಮಕವಾಗಿತ್ತು. ಸಿಆರ್ ಪಿಎಫ್ ಸಿಬ್ಬಂದಿ ತನಿಖೆಗಾಗಿ ತಂದಿದ್ದ ವಾರಂಟ್ ನಲ್ಲಿ ನನ್ನ ಹೆಸರೇ ಇರಲಿಲ್ಲ. ಒಂದು ವೇಳೆ ಜಯಲಲಿತಾ ಅವರು ಬದುಕಿದ್ದಿದ್ದರೆ ಹೀಗೆ ಮಾಡುವುದಕ್ಕೆ ಯಾರಿಗೂ ಧೈರ್ಯ ಇರ್ತಿರಲಿಲ್ಲ. ಇದು ಸಾಂವಿಧಾನಿಕ ಹಲ್ಲೆ ಎಂದಿದ್ದಾರೆ ರಾಮ್ ಮೋಹನ್ ರಾವ್.[ತ.ನಾಡು ಸಿಎಸ್ ರಾಮ್ ಮನೋಹರ್ ರಾವ್ ಔಟ್, ಗಿರಿಜಾ ಇನ್]
ತಮ್ಮನ್ನು ಬೆಂಬಲಿಸಿದ ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ ರಾವ್. ಅವರಿಗೆ ನನ್ನ ಹತ್ತಿರ ಸಿಕ್ಕಿದ್ದು 1,02,320 ರುಪಾಯಿ ಮಾತ್ರ ಎಂದು ಅವರು ಹೇಳಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications