ಸ್ಟೇಝಿಲ್ಲಾ ಸ್ಥಾಪಕ ಯೋಗೇಂದ್ರ ವಸುಪಾಲ್ ಗೆ ಜಾಮೀನು
ಸ್ಟೇಝಿಲ್ಲಾ ಸ್ಥಾಪಕ ಯೋಗೇಂದ್ರ ವಸುಪಾಲ್ ಗೆ ಕೊನೆಗೂ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. 40 ಲಕ್ಷ ರು ಶ್ಯೂರಿಟಿ ಮೊತ್ತ ಪಾವತಿ, ಜಾಮೀನು ಪಡೆಯುವಂತೆ ಮದ್ರಾಸ್ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಚೆನ್ನೈ, ಏಪ್ರಿಲ್ 11: ಸ್ಟೇಝಿಲ್ಲಾ ಸ್ಥಾಪಕ ಯೋಗೇಂದ್ರ ವಸುಪಾಲ್ ಗೆ ಕೊನೆಗೂ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. 40 ಲಕ್ಷ ರು ಶ್ಯೂರಿಟಿ ಮೊತ್ತ ಪಾವತಿ, ಜಾಮೀನು ಪಡೆಯುವಂತೆ ಮದ್ರಾಸ್ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಜಡ್ಜ್ ಎಸ್ ಭಾಸ್ಕರನ್ ಅವರು ಇದೊಂದು ಇಬ್ಬರು ಉದ್ಯಮಿಗಳ ನಡುವಿನ ವ್ಯಾಜ್ಯ ಎಂದು ಪರಿಗಣಿಸಲಾಗಿದೆ ಎಂದು ಹೇಳಿ, ವಸುಪಾಲ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ಸ್ಟೇಂ ಹೋಮ್, ರೆಸಾರ್ಟ್ ಬುಕ್ಕಿಂಗ್ ಅವ್ಯವಹಾರದಿಂದ ಉಂಟಾಗಿರುವ ನಷ್ಟವಾಗಿರುವ ಮೊತ್ತವನ್ನು ಭರಿಸುವಂತೆ ಸೂಚಿಸಿದೆ.
ಮಾರ್ಚ್ 13ರಂದು ಬಂಧನಕ್ಕೊಳಗಾಗಿದ್ದ ವಸುಪಾಲ್ ಅವರು ಅನೇಕ ಬಾರಿ ಜಾಮೀನು ಅರ್ಜಿ ಹಾಕಿದ್ದರು. ಅದರೆ, ಜಾಮೀನು ಮಂಜೂರಾಗಿರಲಿಲ್ಲ.
ಐಪಿಸಿ ಸೆಕ್ಷನ್ 420, 406 ಹಾಗೂ 506(ಐ) ಅನ್ವಯ ದೂರು ದಾಖಲಿಸಲಾಗಿತ್ತು. ಜಿಗ್ ಸಾ ಸಲ್ಯೂಷನ್ಸ್ ಸಂಸ್ಥೆ ನೀಡಿದ ದೂರಿನ ಅನ್ವಯ 1.69 ಕೋಟಿ ರು ಬಾಕಿ ಮೊತ್ತವನ್ನು ಸ್ಟೇಝಿಲ್ಲಾ ಪಾವತಿಸಿಲ್ಲ. ಮಾರ್ಚ್ ಹಾಗೂ ಮೇ 2016ರಲ್ಲಿ ಈ ವ್ಯವಹಾರ ನಡೆದಿದೆ ಎನ್ನಲಾಗಿದೆ.












Click it and Unblock the Notifications