ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಕಮಲ್ಹಾಸನ್
Recommended Video
ಚೆನ್ನೈ, ಡಿಸೆಂಬರ್ 08: ಮಕ್ಕಳ್ ನಿಧಿಮಯಂ ಪಕ್ಷದ ಸ್ಥಾಪಕ ಕಮಲ್ಹಾಸನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಮಕ್ಕಳ ಕಳ್ಳಸಾಗಣೆ ಬಗ್ಗೆ ವಿಶೇಷ ಎಚ್ಚರಿಕೆ ವಹಿಸುವಂತೆ ಆಗ್ರಹಿಸಿದ್ದಾರೆ.
ಜನ್ಮದಿನದ ಸಂದರ್ಭದಲ್ಲಿ ಕಮಲ್ ಹಾಸನ್ ಹೊಸ ಘೋಷಣೆ
ಈ ಚಳಿಗಾಲದ ಅಧಿವೇಶನದಲ್ಲಿ ಮೋದಿ ಅವರು ಮಕ್ಕಳ ಕಳ್ಳಸಾಗಣೆ ಬಗ್ಗೆ ಮಾತನಾಡಬೇಕು ಎಂದು ಕಮಲ್ಹಾಸನ್ ಆಗ್ರಹಿಸಿದ್ದಾರೆ.
ಲೋಕಸಭಾ ಚುನಾವಣೆಗೆ ನಾವು ಸಿದ್ಧ: ಕಮಲ್ ಹಾಸನ್
ಮಾನವಕಳ್ಳ ಸಾಗಣೆ ವಿರುದ್ಧ ಕಾಯ್ದೆಯೊಂದು ಇದೇ ಜುಲೈ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ ಆದರೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿಲ್ಲ ಇದರ ಬಗ್ಗೆಯೂ ಕಮಲ್ಹಾಸನ್ ಅವರು ಮೋದಿ ಅವರಿಗೆ ನೆನಪಿಸಿದ್ದಾರೆ.
ಈ ಅಧಿವೇಶನದಲ್ಲಿ ಮೋದಿ ಅವರು ಮಾನವ ಕಳ್ಳಸಾಗಣೆ ವಿರುದ್ಧ ಕಾಯ್ದೆ ಬಗ್ಗೆ ಚರ್ಚಿಸುತ್ತಾರೆ ಎಂಬ ನಂಬಿಕೆ ನನಗಿದೆ. ಎಲ್ಲಾ ಪಕ್ಷಗಳು ಈ ಕಾಯ್ದೆಗೆ ಬೆಂಬಲ ಕೊಡುತ್ತಾರೆಂದು ಆಶಿಸುತ್ತೇನೆ ಎಂದು ಕಮಲ್ಹಾಸನ್ ಪತ್ರದಲ್ಲಿ ಬರೆದಿದ್ದಾರೆ.
ಮೋದಿ ಭಾಗಿಯಾಗಿದ್ದ ಪ್ರಿಯಾಂಕಾ ಆರತಕ್ಷತೆ ಫೋಟೋಗೆ ಹತ್ತು ಲಕ್ಷಕ್ಕೂ ಅಧಿಕ ಲೈಕ್ಸ್
ಮಾನವಕಳ್ಳಸಾಗಣೆ ವಿರುದ್ಧ ಕಾನೂನು ಗಟ್ಟಿಗೊಳ್ಳಲು ಸಂಸತ್ತು ಸರಿಯಾದ ಪರಿಕರಗಳನ್ನು ಒದಗಿಸುತ್ತದೆ ಎಂದು ನಂಬಿದ್ದೇನೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಮಕ್ಕಳ ನಿಧಿಮಯಂ ಪಕ್ಷ ಸ್ಥಾಪನೆ ಮಾಡಿದ್ದು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.