ಸನ್ನೆ ಮೂಲಕ ಸ್ಪಂದಿಸುತ್ತಿದ್ದಾರೆ ಜಯಲಲಿತಾ!
ಜಯಲಲಿತಾ ಕೂತು, ಸನ್ನೆಗಳ ಮೂಲಕ ಸ್ಪಂದಿಸುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ನಿದ್ದೆ ಮಾಡಿಲ್ಲ. ಅದರೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ.
ಚೆನ್ನೈ, ಅಕ್ಟೋಬರ್ 21: ಪ್ರೊಫೆಸರ್ ರಿಚರ್ಡ್ ಬೇಲೆ ಭಾನುವಾರ ಅಪೋಲೋ ಆಸ್ಪತ್ರೆಯಿಂದ ಹಿಂತಿರುಗಲಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯಸ್ಥಿತಿಯಲ್ಲಿ ಗಣನೀಯವಾಗಿ ಚೇತರಿಕೆ ಕಂಡಿದೆ ಎಂಬ ವರದಿ ಬಂದಿದೆ. ಆದರೂ ಅಪೋಲೋ ಆಸ್ಪತ್ರೆಯಿಂದ ಜಯಲಲಿತಾ ಆರೋಗ್ಯ ಸ್ಥಿತಿ ಬಗ್ಗೆ ಯಾವುದೇ ಮೆಡಿಕಲ್ ಬುಲೆಟಿನ್ ಬಂದಿಲ್ಲ.
ಆಕೆ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗುವ ಸಾಧ್ಯತೆ ಇದೆ. ಮಾಧ್ಯಮವೊಂದರ ಮಾಹಿತಿ ಪ್ರಕಾರ, ಜಯಲಲಿತಾ ಕೂತು, ಸನ್ನೆಗಳ ಮೂಲಕ ಸ್ಪಂದಿಸುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ನಿದ್ದೆ ಮಾಡಿಲ್ಲ. ಅದರೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ. ಒಮ್ಮೆ ಆಕೆಗೆ ಹಾಕಿರುವ ಟ್ಯೂಬ್ ತೆಗೆದ ನಂತರ ಮಾತನಾಡಬಹುದು.['ಅಮ್ಮ'ನಿಗೆ ಶನಿ ಭುಕ್ತಿ ಸಮಸ್ಯೆ: ಅ.10ರ ನಂತರ ಓಕೆ ಅಂತಾರೆ ಜ್ಯೋತಿಷಿಗಳು!]
ಜಯಲಲಿತಾ ಅವರ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡಿದೆ. ತಜ್ಞ ವೈದ್ಯರ ಚಿಕಿತ್ಸೆಯಿಂದ ಸೋಂಕು ಕಡಿಮೆಯಾಗಿದೆ. ಈ ಮಧ್ಯೆ ಎಐಎಡಿಎಂಕೆ ಪಕ್ಷದಿಂದಲೂ ಹೇಳಿಕೆ ಬಂದಿದ್ದು, ತಜ್ಞರು-ವೈದ್ಯರು ನಿತ್ಯವೂ ಮುಖ್ಯಮಂತ್ರಿಗಳ ಆರೋಗ್ಯ ಸ್ಥಿತಿ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.[ಜಯಲಲಿತಾ ನಿಸ್ತೇಜ, ಆರೋಗ್ಯ ವರದಿ ನಿಶ್ಯಬ್ದ]
ಎಐಎಡಿಎಂಕೆ ವಕ್ತಾರೆ ಸರಸ್ವತಿ ಚೆನ್ನೈನಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿ, ಜಯಲಲಿತಾ ಅವರು ವೈದ್ಯರ ಸಕಹೆ ಮೇರೆಗೆ ವಿಶ್ರಾಂತಿಯಲ್ಲಿದ್ದಾರೆ. ಅವರೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯದಲ್ಲೇ ಮನೆಗೆ ಹಿಂತಿರುಗಲಿದ್ದಾರೆ. ಆಕೆ ಪರವಾಗಿ ದೇವರಿದ್ದಾನೆ ಎಂದಿದ್ದಾರೆ.