ವ್ಯಭಿಚಾರ ಅಪರಾಧವಲ್ಲ ಎಂದ ಪತಿಯಿಂದ ಬೇಸತ್ತು ಪತ್ನಿ ಆತ್ಮಹತ್ಯೆ
ಚೆನ್ನೈ, ಅಕ್ಟೋಬರ್ 01 : ವ್ಯಭಿಚಾರ ಅಪರಾಧವಲ್ಲ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ ಮೂರೇ ದಿನಗಳಲ್ಲಿ, ಇಂಥದೊಂದು ಪ್ರಕರಣ ಓರ್ವ ಮಹಿಳೆಯ ಪ್ರಾಣವನ್ನು ತೆಗೆದುಕೊಂಡಿದೆ.
ಮನೆಯವರ ವಿರೋಧವನ್ನೂ ಧಿಕ್ಕರಿಸಿ ಎರಡು ವರ್ಷಗಳ ಹಿಂದೆ 27 ವರ್ಷದ ಜಾನ್ ಪಾಲ್ ಫ್ರಾಂಕ್ಲಿನ್ ಎಂಬಾತನನ್ನು ಪ್ರೇಮ ಮದುವೆಯಾಗಿದ್ದ 24 ವರ್ಷದ ಪುಷ್ಪಲತಾ ಎಂಬುವವರು, ತನ್ನ ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ ದುರಂತ ಶನಿವಾರ ರಾತ್ರಿ ನಡೆದಿದೆ.
ನಾನು ಬೇರೆಯವಳೊಂದಿಗೆ ಸಂಬಂಧವಾದರೂ ಇಟ್ಕೊತೀನಿ, ಏನಾದ್ರೂ ಮಾಡ್ಕೋತೀನಿ. ಕೇಳೋಕ್ಕೆ ನೀನ್ಯಾರು. ಸುಪ್ರೀಂ ಕೋರ್ಟ್ ಹೇಳಿಲ್ವಾ ಅನೈತಿಕ ಸಂಬಂಧ ಅಪರಾಧವಲ್ಲ ಅಂತ. ನೀವು ಯಾವ ಕೇಸನ್ನೂ ಬುಕ್ ಮಾಡಲು ಸಾಧ್ಯವಿಲ್ಲ ಅಂತ ಫ್ರಾಂಕ್ಲಿನ್ ಸವಾಲು ಎಸೆದಿದ್ದ.

ಒಂದು ಮಗುವನ್ನೂ ಹೆತ್ತಿರುವ ಪುಷ್ಪಲತಾ ಕ್ಷಯ ರೋಗದಿಂದ ಬಳಲುತ್ತಿದ್ದಳು. ಆಗಾಗ ಹುಷಾರಿಲ್ಲದೆ ಮಲಗುತ್ತಿದ್ದಳು. ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಫ್ರಾಂಕ್ಲಿನ್ ಚಿಕಿತ್ಸೆಗಾಗಿ ಆಕೆಗೆ ಹಣಕಾಸಿನ ನೆರವು ನೀಡುವುದನ್ನು ನಿಲ್ಲಿಸಿದ್ದ ಮತ್ತು ಕ್ರಮೇಣ ಆಕೆಯಿಂದ ದೂರವಾಗಲು ಆರಂಭಿಸಿದ್ದ.
ಇಬ್ಬರ ನಡುವಿನ ಅಂತರ ಕ್ರಮೇಣ ಜಾಸ್ತಿಯಾಗುತ್ತ ಸಾಗುತ್ತಿದ್ದಾಗ, ಪುಷ್ಪಲತಾ ತನ್ನ ಗಂಡನ ಸ್ನೇಹಿತನಿಗೆ ಫೋನ್ ಮಾಡಿ ವಿಚಾರಿಸಿದ್ದಾಳೆ. ಆಗ ಆಕೆಯ ಅನುಮಾನ ಮತ್ತು ಹೆದರಿಕೆ ನಿಜವಾಗಿದೆ. ಫ್ರಾಂಕ್ಲಿನ್ ಆವಾಗಾಗಲೆ ಮತ್ತೊಬ್ಬ ಮಹಿಳೆಯ ಮೋಹಪಾಶದಲ್ಲಿ ಸಿಲುಕಿದ್ದ ಮತ್ತು ಆಕೆಯೊಂದಿಗೆ ಅನೈತಿಕ ಸಂಬಂಧವನ್ನೂ ಇಟ್ಟುಕೊಂಡಿದ್ದ.
ಪ್ರತಿದಿನ ಮನೆಗೆ ತಡವಾಗಿ ಬರುತ್ತಿದ್ದ ಫ್ರಾಂಕ್ಲಿನ್ ನನ್ನು ಏನು ವಿಷಯವೆಂದು ಕೇಳಿದ್ದಾಳೆ ಮತ್ತು ಹೆಂಗಸಿನೊಂದಿಗಿನ ಸಂಬಂಧವನ್ನು ಕೆದಕಿ ಜಗಳ ತೆಗೆದಿದ್ದಾಳೆ. ಮತ್ತೊಬ್ಬ ಹೆಂಗಸಿನಿಂದ ದೂರವಿರಬೇಕು ಎಂದು ಆಗ್ರಹಿಸಿದ್ದಾಳೆ. ಆತ ಯಾವುದಕ್ಕೂ ಬಗ್ಗದಿದ್ದಾಗ ಪೊಲೀಸ್ ಕಂಪ್ಲೇಂಟ್ ನೀಡುವುದಾಗಿ ಪುಷ್ಪಲತಾ ಫ್ರಾಂಕ್ಲಿನ್ ನನ್ನು ಬೆದರಿಸಿದ್ದಾಳೆ.
ಇವನು ಬಗ್ಗುತ್ತಾನಾ? ಅಷ್ಟರಲ್ಲಾಗಲೇ ಸರ್ವೋಚ್ಚ ನ್ಯಾಯಾಲಯ ಅನೈತಿಕ ಸಂಬಂಧ ಅಪರಾಧವಲ್ಲ ಎಂದು ಐತಿಹಾಸಿಕ ತೀರ್ಪು ನೀಡಿಯಾಗಿತ್ತು. ಇದರ ಲಾಭ ಪಡೆದ ಫ್ರಾಂಕ್ಲಿನ್, ಬೇಕಿದ್ದರೆ ಪೊಲೀಸರಿಗೆ ದೂರು ನೀಡು, ಪೊಲೀಸರು ನನ್ನನ್ನು ಬುಕ್ ಮಾಡಲು ಸಾಧ್ಯವೇ ಇಲ್ಲ. ಅನೈತಿಕ ಸಂಬಂಧ ಅಪರಾಧವಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿದೆ ಎಂದು ತಿರುಗೇಟು ನೀಡಿದ್ದಾನೆ.
ಹೆದರಿಸಿ, ಬೆದರಿಸಿ ಪ್ರಯೋಜನವಿಲ್ಲವೆಂದು ಅರಿತ ಪುಷ್ಪಲತಾ, ಎಂಜಿಆರ್ ನಗರದಲ್ಲಿರುವ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ, ಸುಪ್ರೀಂ ಕೋರ್ಟ್ ಒಂದು ವಿಷಯವನ್ನು ಸ್ಪಷ್ಟಪಡಿಸಿದೆ. ಅದೇನೆಂದರೆ, ಅನೈತಿಕ ಸಂಬಂಧ ಬಾಳ ಸಂಗಾತಿಯ ಸಾವಿಗೆ ಕಾರಣವಾದರೆ, ಅದು ವ್ಯಭಿಚಾರ ನಡೆಸುತ್ತಿದ್ದ ವ್ಯಕ್ತಿಯ ಅಪರಾಧವಾಗುತ್ತದೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications