6 ತಾಸು, 18 ಕಿ.ಮೀ. ಸಮುದ್ರದಲ್ಲಿ ಈಜು, ದಾಖಲೆ ನಿರ್ಮಿಸಿದ 8 ರ ಪೋರಿ
ಚೆನ್ನೈ, ಜ. 24: ಸಮುದ್ರದ ಉಳಿವಿಗಾಗಿ ಎಂಟು ವರ್ಷದ ಪೋರಿ ಸಮುದ್ರದಲ್ಲಿ ಬರೋಬ್ಬರಿ ಹದಿನೆಂಟು ಕಿ.ಮೀ. ಈಜುವ ಮೂಲಕ ಅಸಿಸ್ಟ್ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.
ತಾರಾಗೈ ಆರಾಧನಾ ಈ ಸಾಹಸ ಮೆರೆದ ಪೋರಿ. ಎಂಟು ವರ್ಷ ವಯಸ್ಸಿನ ಈ ಪುಟ್ಟ ಪೋರಿ ಸಮುದ್ರ ಉಳಿವಿಗಾಗಿ ಈಜು, ಸಮುದ್ರ ಉಳಿಸಿ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದರ ಭಾಗವಾಗಿ ಆರಾಧನಾ ಬಂಗಾಲ ಕೊಲ್ಲಿಯ ಕೋವಲಂನಿಂದ ಆರಂಭಿಸಿ ಹದಿನೆಂಟು ಕಿ.ಮೀ. ದೂರದಲ್ಲಿರುವ ನೀಲಗರೈ ವರೆಗೂ ಸಮುದ್ರದಲ್ಲಿ ಈಜುವ ಮೂಲಕ ದಡ ಸೇರಿದ್ದಾಳೆ. ಸುಮಾರು ಹದಿನೆಂಟು ಕಿ.ಮೀ. ದೂರವನ್ನು ಏಳು ತಾಸಿನಲ್ಲಿ ಕ್ರಮಿಸಿದ್ದಾಳೆ.
ಬೆಳಗ್ಗೆ ಆರು ಗಂಟೆಗೆ ಸಮುದ್ರ ಉಳಿವಿಗಾಗಿ ಈಜು ಆರಂಭಿಸಬೇಕಿತ್ತು. ತೀವ್ರ ಮಳೆ ಹಿನ್ನೆಲೆಯಲ್ಲಿ ಒಂದು ತಾಸು ತಡವಾಗಿ ಆರಂಭವಾಯಿತು. ನಂತರ ಕ್ರಮವಾಗಿ ಹತ್ತು ಕಿ.ಮೀ. ಈಜಿ ಆರಾಧನಾ ಸ್ವಲ್ಪ ಸುಸ್ತಾದರು. ಮಳೆ ಬೀಳುತ್ತಿದ್ದರಿಂದ ಸ್ವಲ್ಪ ಚಳಿಗೆ ನಡಗುತ್ತಿದ್ದಳು. ಕೊನೆಗೂ ಮಧ್ಯಾಹ್ನದ ವೇಳೆಗೆ ನಿಗದಿತ ದೂರ ಕ್ರಮಿಸಿ ಆರಾಧಾನಾ ದಾಖಲೆ ನಿರ್ಮಿಸಿದಳು ಎಂದು ಆಕೆಯ ತಂದೆ ಅರವಿಂದ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಬರೋಬ್ಬರಿ ಹದಿನೆಂಟು ಕಿ.ಮೀ. ಸಮುದ್ರದಲ್ಲಿ ಈಜಿ ದಡ ಸೇರಿದ ಆರಾಧನಾಳನ್ನು ಸ್ಥಳೀಯರು ಭರ ಮಾಡಿಕೊಂಡರು. ಅಲ್ಲದೇ ಆಕೆಯನ್ನು ಅಪ್ಪಿಕೊಂಡು ಮುದ್ದಾಡಿದರು. ಚಿಕ್ಕ ವಯಸ್ಸಿನಲ್ಲಿ ಈ ಸಾಹಸ ಮಾಡುವ ಮೂಲಕ ಆರಾಧಾನ ದಾಖಲೆ ನಿರ್ಮಿಸಿದ್ದಾಳೆ.

Recommended Video
ಪಾಂಡಿಚೇರಿಯಲ್ಲಿ ಸ್ಕೂಬಾ ಡೈವಿಂಗ್ ಟ್ರೈನಿಂಗ್ ಸೆಂಟರ್ ಹೊಂದಿರುವ ಅರವಿಂದ್ ಅವರ ಪುತ್ರಿ ಆರಾಧನಾ. ಸಮುದ್ರದ ಆಳದಲ್ಲಿ ಮದುವೆ ಮಾಡಿಸುವುದು, ಸಮುದ್ರದ ಆಳದಲ್ಲಿ ಪುಟ್ಬಾಲ್ ಆಟ ಆಡಿಸುವ ಮೂಲಕ ಸಮುದ್ರದ ಉಳಿವಾಗಿ ವಿನೂತನ ಜಾಗೃತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಪದೇ ಪದೇ ಸುದ್ದಿಯಾಗುತ್ತಿದ್ದರು. ಇದೀಗ ಅರವಿಂದ್ ಅವರ ಪುತ್ರಿಯೇ ಸಮುದ್ರದಲ್ಲಿ ಹದಿನೆಂಟು ಕಿ.ಮೀ. ಈಜಿ ದಡ ಸೇರಿ ಭರವಸೆ ಮೂಡಿಸಿದ್ದಾಳೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications