ಪುದುಚೇರಿಯಲ್ಲಿ ಹಿಂದಿ ಹೇರಿಕೆ ವಿರುದ್ಧ ಡಿಎಂಕೆ ಪ್ರತಿಭಟನೆ
ಚೆನ್ನೈ ಮೇ 09: ಪುದುಚೇರಿಯಲ್ಲಿ ಹಿಂದಿ ಹೇರಿಕೆ ವಿರುದ್ಧ ವಿರೋಧ ಡಿಎಂಕೆ ಪಕ್ಷ ಸೋಮವಾರ ಪ್ರತಿಭಟನೆ ನಡೆಸಿದೆ. ಇದಕ್ಕೂ ಮುನ್ನ ಪ್ರತಿಪಕ್ಷದ ನಾಯಕ ಆರ್.ಶಿವ ನೇತೃತ್ವದಲ್ಲಿ ಹಿಂದಿ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆ ನಾಯಕರನ್ನು ಬಂಧಿಸಲಾಗಿತ್ತು. ಪ್ರತಿಭಟನೆಯ ನಂತರ ಅಧಿಕೃತ ದಾಖಲೆಗಳಲ್ಲಿ ಮತ್ತು ಸಂವಹನಗಳಲ್ಲಿ ಹಿಂದಿಯನ್ನು ಬಳಸಲು ಸೂಚನೆಗಳನ್ನು ಕೂಡ ಪುದುಚೇರಿಯಲ್ಲಿ ನೀಡಲಾಗಿತ್ತು.
ಹಿಂದಿ ಹೇರಿಕೆ ಆರೋಪದ ವಿರುದ್ಧ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ವಿರೋಧ ಪಕ್ಷ ಡಿಎಂಕೆ ಸೋಮವಾರ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆಯ ನಂತರ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ್ದರು. ಈ ಹಿಂದೆ ರೀತಿ ಹಿಂದಿ ಭಾಷೆಯು ಪುದುಚೇರಿಯಲ್ಲಿ ಹೇರಿಕೆಯಾಗಿಲ್ಲ, ಆದರೆ ಈ ಹಿಂದೆ ಭಾಷೆಯನ್ನು ಹೇರಲಾಗಿದೆ ಎಂದು ಡಿಎಂಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ನಂತರ ಪ್ರಾದೇಶಿಕ ಭಾಷೆಯಾದ ತಮಿಳು ಭಾಷೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು.
ಏಕಕಾಲದಲ್ಲಿ ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಇತ್ತೀಚೆಗೆ ಹೊರಡಿಸಿದ ಸುತ್ತೋಲೆ ವಿರುದ್ಧ ಪಕ್ಷದ ಸಂಚಾಲಕ ಮತ್ತು ವಿರೋಧ ಪಕ್ಷದ ನಾಯಕ ಆರ್ ಶಿವ ನೇತೃತ್ವದಲ್ಲಿ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಪ್ರತಿಭಟನೆಗಳು ನಡೆಸಿದ್ದವು ಈ ವೇಳೆ ಡಿಎಂಕೆ ನಾಯಕರನ್ನು ಬಂಧಿಸಲಾಗಿತ್ತು. ಈ ಸುತ್ತೋಲೆಯಲ್ಲಿ ಅಧಿಕೃತ ದಾಖಲೆಗಳು ಮತ್ತು ಸಂವಹನದಲ್ಲಿ ಹಿಂದಿಯನ್ನು ಬಳಸಲು ಸೂಚನೆಗಳನ್ನು ನೀಡಲಾಗಿತ್ತು. ಆದರೆ ಈ ಪ್ರತಿಭಟನೆಯಲ್ಲಿ ಸ್ಥಳೀಯ ಯುವಕರು ಸೇರಿದಂತೆ ಅನೇಕ ಪ್ರತಿಭಟನಾಕಾರರು ಸಂಸ್ಥೆ ಹೊರಡಿಸಿದ ಸುತ್ತೋಲೆಯನ್ನು ವಿರೋಧಿಸಿ ಖಂಡನಾ ಘೋಷಣೆಗಳನ್ನು ಎತ್ತಿದ್ದರು.
ವಿರೋಧ
ಪಕ್ಷದ
ನಾಯಕ
ಆರ್.ಶಿವ
ಬೇಷರತ್
ವಾಪಸಾತಿ
ಜವಾಹರಲಾಲ್
ಸ್ನಾತಕೋತ್ತರ
ವೈದ್ಯಕೀಯ
ಶಿಕ್ಷಣ
ಮತ್ತು
ಸಂಶೋಧನಾ
ಸಂಸ್ಥೆಯು
ಈಗಾಗಲೇ
ಸ್ಥಳೀಯ
ಯುವಕರಿಗೆ
ಉದ್ಯೋಗಾವಕಾಶಗಳನ್ನು
ನಿರಾಕರಿಸುತ್ತಿದೆ
ಎಂದು
ಪಕ್ಷದ
ಸಂಚಾಲಕ
ಮತ್ತು
ವಿರೋಧ
ಪಕ್ಷದ
ನಾಯಕ
ಆರ್.ಶಿವ
ಆರೋಪಿಸಿದರು.
ಅದೇ
ಸಮಯದಲ್ಲಿ
ಹಿಂದಿಯನ್ನು
ಹೇರುವ
ನಿರ್ದೇಶನದೊಂದಿಗೆ
ಸ್ಥಳೀಯ
ಜನರ
ಮೇಲೆ
ಮತ್ತೊಂದು
ಹೊಡೆತ
ಬಿದ್ದಿದೆ.
ಇದನ್ನು
ಬೇಷರತ್ತಾಗಿ
ಹಿಂಪಡೆಯಬೇಕು
ಆಗ್ರಹಿಸಿದ್ದರು.
ತಮಿಳುನಾಡು ವಿಧಾನಸಭೆಯ ಸದಸ್ಯ ಟಿ ವೇಲ್ಮುರುಗನ್ ಕೂಡ ಹಿಂದಿ ಹೇರಿಕೆಯನ್ನು ವಿರೋಧಿಸಿದ್ದರು. ಇದರೊಂದಿಗೆ ಅವರು ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ಗೆ ಭೇಟಿ ನೀಡಿ ನಿರ್ದೇಶಕ ರಾಕೇಶ್ ಅಗರ್ವಾಲ್ ಅವರೊಂದಿಗೆ ಮಾತನಾಡಿದ್ದರು. ಈ ಸಂಸ್ಥೆಯಲ್ಲಿ ಹಿಂದಿಯನ್ನು ಯಾವುದೇ ರೀತಿಯಲ್ಲಿ ಹಿಂದಿ ಹೇರಿಲ್ಲ, ತಮಿಳು ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗಿದೆ ಎಂದು ನಿರ್ದೇಶಕ ರಾಕೇಶ್ ಅಗರ್ವಾಲ್ ಮಾಹಿತಿ ನೀಡಿದ್ದರು.