Get Updates
Get notified of breaking news, exclusive insights, and must-see stories!

ಜಯಾ ಸಾವಿನ ಸುದ್ದಿ ತಿಳಿಯದೇ ವಿಧಿವಶರಾದ ಚೋ

ಜಯಲಲಿತಾ ಹಾಗೂ ಚೋ ಅವರಿಬ್ಬರು ಅಪೋಲೋ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಆದರೆ, ಜಯಾ ಸಾವಿನ ಸುದ್ದಿ ಬಗ್ಗೆ ತಿಳಿಯದೆ ಚೋ ಅವರು ಅವರನ್ನು ಹಿಂಬಾಲಿಸಿದ್ದಾರೆ.

ಚೆನ್ನೈ, ಡಿಸೆಂಬರ್ 07: ಖ್ಯಾತ ಅಂಕಣಕಾರ, ರಾಜಕೀಯ ವಿಶ್ಲೇಷಕ, ಪತ್ರಕರ್ತ, ನಟ, ಸಂಭಾಷಣಕಾರ, ಸಿನೆಮಾ ನಿರ್ದೇಶಕ ಶ್ರೀನಿವಾಸ ಅಯ್ಯರ್ ರಾಮಸ್ವಾಮಿ ಅಲಿಯಾಸ್ ಚೋ ರಾಮಸ್ವಾಮಿ ಅವರು ಅಪೋಲೋ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ. ಜಯಲಲಿತಾ ಹಾಗೂ ಚೋ ಅವರಿಬ್ಬರು ಅಪೋಲೋ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಆದರೆ, ಜಯಾ ಸಾವಿನ ಸುದ್ದಿ ಬಗ್ಗೆ ತಿಳಿಯದೆ ಚೋ ಅವರು ಅವರನ್ನು ಹಿಂಬಾಲಿಸಿದ್ದಾರೆ.[ಜಯಲಲಿತಾ ಅಪರೂಪದ ಚಿತ್ರಗಳು]

ಜಯಲಲಿತಾ ಅವರ ಹಿತೈಷಿಯಾಗಿದ್ದ ಚೋ ಅವರಿಗೆ 82 ವರ್ಷ ವಯಸ್ಸಾಗಿತ್ತು. ನವೆಂಬರ್ 29ರಂದು Chronic Obstructive Pulmonary ಸಮಸ್ಯೆಯಿಂದಾಗಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. [ಮೋದಿಯನ್ನು 'ಮರ್ಚಂಟ್ ಆಫ್ ಡೆತ್' ಎಂದಿದ್ದ ಚೋ!]

ಜಯಲಲಿತಾ ಅವರು ಕೂಡಾ ಜ್ವರ, ಜಲಸಂಬಂಧಿ ಸಮಸ್ಯೆಯಿಂದ ಇದೇ ಆಸ್ಪತ್ರೆಯ ಬೇರೊಂದು ಮಹಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ವೈಫಲ್ಯ, ಹೃದಯಾಘಾತಕ್ಕೆ ಒಳಗಾದ ಜಯಾ ಅವರು ಡಿಸೆಂಬರ್ 5ರ ರಾತ್ರಿ 11.30ಕ್ಕೆ ಕೊನೆಯುಸಿರೆಳೆದರು.[ಮೋದಿಯನ್ನು 'ಮರ್ಚಂಟ್ ಆಫ್ ಡೆತ್' ಎಂದಿದ್ದ ಚೋ!]

ಫ್ಲಾಶ್ ಬ್ಯಾಕ್: 2015ರಲ್ಲಿ ಅಪೋಲೋ ಆಸ್ಪತ್ರೆಯಲ್ಲಿ ಅವರು ದಾಖಲಾಗಿದ್ದಾಗ, "ನಿಮ್ಮಂಥ ಮಾರ್ಗದರ್ಶಿ, ಸ್ನೇಹಿತ, ತತ್ತ್ವಜ್ಞಾನಿಯ ಅಗತ್ಯ ನನಗಿದೆ. ಆರೋಗ್ಯವಂತರಾಗಿ ಆದಷ್ಟು ಬೇಗ ಬನ್ನಿ" ಎಂದು ಜಯಲಲಿತಾ ಹಾರೈಸಿದ್ದರು. ಈಗ ಕಾಕತಾಳೀಯವೆಂಬಂತೆ, ಜಯಲಲಿತಾ ಅವರನ್ನು ಚೋ ರಾಮಸ್ವಾಮಿ ಹಿಂಬಾಲಿಸಿದ್ದಾರೆ.

Critical in the same hospital, Cho didn't know of Jaya's death

'ತುಘಲಕ್' ಪತ್ರಿಕೆಯ ಸಂಪಾದಕರಾಗಿದ್ದ ಚೋ ಅವರು ಇಂದಿರಾಗಾಂಧಿ, ವಾಜಪೇಯಿ, ಕರುಣಾನಿಧಿ, ಜಯಲಲಿತಾ, ಜೆಬಿ ಕೃಪಲಾನಿ, ಎಂಜಿ ರಾಮಚಂದ್ರನ್, ರಾಮಕೃಷ್ಣ ಹೆಗಡೆ, ನರೇಂದ್ರ ಮೋದಿ ಅವರ ವಿರುದ್ಧ ಟೀಕೆ ಟಿಪ್ಪಣಿ ಬರೆದಿದ್ದರು. ಮೋದಿಯನ್ನು 'ಮರ್ಚಂಟ್ ಆಫ್ ಡೆತ್' ಎಂದು ಹಾಸ್ಯಭರಿತವಾಗಿ ಹೊಗಳಿದ್ದರು.

ರಾಜಕೀಯವಾಗಿ ಎಲ್ಲರೊಡನೆ ದ್ವೇಷ ಕಟ್ಟಿಕೊಟ್ಟಿದ್ದ ಜಯಾ ಅವರಿಗೆ ಫ್ರೆಂಡ್, ಫಿಲಾಸಫರ್ ಹಾಗೂ ಗೈಡ್ ಆಗಿ ಚೋ ಸದಾ ಅವರ ಹಿತ ಬಯಸುತ್ತಿದ್ದರು.ಡಿಎಂಕೆಯ ಕುಟುಂಬ ರಾಜಕೀಯವನ್ನು ಕಟುವಾಗಿ ವಿರೋಧಿಸಿದ್ದರು.

ಎಂಜಿಆರ್, ಶಿವಾಜಿ ಗಣೇಶನ್, ಕಮಲ ಹಾಸನ್, ರಜನಿಕಾಂತ್ ಸೇರಿದಂತೆ ಹಲವರು ದಿಗ್ಗಜರ ಜತೆ ನಟಿಸಿದ್ದ ಚೋ ಅವರು 14 ನಾಟಕಗಳನ್ನು ರಚಿಸಿದ್ದು, ನಾಟಕಗಳು 5 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ. ಚೋ ಅವರ 'The Whole Truth' ನಾಟಕದ ರಿಹರ್ಸಲ್ ನಲ್ಲಿ ವಿಲನ್ ಪಾತ್ರವಹಿಸಿದ್ದರು, ಜಯಾ ಅವರ ಜತೆ ನಾಟಕ ಅಭ್ಯಾಸದ ಬಗ್ಗೆ ಚೋ ಟೈಮ್ಸ್ ನಲ್ಲಿ ಬರೆದಿದ್ದಾರೆ.

ಚೋ ಅವರು ಬಹು ಮುಖ ಪ್ರತಿಭೆಯುಳ್ಳವರಾಗಿದ್ದರು. ಅಂದಿನ ಮದ್ರಾಸ್ ಕ್ರಿಕೆಟ್ ಅಸೋಸಿಯೇಷನ್ ನ ಎರಡನೇ ಡಿವಿಜನ್ ನಲ್ಲಿ ಕ್ರಿಕೆಟರ್ ಆಗಿದ್ದಾರು, ಮದ್ರಾಸ್ ಹೈಕೋರ್ಟಿನಲ್ಲಿ ಕಾನೂನು ವ್ಯಾಸಂಗ ಮಾಡಿದರು, ಟಿಟಿಕೆ ಕಂಪನಿಗೆ ಹಲವು ವರ್ಷಗಳ ಕಾಲ ಕಾನೂನು ಸಲಹೆಗಾರರಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+