Get Updates
Get notified of breaking news, exclusive insights, and must-see stories!

ಚಂದಮಾಮ: ವಿಕ್ರಮ ಮತ್ತು ಬೇತಾಳ ಕಥೆ ಖ್ಯಾತಿಯ ಚಿತ್ರ ಕಲಾವಿದ ಶಿವಶಂಕರನ್ ನಿಧನ

ಬೆಂಗಳೂರು, ಸೆಪ್ಟೆಂಬರ್ 20: ಮೊಬೈಲ್ ಇಲ್ಲದ ಕಾಲದಲ್ಲಿ, ಮಕ್ಕಳನ್ನು ಓದಿಗೆ ಒರೆ ಹಚ್ಚುತ್ತಿದ್ದ, ರಾಜಾ ವಿಕ್ರಮನ ಸಾಹಸಗಳ ಮೂಲಕ ಬೆರಗಾಗುವ ಜಗತ್ತನ್ನು ತೆರೆದಿಡುತ್ತಿದ್ದ ಚಂದಮಾಮ ಕಲಾವಿದ ಶಂಕರ( ಕೆಸಿ ಶಿವಶಂಕರನ್) ಅವರು ಕೊನೆಯುಸಿರೆಳೆದಿದ್ದಾರೆ.

ವಿಕ್ರಮ ಮತ್ತು ಬೇತಾಳನ ಕಥೆಗಳು ಕಥಾರೂಪಕಗಳಲ್ಲಿ ಸುಂದರವಾಗಿ ಮೂಡಿಬರುತ್ತಿದ್ದ ಕಲಾವಿದ ಶಂಕರ್ ಅವರ ಅದ್ಭುತ ಚಿತ್ರಗಳು ನೇರವಾಗಿ ಮನಸ್ಸಿಗೆ ತಾಕುತ್ತಿದ್ದವು.

ಕೆಸಿ ಶಿವಶಂಕರನ್ 1924 ರಲ್ಲಿ ಈರೋಡ್‌ನಲ್ಲಿ ಜನಿಸಿದರು. ಅವರ ತಂದೆ ಶಿಕ್ಷಕರಾಗಿದ್ದರು. ಮದ್ರಾಸಿನ ಕಾರ್ಪೊರೇಷನ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲ ಶಂಕರ್ ಅವರ ಕೈಬರಹ ಅದ್ಭುತವಾಗಿತ್ತು. ಮುಂದೆ ಆ ಕೈಬರಹವೇ ಚಿತ್ರಕಾರರನ್ನಾಗಿ ಮಾಡಿತ್ತು.

Chandamama Artist KC Sivasankar, Illustrator Of Famous Vikram And Vetala Series Passes Away

ಮುಂದೆ ತಂದೆ ಸೇರಿದಂತೆ ಅನೇಕ ಹಿತೈಷಿಗಳ ಮಾರ್ಗದರ್ಶನದಂತೆ ಬಾಲ ಶಂಕರ್ ಪದವಿ ಶಿಕ್ಷಣ ಪಡೆಯದೆ, ಫೈನ್ ಆರ್ಟ್ಸ್ ಕಾಲೇಜು ಸೇರಿಕೊಂಡು ಒಂದಷ್ಟು ಕಲೆ ಕಲಿತರು.
ಬಳಿಕ 1952ರ ವೇಳೆಗೆ ಮಾಸಿಕ 350 ರೂಪಾಯಿ ಸಂಬಳಕ್ಕೆ ಚಂದಮಾಮ ಮಾಸಿಕ ಪತ್ರಿಕೆ ಸೇರಿಕೊಂಡು ತಮ್ಮ ಭವಿಷ್ಯ ರೂಪಸಿಕೊಂಡರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+