ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಪಟ್ಟು; ಪ್ರತಿಭಟನೆಗಿಳಿದ ರಜನಿ, ಕಮಲ್
ಚೆನ್ನೈ, ಏಪ್ರಿಲ್ 8: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಮಿಳಿಗರು ಪಟ್ಟು ಹಿಡಿದಿದ್ದು ಪ್ರತಿಭಟನೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಇಂದು ಚಿತ್ರರಂಗದ ಮಂದಿ ಹೋರಾಟಕ್ಕೆ ಧುಮುಕಿದ್ದು ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರಕಾರನ್ನು ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಸಂಸತ್ ಭವನದ ಹೊರಗೆ ತಮಿಳುನಾಡು ಮೂಲದ ಸಂಸದರು ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂದು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆದಿತ್ತು. ಈ ಸಂಬಂಧ ತಮಿಳುನಾಡು ಸರಕಾರ ವಿಶೇಷ ಅಧಿವೇಶವನ್ನೂ ಕರೆದು ಮಂಡಳಿ ರಚನೆಗೆ ಕೇಂದ್ರದ ಮೇಲೆ ಒತ್ತಡ ಹೇರುವ ನಿರ್ಣಯ ಕೂಗೊಂಡಿತ್ತು.
ಕಮಲ್ ನಂತರ ಕಾವೇರಿ ಬಗ್ಗೆ ರಜನಿಕಾಂತ್ ಟ್ವೀಟ್!
ಆದರೆ ಕೇಂದ್ರ ಸರಕಾರ ಈ ಪ್ರತಿಭಟನೆಗಳಿಗೆ ಮಣಿಯದೇ ನೀರು ನಿರ್ವಹಣಾ ಮಂಡಳಿ ರಚನೆಗೆ ಮೀನಾ ಮೇಷ ಎಣಿಸುತ್ತಿದೆ.
ಇದರಿಂದ ಕೋಪಗೊಂಡ ತಮಿಳು ಚಿತ್ರರಂಗದ ನಾಯಕರು ಇಂದು ಬಹಿರಂಗ ಪ್ರತಿಭಟನೆಗೆ ಇಳಿದಿದ್ದಾರೆ. ಚೆನ್ನೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಒಂದೇ ವೇದಿಕೆಯಲ್ಲಿ ತಮಿಳು ಚಿತ್ರರಂಗದ ದಿಗ್ಗಜರು ಕಾಣಿಸಿಕೊಂಡಿದ್ದು ತುರ್ತಾಗಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಗಳಾದ ರಜನಿಕಾಂತ್, ಕಮಲ್ ಹಾಸನ್, ಸಂಗೀತ ಮಾಂತ್ರಿಕ ಇಳಯರಾಜ, ವಿಜಯ್, ವಿಕ್ರಂ, ವಿಶಾಲ, ಧನುಷ್, ಸೂರ್ಯ, ನಾಸಿರ್ ಸೇರಿದಂತೆ ಹಲವಾರು ಗಣ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
#WATCH Rajinikanth and Kamal Hassan take part in protest over demand for formation of #CauveryMangementBoard, in Chennai. Music composer Ilayaraja also present. pic.twitter.com/JhIxGxp1QO
— ANI (@ANI) April 8, 2018
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಜನಿಕಾಂತ್, ಪ್ರಧಾನಿ ನರೇಂದ್ರ ಮೋದಿ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.