ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

150 ಪದಾಧಿಕಾರಿಗಳನ್ನು ಉಚ್ಚಾಟಿಸಿದ ಎಐಎಡಿಎಂಕೆ

|
Google Oneindia Kannada News

ಚೆನ್ನೈ, ಫೆಬ್ರವರಿ 09: ಎಐಎಡಿಎಂಕೆ ಪಕ್ಷದಿಂದ ಮತ್ತೊಮ್ಮೆ ಅಮಾನತು ಪ್ರಕ್ರಿಯೆ ನಡೆಸಲಾಗಿದೆ. ಎರಡು ಜಿಲ್ಲೆಗಳಿಂದ ಸರಿ ಸುಮಾರು 150ಕ್ಕೂ ಅಧಿಕ ಪದಾಧಿಕಾರಿಗಳನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡವರ ಪೈಕಿ ಮಾಜಿ ಸಚಿವ ಜಿ ಸೆಂಥಮಿಳನ್ ಹಾಗೂ ಹಿರಿಯ ನಾಯಕ ಪರಿಥಿ ಇಳಮ್ ವಳುಥಿ ಸೇರಿದ್ದಾರೆ. ದಕ್ಷಿಣ ಚೆನ್ನೈ ಹಾಗೂ ಕಡಲೂರು ಪಶ್ಚಿಮ ಜಿಲ್ಲೆಗಳಲ್ಲಿನ ಸುಮಾರು 150 ಪದಾಧಿಕಾರಿಗಳನ್ನು ಉಚ್ಚಾಟಿಸಲು ಮುಖ್ಯ ಕಾರಣ-ಆರ್ ಕೆ ನಗರ ಉಪ ಚುನಾವಣೆಯಲ್ಲಿ ಪಕ್ಷಕ್ಕಾದ ಹೀನಾಯ ಸೋಲು.

AIADMK Expels Over 150 Office-bearer From Two Districts

ಸೆಂಥಮಿಳನ್ ಅವರು 2011 ರಿಂದ 2016 ತನಕ ಇದ್ದ ಎಐಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದರು. ಡಿಎಂಕೆಯಲ್ಲಿದ್ದ ಇಳಮ್ ವಳುಥಿ ಅವರು 2013ರಲ್ಲಿ ಅಣ್ಣಾ ಡಿಎಂಕೆ ಸೇರಿದ್ದರು. ಇವರಿಬ್ಬರು ಶಶಿಕಲಾ ಬಣದ ಟಿಟಿವಿ ದಿನಕರನ್ ಬೆಂಬಲಿಗರಾಗಿದ್ದಾರೆ.

ದಿನಕರನ್ ಬೆಂಬಲಿತ 44 ಕಾರ್ಯಕರ್ತರಿಗೆ ಗೇಟ್ ಪಾಸ್ದಿನಕರನ್ ಬೆಂಬಲಿತ 44 ಕಾರ್ಯಕರ್ತರಿಗೆ ಗೇಟ್ ಪಾಸ್

ಪಕ್ಷದ ಶಿಸ್ತು ಉಲ್ಲಂಘನೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಹಿನ್ನಲೆಯಲ್ಲಿ ಪದಾಧಿಕಾರಿಗಳನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ, ಎಲ್ಲರೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಈ ಕೂಡಲೇ ಕಳೆದುಕೊಂಡಿದ್ದಾರೆ.

ಅಮಾನತುಗೊಂಡ ಸದಸ್ಯರ ಜತೆ ಯಾರಾದರೂ ಸಂಪರ್ಕ ಇಟ್ಟುಕೊಂಡರೆ ಅವರನ್ನು ಉಚ್ಚಾಟಿಸಲಾಗುವುದು ಎಂದು ಪನ್ನೀರ್ ಸೆಲ್ವಂ ಹಾಗೂ ಪಳನಿಸ್ವಾಮಿ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿಂದು ಹೇಳಿದರು.

English summary
Former Minister G Senthamizhan and senior leader Parithi Ilamvazhuthi were among the 150-odd office-bearers of the party's South Chennai (South) and Cuddalore West units who were booted out by AIADMK coordinator O Panneerselvam and co-coordinator K Palaniswami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X