Get Updates
Get notified of breaking news, exclusive insights, and must-see stories!

ಪಂಜಾಬ್ ಗೆಲುವಿನ ನಂತರ, ಎಎಪಿಗೆ ಸೇರಿದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು

ಹೊಸದಿಲ್ಲಿ ಮಾರ್ಚ್ 15: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಹರಿಯಾಣದ ಹಲವು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಬಿಜೆಪಿಯ ಗುರುಗ್ರಾಮ್ ಮಾಜಿ ಶಾಸಕ ಉಮೇಶ್ ಅಗರ್ವಾಲ್ ಮತ್ತು ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಿಜೇಂದ್ರ ಸಿಂಗ್ ಎಎಪಿಗೆ ಸೇರಿದ್ದಾರೆ ಎನ್ನಲಾಗಿದೆ.

ಐಎನ್‌ಎಲ್‌ಡಿ ನಾಯಕ ಮತ್ತು ಹರಿಯಾಣದ ಮಾಜಿ ಸಚಿವ ಬಲ್ಬೀರ್ ಸಿಂಗ್ ಸೈನಿ ಕೂಡ ಪಕ್ಷದ ಪ್ರಧಾನ ಕಚೇರಿಯಲ್ಲಿ ಎಎಪಿಗೆ ಸೇರ್ಪಡೆಯಾದರು ಎಂದು ತಿಳಿದು ಬಂದಿದೆ. ಎಎಪಿಗೆ ಸೇರ್ಪಡೆಗೊಂಡ ಹರಿಯಾಣದ ಇತರ ನಾಯಕರಲ್ಲಿ ಮಾಜಿ ಸಮಲ್ಖಾ ಶಾಸಕ (ಸ್ವತಂತ್ರ) ರವೀಂದ್ರ ಕುಮಾರ್, ಜಗತ್ ಸಿಂಗ್ (ಕಾಂಗ್ರೆಸ್), ಅಶೋಕ್ ಮಿತ್ತಲ್ (ಬಿಎಸ್ಪಿ), ಅಮನದೀಪ್ ಸಿಂಗ್ ವಾರಾಚ್ (ಬಿಜೆಪಿ), ಬ್ರಹ್ಮ್ ಸಿಂಗ್ ಗುರ್ಜರ್ (ಬಿಜೆಪಿ), ಸರ್ದಾರ್ ಗುರ್ಲಾಲ್ ಸಿಂಗ್ (ಸರ್ಪಂಚ್ ಹರಿಯಾಣ) ಅವರು ಸೇರಿದ್ದಾರೆ.

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಪಕ್ಷದ ರಾಜ್ಯಸಭಾ ಸಂಸದರಾದ ಸುಶೀಲ್ ಗುಪ್ತಾ ಮತ್ತು ಎನ್ ಡಿ ಗುಪ್ತಾ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಗುಪ್ತಾ ಅವರ ಸಮ್ಮುಖದಲ್ಲಿ ಅವರು ಎಎಪಿಗೆ ಸೇರ್ಪಡೆಗೊಂಡರು.

After Mammoth Punjab Win, BJP, Cong Leaders Make Beeline to AAP

ಪಂಜಾಬ್ ಚುನಾವಣೆಯ ನಂತರ, ದೇಶಾದ್ಯಂತ ಜನರು ಬದಲಾವಣೆಯ ಅಗತ್ಯವನ್ನು ಅನುಭವಿಸುತ್ತಿದ್ದಾರೆ, ದೆಹಲಿ ಮತ್ತು ಪಂಜಾಬ್ ನಡುವೆ ಇರುವ ಹರಿಯಾಣ ಕೂಡ ಬದಲಾವಣೆಯನ್ನು ಬಯಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ದೆಹಲಿಯಂತೆ ಪಂಜಾಬ್ ಕೂಡ ಧರ್ಮ ಮತ್ತು ಜಾತಿಯ ರಾಜಕೀಯವನ್ನು ಬಿಟ್ಟು ಕೆಲಸ ಆಧಾರಿತ ರಾಜಕೀಯವನ್ನು ಆರಿಸಿಕೊಂಡಿದೆ. ಆಮ್ ಆದ್ಮಿ ಪಕ್ಷವು ಹರಿಯಾಣದಲ್ಲಿ ಅಧಿಕ ಪ್ರಮಾಣದಲ್ಲಿ ವಿಸ್ತರಿಸುತ್ತದೆ ಎಂದು ಎಎಪಿ ಸಂಸದ ಸುಶೀಲ್ ಗುಪ್ತಾ ಸುದ್ದಿಗಾರರಿಗೆ ತಿಳಿಸಿದರು. ಎಎಪಿಗೆ ಹೊಸ ಸೇರ್ಪಡೆಗೊಂಡವರನ್ನು ಸ್ವಾಗತಿಸಿದ ಜೈನ್, ಹರಿಯಾಣದಲ್ಲಿ ಶಾಸಕರು ಮತ್ತು ಮಂತ್ರಿಗಳಾಗಿದ್ದ ಪ್ರಮುಖ ನಾಯಕರು ನಮ್ಮ ಪಕ್ಷದ ಕುಟುಂಬಕ್ಕೆ ಸೇರುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ಹೇಳಿದರು.

"ಪಂಜಾಬ್ ಮತ್ತು ದೆಹಲಿಯ ನಂತರ, ಹರಿಯಾಣದಲ್ಲಿ ಜನರು ಆಮ್ ಆದ್ಮಿ ಪಕ್ಷವು ಸರ್ಕಾರ ರಚಿಸುವಂತೆ ಹರಿಯಾಣದಲ್ಲಿ ಶೀಘ್ರದಲ್ಲೇ ಚುನಾವಣೆ ನಡೆಸಬೇಕು ಎಂದು ಹೇಳುತ್ತಿದ್ದಾರೆ, ಪಂಜಾಬ್ ಮತ್ತು ದೆಹಲಿ ನಂತರ, ಈ ಬದಲಾವಣೆಯು ಭಾರತದಾದ್ಯಂತ ಮುಂದುವರಿಯುತ್ತದೆ" ಎಂದು ಅವರು ಹೇಳಿದರು. ಜೊತೆಗೆ ದ್ವೇಷದ ರಾಜಕಾರಣವನ್ನು ಕೆಲಸದಿಂದ ಬದಲಾಯಿಸಲು ಎಎಪಿ ಬದ್ಧವಾಗಿದೆ ಎಂದು ಜೈನ್ ಹೇಳಿದರು.

ನಿಮ್ಮಲ್ಲಿ ಇಚ್ಛಾಶಕ್ತಿ ಇದ್ದಾಗ ಅಸಾಧ್ಯವಾದುದನ್ನು ಸುಲಭವಾಗಿ ಸಾಧ್ಯವಾಗಿಸಬಹುದು ಎಂಬುದನ್ನು ದೆಹಲಿಯಲ್ಲಿ ತೋರಿಸಿದ್ದೇವೆ ಎಂದರು.

Recommended Video

      ಹಿಂದಿ ಭಾಷಯ ಬಗ್ಗೆ ಒಲವು ತೋರಿದ ಆರಾಧ್ಯ ಬಚ್ಚನ್ ! | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+