ಪಾಕ್ ನಿಂದ ಕಳ್ಳ ಸಾಗಣೆ; 2700 ಕೋಟಿಯ 532 ಕೇಜಿ ಹೆರಾಯಿನ್ ವಶ
ಚಂಡೀಗಢ, ಜೂನ್ 30: ಅಟ್ಟಾರಿ ಗಡಿಯ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ನಲ್ಲಿ (ಐಸಿಪಿ) 2700 ಕೋಟಿ ರುಪಾಯಿ ಮೌಲ್ಯದ 532 ಕೇಜಿ ತೂಕದ ಹೆರಾಯಿನ್ ಅನ್ನು ಶನಿವಾರ ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ವ್ಯಾಪಾರಿಯೊಬ್ಬರು ಖರೀದಿ ಮಾಡಿದ್ದ ಕಲ್ಲು ಉಪ್ಪಿನ ಸರಕು ಸಾಗಣೆ ಮಾಡುವ ಮಧ್ಯೆ ಹೆರಾಯಿನ್ ಇಟ್ಟುಕೊಂಡು, ಪಾಕಿಸ್ತಾನದಿಂದ ಕಳ್ಳಸಾಗಣೆ ಮಾಡಲಾಗುತ್ತಿತ್ತು.
ಅಂತರರಾಷ್ಟ್ರೀಯ ಮಾದಕ ವಸ್ತು ಸಾಗಣೆಯ ಪ್ರಮುಖ ಜಾಲವೊಂದನ್ನು ಭೇದಿಸಿದ್ದು 532 ಕೇಜಿ ಹೆರಾಯಿನ್ ಹಾಗೂ 52 ಕೇಜಿ ಶಂಕಿತ ಮಾದಕ ದ್ರವ್ಯಗಳ ಮಿಶ್ರಣವನ್ನು ವಶಪಡಿಸಿಕೊಳ್ಳಲಾಗಿದೆ. ಭಾರತದ ಕಸ್ಟಮ್ಸ್ ಇತಿಹಾಸದಲ್ಲೇ ಇದೊಂದು ದಾಖಲೆ ಎಂದು ಕಸ್ಟಮ್ಸ್ ಕಮಿಷನರ್ ದೀಪಕ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಆರು ನೂರು ಬ್ಯಾಗ್ ಗಳನ್ನು ಸಂಪೂರ್ಣವಾಗಿ ಪರಿಶೀಲಿಸುವ ವೇಳೆ ಹದಿನೈದು ಬ್ಯಾಗ್ ಗಳಲ್ಲಿ ಮಾದಕ ದ್ರವ್ಯಗಳು ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆ ಹದಿನೈದೂ ಬ್ಯಾಗ್ ಗಳನ್ನು ಸಂಪೂರ್ಣ ಪರಿಶೀಲನೆ ನಡೆಸಿದ ಮೇಲೆ 532 ಕೇಜಿ ಹೆರಾಯಿನ್ ಹಾಗೂ 52 ಕೇಜಿ ಶಂಕಿತ ಮಾದಕ ದ್ರವ್ಯಗಳ ಮಿಶ್ರಣ ದೊರೆತಿದೆ.

ಈ ಸರಕನ್ನು ಆಮದು ಮಾಡಿಕೊಳ್ಳುತ್ತಿದ್ದ ಅಮೃತಸರದ ವರ್ತಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಜಮ್ಮು- ಕಾಶ್ಮೀರದ ಹಂದ್ವಾರದಲ್ಲಿನ ತಾರೀಕ್ ಅಹ್ಮದ್ ಲೋನ್ ಈ ಕಳ್ಳ ಸಾಗಣೆಯ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ. ಇನ್ನು ಕಾನೂನುಬದ್ಧ ರಫ್ತುದಾರ ಗುರುವಿಂದ್ ಸಿಂಗ್ ನನ್ನು ಬಂಧಿಸಲಾಗಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಲೋನ್ ಗೆ ಪರವಾನಗಿ ಸಿಕ್ಕಿತ್ತು.
ಮೂಲಗಳ ಪ್ರಕಾರ, ಸ್ಥಳೀಯ ವರ್ತಕ- ಹುಸೇನ್ ಪುರ್ ನ ಸಿಂಗ್ ಅಮೃತ್ ಸರಕ್ಕೆ ಸೇರಿದ ವ್ಯಕ್ತಿ. ಆತ ಪಾಕಿಸ್ತಾನದಲ್ಲಿನ ಗ್ಲೋಬ್ ವಿಷನ್ ಎಂಟರ್ ಪ್ರೈಸಸ್ ನಿಂದ ಉಪ್ಪು ಖರೀದಿಗೆ ಆರ್ಡರ್ ಮಾಡಿದ್ದ. ಅದೇ ಗ್ಲೋಬ್ ವಿಷನ್ ನಿಂದ ಆರುನೂರು ಉಪ್ಪಿನ ಬ್ಯಾಗ್ ಬಂದಿದ್ದವು. ಜೂನ್ ಇಪ್ಪತ್ತಾರರಂದು ಅಟ್ಟಾರಿಗೆ ಬಂದ ಸರಕು ಅಲ್ಲೇ ಇತ್ತು.
ಸ್ಥಳೀಯ ವರ್ತಕ ಶನಿವಾರ ಐಸಿಪಿಗೆ ಬಂದು, ಉಪ್ಪಿನ ಬ್ಯಾಗ್ ಅನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದಾನೆ. ಆಗ ಅಧಿಕಾರಿಗಳಿಗೆ ಅನುಮಾನ ಮೂಡಿ, ಕೆಲವು ಬ್ಯಾಗ್ ಗಳನ್ನು ತೆರೆದಿದ್ದಾರೆ. ಆಗ ಕನಿಷ್ಠ ಒಂದು ಕೇಜಿಯ ಡ್ರಗ್ ಪ್ಯಾಕೆಟ್ ಪ್ರತಿ ಬ್ಯಾಗ್ ನಲ್ಲೂ ಕಂಡು ಬಂದಿದೆ. ಈ ಹಿಂದೆ ಕೂಡ ಇದೇ ತಂತ್ರ ಮಾಡಿ, ಮಾದಕ ದ್ರವ್ಯಗಳನ್ನು ಭಾರತದೊಳಕ್ಕೆ ತಂದಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications